ಇತ್ತೀಚೆಗಷ್ಟೇ ಬಾಲಿವುಡ್ ನ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರದ ಟ್ರೇಲರ್ ರಿಲೀಸ್ ಆಗಿದ್ದು , ಟ್ರೇಲರ್ ನೋಡಿರುವ ಫ್ಯಾನ್ಸ್ ಫಿದಾ ಆಗಿದ್ಧಾರೆ.. ಇದೊಂದು ಸೂಪರ್ ನ್ಯಾಚುರಲ್ , ಫ್ಯಾಂಟಸಿ ಥ್ರಿಲ್ಲರ್ ಸಿನಿಮಾವಗಿದ್ದು ಜನರಂತೂ ಸಿನಿಮಾ ಬಗ್ಗೆ ಥ್ರಿಲ್ ಆಗಿದ್ದಾರೆ..
ಸಿನಿಮಾದಲ್ಲಿ ರಣಬೀರ್ , ಆಲಿಯಾ , ಅಮಿತಾಬ್ , ಮೌನಿ ರಾಯ್ , ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಆದ್ರೆ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಟ್ರೇಲರ್ ಬಗ್ಗೆ ಸಾಕಷ್ಟು ನೆಟ್ಟಿಗರು ಕೆಂಡಕಾರಿದ್ದೂ ಉಂಟು..
ಯಾಕಂದ್ರೆ ಈ ಟ್ರೇಲರ್ ನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪ ಮಾಡಿದ್ರು.. ಕಾರಣ ದೇಗುಲದೊಳಗೆ ರಣಬೀರ್ ಶೂ ಧರಿಸಿದ್ದಾರೆ ಎಂದು ಟ್ರೇಲರ್ ನಲ್ಲಿ ಕೆಲವರು ಗುರುತಿಸಿದ್ದರು..
ಆದ್ರೆ ಇದೀಗ ಈ ಬಗ್ಗೆ ನಿರ್ದೇಶಕ ಅಯಾನ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಸಿನಿಮಾದಲ್ಲಿ ನಮ್ಮ ಸಂಸ್ಕೃತಿಯನ್ನು, ಕಲೆ, ಆಚರಣೆಯನ್ನು ಬಿಂಬಿಸುವಂತಹ ಪ್ರಯತ್ನ ಮಾಡಿದ್ದೇನೆ. ನಮಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರ ಬಗ್ಗೆ ತುಂಬಾ ಗೌರವವಿದೆ. ಹಾಗಾಗಿ ನಾವು ಯಾರಿಗೂ ನೋವನ್ನು ಮಾಡುವಂತಹ ದೃಶ್ಯಗಳನ್ನು ಈ ಸಿನಿಮಾದಲ್ಲಿ ಇಟ್ಟಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ..