ಕನ್ನಡದ ರಾಜರತ್ನನಿಗೆ ಗೀತನಮನ
ಉಸಿರು ಪೂರ್ತಿ ಹೋದರು ಹೆಸರು ಪೂರ್ತಿ ನೆನಪಿದೆ… ನೀನು ಇರದೇ ಹೋದರೂ ನಿನ್ನ ನಗೆಯ ಬೆಳಕಿದೆ….ಈಗೊಂದು ಹಾಡಿನ ಸಾಹಿತ್ಯದ ಮೂಲಕ ಯೋಗರಾಜ್ ಭಟ್ ಅವರು ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನವನ್ನ ಅರ್ಪಿಸಿದ್ದಾದರೆ.
ಈ ಹಾಡನ್ನ ಯೋಗರಾಜ್ ಭಟ್ ಅವು ಪಂಚರಂಗಿ ಯ್ಯೂಟೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದು ಪುನರ್ವಸು ಭಟ್ ಅವರು ಹಾಡಿದ್ದಾರೆ.ಯೋಗರಾಜ್ ಭಟ್ ಅವರು ಈ ಹಿಂದೆ ಪುನೀತ್ ಗಾಗಿ ಪರಮಾತ್ಮ ಚಿತ್ರವನ್ನ ನಿರ್ದೇಶಿಸಿದ್ದರು.
ಉಸಿರು ಪೂರ್ತಿ ಹೋದರೂ
ಹೆಸರು ಪೂರ್ತಿ ನೆನಪಿದೆ..
ನೀನು ಇರದೆ ಹೋದರೂ
ನಿನ್ನ ನಗೆಯ ಬೆಳಕಿದೆ..
ಮನೆಯ ಮುದ್ದು ಕೂಸಿಗೆ
ನಾಡ ನಮನ…
ಖಂಡಿತ ಮರಣವಿದಲ್ಲ
ಜನಿಸಿದೆ ನೀನಿಂದು..
ನಮ್ಮೊಲವಿನ ಪರಮಾತ್ಮ
ಶಾಶ್ವತ ನೀನೆಂದು..
ಉಸಿರು ಮಾತ್ರ ಹೋಗಿದೆ
ಹೆಸರು ಪೂರ್ತಿ ನೆನಪಿದೆ
ಬಾಳ ಪಯಣ ಮುಗಿದರು
ಸ್ಮೃತಿಯ ಪಯಣ ಮುಗಿವುದೆ..?
ಬೆಳ್ಳಿ ಪರದೇ ಚುಕ್ಕಿಗೆ
ನಲ್ಮೆ ನಮನ.