ಇತ್ತೀಚೆಗಷ್ಟೇ ಅದ್ಧೂರಿಯಾಗಿ ವಿವಾಹವಾದ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಅವರು ಮದುವೆ ಮಾರನೇ ದಿನವೇ ವಿವಾದಿಂದ ಸುದ್ದಿಯಲ್ಲಿರೋದು ಗೊತ್ತಿದೆ..
ತಿರುಪತಿಯಲ್ಲಿ ಚಪ್ಪಲಿ ಧರಿಸಿ ನಯನತಾರಾ ಪ್ರವೇಶಿಸಿದ್ದ ಫೋಟೋಗಳು ವೈರಲ್ ಆಗಿ ನೆಟ್ಟಿಗರ ಕಣ್ಣು ಕೆಂಪಾಗಿಸಿತ್ತು.. ಆ ನಂತರ ನಯನತಾರಾ ಪರವಾಗಿ ಪತಿ ವಿಘ್ನೇಶ್ ಕ್ಷಮೆಯಾಚಿಸಿದ್ದೂ ಉಂಟು..
ಆದ್ರೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.. ಅಷ್ಟೇ ಅಲ್ಲ ತಿರುಪಪತಿ ದೇವಸ್ಥಾನದ ವತಿಯಿಂದ ಈ ಜೋಡಿಗೆ ಲೀಗಲ್ ನೋಟೀಸ್ ಸಹ ಕಳುಹಿಸಲಾಗಿದೆ..
ತಿರುಪತಿ ದೇವಸ್ಥಾನದ ಆವರಣದಲ್ಲಿ ಖಾಸಗಿ ಕ್ಯಾಮೆರಾಗಳಿಗೆ ಅವಕಾಶವಿಲ್ಲ. ಆದರೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ ತಮ್ಮೊಂದಿಗೆ ಖಾಸಗಿ ಕ್ಯಾಮೆರಾಮೆನ್ ಗಳನ್ನು ಕರೆದುಕೊಂಡು ಬಂದಿದ್ದರು. ಅಲ್ಲದೇ, ಮಾತಾ ಬೀದಿಯಲ್ಲಿ ನಯನತಾರಾ ಚಪ್ಪಲಿ ಧರಿಸಿಕೊಂಡು ಓಡಾಡಿದ್ದಾರೆ. ಈ ಕಾರಣದಿಂದಾಗಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎನ್ನಲಾಗ್ತಿದೆ..
ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್ ನ ಮುಖ್ಯ ವಿಜಿಲೆನ್ಸ್ ಸೆಕ್ಯುರಿಟಿ ಆಫೀಸರ್ ನರಸಿಂಹ ಕಿಶೋರ್, ಈ ಕುರಿತು ಮಾತನಾಡಿ, ಎರಡು ಪ್ರಮುಖ ನಿಯಮಗಳನ್ನು ಅವರು ಉಲ್ಲಂಘಿಸಿದ್ದಕ್ಕಾಗಿ ಲೀಗ್ ನೋಟಿಸ್ ಕಳುಹಿಸಲಾಗುತ್ತಿದೆ ಎಂದಿದ್ದಾರೆ.