Prabhas : ಶಸ್ತ್ರ ಚಿಕಿತ್ಸೆಗೆ ಒಳಗಾಗ್ತಿರುವ ‘ಬಾಹುಬಲಿ’ .!! ಏನಾಯ್ತು..??
ಬಾಹುಬಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ನಟ ಪ್ರಭಾಸ್ ಅವರು ಈಗ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಸಿಯಿದ್ದಾರೆ.. ಪ್ರಭಾಸ್ ಅವರ ನಟನೆಯ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು.. ಆದ್ರೆ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡಿಲ್ಲ..
ಸದ್ಯ ಅವರ ಮುಂಬರು ಸಿನಿಮಾ ಪ್ರಶಾಂತ್ ನೀಲ್ ಸಾರಥ್ಯ , ಹೊಂಬಾಳೆ ಫಿಲಮ್ಸ್ ನಿರ್ಮಾಣದ ಸಲಾರ್ , ಆದಿ ಪುರುಷ್ ಸಿನಿಮಾಗಳ ಮೇಲೆ ಈಗ ಅವರ ಅಭಿಮಾನಿಗಳ ನಿರೀಕ್ಷೆಯಿದೆ..
ಇದೆಲ್ಲದ್ರ ನಡುವೆ ಪ್ರಭಾಸ್ ಕೆಲ ಕಾಲದ ವರೆಗೂ ಸಿನಿಮಾಗಳಿಂದ ಬ್ರೇಕ್ ಪಡೆಯಲಿರುವ ಸುದ್ದಿಇ ಹರಿದಾಡ್ತಿದೆ… ಇದಕ್ಕೆ ಕಾರಣ ಪ್ರಭಾಸ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನುವುದು..
ಹೌದು..!!! ಪ್ರಭಾಸ್ಗೆ ಬಹುದಿನಗಳಿಂದಲೂ ಮೊಣಕಾಲಿನ ಸಮಸ್ಯೆ ಕಾಡುತ್ತಿದ್ದು ಇತ್ತೀಚೆಗೆ ಸಮಸ್ಯೆ ಉಲ್ಬಣಗೊಂಡಿದೆ. ಹಾಗಾಗಿ ಈಗ ಶಸ್ತ್ರಚಿಕಿತ್ಸೆಗೆ ಕಡ್ಡಾಯವಾಗಿ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ..
2019 ರಲ್ಲಿ ಸಾಹೋ ಸಿನಿಮಾದ ಚಿತ್ರೀಕರಣದ ವೇಳೆ ಪ್ರಭಾಸ್ ಗಾಯಗೊಂಡಿದ್ದರು. ಗಾಯ ತೀವ್ರವಾಗಿದ್ದ ಕಾರಣ ಆಗ ಕೆಲ ಕಾಲ ವಿಶ್ರಾಂತಿ ಪಡೆದಿದ್ದರು. ಆಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿತ್ತು ಆದರೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಕಾರಣ ಶಸ್ತ್ರಚಿಕಿತ್ಸೆ ಮುಂದೂಡಿದ್ದರು. ನಂತರ ಕೋವಿಡ್ ಬಂದ ಕಾರಣ ಆಗಲೂ ಶಸ್ತ್ರಚಿಕಿತ್ಸೆ ಮಾಡಿಸಲಾಗಲಿಲ್ಲ.
ಬಳಿಕವೂ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾದರು.. ಆಗಲೂ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದರು.. ಆದರೆ ಈಗ ಸಮಸ್ಯೆ ಉಲ್ಬಣಗೊಂಡಿರುವ ಕಾರಣ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲೇ ಬೇಕಾಗಿದೆ ಎನ್ನಲಾಗಿದ್ದು , ಪ್ರಭಾಸ್ ವಿದೇಶದಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ.