ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಅವರ ಸಾವಿಗೆ ಕಂಬನಿ ಮಿಡಿಯದ ಹೃದಯವೇ ಇಲ್ಲವೆನ್ನಬಹುದು ಕನ್ನಡ ಚಿತ್ರರಂಗವಲ್ಲದೆ ಬೇರೇ ಭಾಷೆಯ ಚಿತ್ರ ರಂಗದವರು ಅಪ್ಪು ಸಾವಿಗೆ ಕಂಬನಿಗೆರದಿದ್ದಾರೆ. ಇಂದು ಸಹಾ ಬಹು ಭಾಷೆ ಕಲಾವಿದೆ ಜಯಪ್ರದ ಅವರು ಪುನೀತ್ ಮನೆಗೆ ಬಂದು ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಸದಾಶಿವನಗರ ನಿವಾಸಕ್ಕೆ ಬಹುಭಾಷಾ ಭೇಟಿ ನೀಡಿದ ನಟಿ ಜಯಪ್ರದಾ.
‘ರಾಜ್ ಕುಟುಂಬದಲ್ಲಿ ನಾನು ಕೂಡ ಸದಸ್ಯಳಾಗಿದ್ದೆ. ತುಂಬಾ ಚಿಕ್ಕವಯಸ್ಸಿನಲ್ಲೇ ನಮ್ಮನ್ನೆಲ್ಲಾ ಬಿಟ್ಟು ಪುನೀತ್ ಹೋಗಿರೋದು ದುರಂತ. ಮನಸ್ಸಿಗೆ ತುಂಬಾ ಕಷ್ಟ ಆಗ್ತಿದೆ. ಅಪ್ಪು ಸಾವು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ’ ಎಂದು ಭಾವುಕರಾದರು.
ನಟಿ ರಾಗಿಣಿ ಸಹಿತ ಇಂದು ಅಪ್ಪು ಮನೆಗೆ ಬೇಟಿ ನೀಡಿ ಪತ್ನಿ ಮಕ್ಕಳು ಮತ್ತು ಶಿವಣ್ಣ ಜೊತೆ ಮಾತನಾಡಿದರು. ನಿನ್ನೆ ತಮಿಳು ನಟ ಸೂರ್ಯಕೂಡ ಬಂದು ಪುನೀತ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.