ಇತ್ತೀಚೆಗೆ ಸಾಯಿ ಪಲ್ಲವಿ ನೀಡಿದ್ದ ಹೇಳಿಕೆ ಸಾಕಷ್ಟು ಸಂಚಲನವನ್ನೇ ಸೃಷ್ಟಿ ಮಾಡಿತ್ತು.. ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು ಸಾಯಿ ಪಲ್ಲವಿ ನೀಡಿದ್ದ ಆ ಒಂದು ಹೇಳಿಕೆ. ರಾಮನ ಹೆಸರಲ್ಲಿ ಗೋಕಳ್ಳನ ಹತ್ಯೆ ಮಾಡಿದ್ದು ಕಾಶ್ಮೀರಿ ಪಂಡಿತರ ಹತ್ಯೆಗೆ ಸಮ ಎಂದು ಸಾಯಿ ಪಲ್ಲವಿ ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ.. ಜೊತೆಗೆ ಹಿಂದೂ ಮುಖಂಡರು ದೂರನ್ನೂ ಸಹ ದಾಖಲಿಸಿದ್ದಾರೆ..
ಆದ್ರೆ ಸಾಯಿ ಪಲ್ಲವಿಗೆ ಅನೇಕರು ಬೆಂಬಲಿಸಿದ್ದಾರೆ ಕೂಡ.. ಶನಿವಾರ ಸಾಯಿ ಪಲ್ಲವಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು.. ಇದಕ್ಕೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ತಟಸ್ಥ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನಮ್ಮ ನಂಬಿಕೆಗಳೊಂದಿಗೆ ನಮ್ಮನ್ನು ಗುರುತಿಸಿಕೊಳ್ಳುವ ಮೊದಲು ನಾವು ಉತ್ತಮ ಮನುಷ್ಯರಾಗಬೇಕು.
ಮೂರು ತಿಂಗಳ ಹಿಂದೆ ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ನೋಡಿದ್ದೆ.
ಕಾಶ್ಮೀರಿ ಪಂಡಿತರ ಅವಸ್ಥೆ, ಆ ಜನರ ಸಂಕಷ್ಟ ಕಂಡು ನಾನು ವಿಚಲಿತಳಾಗಿದ್ದೇನೆ.
ಇದೇ ಸಂದರ್ಭದಲ್ಲಿ ಕೋವಿಡ್ ಸಮಯದಲ್ಲಿ ಜನಸಮೂಹದ ಹತ್ಯೆಯ ಘಟನೆಯೊಂದಿಗೆ ತಾನು ಎಂದಿಗೂ ಬರಲು ಸಾಧ್ಯವಿಲ್ಲ.
ಯಾವುದೇ ರೂಪದಲ್ಲಿ ಹಿಂಸೆ ತಪ್ಪು ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ದೊಡ್ಡ ಪಾಪ ಎಂದು ನಾನು ನಂಬುತ್ತೇನೆ.
ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಹಕ್ಕು ನಮಗೆ ಇಲ್ಲ.
ನಾನು ಎಂಬಿಬಿಎಸ್ ಪದವೀಧರೆಯಾಗಿ ಎಲ್ಲರ ಜೀವವೂ ಮುಖ್ಯ ಎಂದು ನಂಬುತ್ತೇನೆ ಎಂದು ಪಲ್ಲವಿ ವಿಡಿಯೋ ಮೂಲಕ ತಿಳಿಸಿದ್ದಾರೆ.