777 ಚಾರ್ಲಿ ಚಿತ್ರ ನೋಡಿ ಸಿಎಂ ಬಸವರಾಜ್ ಬೊಮ್ಮಾಯಿ ಕಣ್ಣೀರು
777 ಚಾರ್ಲಿ ಚಿತ್ರ ನೋಡಿದವರೆಲ್ಲ ಕಣ್ಣೀರು ಹಾಕುತ್ತಾ ಹೊರಬರುತ್ತಿದ್ದಾರೆ, ಚಿತ್ರ ನಗಿಸಿ, ಅಳಿಸಿ ಮನಸ್ಸನ್ನ ಆದ್ರಗೊಳಿಸುತ್ತಿದೆ. ಇದಕ್ಕೆ ನಾಡದೊರೆ ಸಿ ಎಂ ಬೊಮ್ಮಾಯಿ ಕೂಡ ಹೊರತಲ್ಲ. ಶ್ವಾನ ಪ್ರೇಮಿಯೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವರು 777 ಚಾರ್ಲಿ’ ಚಿತ್ರವನ್ನು ವೀಕ್ಷಿಸಿ ಭಾವುಕರಾಗಿದ್ದಾರೆ.
ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ನಿನ್ನೆ (ಜೂನ್ 13) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘777 ಚಾರ್ಲಿ’ ಚಿತ್ರವನ್ನು ವೀಕ್ಷಿಸಿದರು. ಸಿ ಎಂ ಗೆ ಉಡುಪಿ ಶಾಸಕ ರಘುಪತಿ ಭಟ್, ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್ ಸಾಥ್ ನೀಡಿದರು. ಈ ವೇಳೆ ನಿರ್ದೇಶಕ ಕಿರಣ್ ರಾಜ್, ನಟ ರಕ್ಷಿತ್ ಶೆಟ್ಟಿ, ನಟಿ ಸಂಗೀತಾ ಶೃಂಗೇರಿ ಕೂಡ ಹಾಜರಿದ್ದರು.
‘777 ಚಾರ್ಲಿ’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಶ್ವಾನ ಚಾರ್ಲಿ ಸಾವನ್ನಪ್ಪುತ್ತದೆ. ಆ ದೃಶ್ಯವನ್ನು ಕಂಡ ಬಸವರಾಜ ಬೊಮ್ಮಾಯಿ ಅವರು ತಮ್ಮ ಶ್ವಾನ ಸನ್ನಿ ಅಗಲಿದ ಕ್ಷಣವನ್ನು ನೆನೆದು ದುಃಖಿತರಾದರು.
ಸಿ ಎಂ ಬೊಮ್ಮಾಯಿ ಅವರು ಶ್ವಾನ ಪ್ರೇಮಿ. ತಮ್ಮ ಮನೆಯಲ್ಲಿ ಸನ್ನಿ ಎಂಬ ಹೆಸರಿನ ಶ್ವಾನವೊಂದನ್ನು ಸಾಕಿದ್ದರು. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಸನ್ನಿ ವಯೋಸಹಜವಾಗಿ ಸಾವನ್ನಪ್ಪಿತ್ತು. ಅಂದು ಸಹ ಬೊಮ್ಮಾಯಿ ಅವರು ಕಣ್ಣೀರು ಹಾಕಿದ್ದರು.
ಧರ್ಮ ಮತ್ತು ಚಾರ್ಲಿ ಎಂಬ ನಾಯಿ ನಡುವಿನ ಭಾಂಧವ್ಯದ ಕಥೆ ಹೇಳುವ ಸಿನಿಮಾಗೆ ಪ್ರೇಕ್ಷರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಮಲ್ ಹಾಸನ್ ‘ವಿಕ್ರಮ್’ ನಲ್ಲಿ ಸೂರ್ಯ ರೋಲೆಕ್ಸ್ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ