ಬೆಂಗಳೂರು: ಡಿಸೆಂಬರ್ 24ರಂದು ತೆರೆ ಕಂಡ ಡಾಲಿ ಧನಂಜಯ ಅಭಿನಯದ “ಬಡವ ರಸ್ಕಲ್” ಅದ್ಭುತ ಪ್ರದರ್ಶನ ಕಾಣುತ್ತಿದೆ. ಈಗ ಡಾಲಿ ಧನಂಜಯ ಅಭಿಮಾನಿಗಳಿ ಗುಡ್ ನ್ಯೂಸ್ ಸಿಕ್ಕಿದೆ. ಅದು ಚಿತ್ರವು ಸಧ್ಯ ಓಟಿಟಿ ಬರುತ್ತಿದೆ. ಅಭಿಮಾನಿಗಳು ಕಾಯುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ನಟ ರಾಕ್ಷಸ ಡಾಲಿ ಧನಂಜಯ ಮೊದಲ ಬಾರಿಗೆ ನಿರ್ಮಾಪಕನಾಗಿ ಗೆದ್ದಿದ್ದಾರೆ. ಈಗ ವರು ಅಭಿನಯದ ಬಡವ ರಾಸ್ಕಲ್ ಚಿತ್ರವು ಗಣರಾಜ್ಯೋತ್ಸವ (ಜನವರಿ 26) ರಂದು ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಪ್ರಸಾರವಾಗಲಿದೆ. ಶಂಕರ ಗುರು ನಿರ್ದೇಶಿಸಿರುವ ಚಿತ್ರವು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಚಿತ್ರದಲ್ಲಿ ನಾಯಕನಾಗಿ ಡಾಲಿ ಧನಂಜಯ, ನಾಯಕಿಯಾಗಿ ಅಮೃತಾ ಮತ್ತು ಧನಂಜಯ ಅವರ ತಂದೆ ಪಾತ್ರದಲ್ಲಿ ರಂಗಾಯಣ ರಘು, ತಾಯಿ ಪಾತ್ರದಲ್ಲಿ ತಾರಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರವೂ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡು, ಜನರಿಂದ ಮೆಚ್ಚುಗೆ ಪಡೆದಿದ್ದು, ಇದೀಗ ವೂಟ್ ಸೆಲೆಕ್ಟ್ ಮೂಲಕ ಓಟಿಟಿಯಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ.