Chethan Ahimsa : ‘ಪಾಕಿಸ್ತಾನ್ ಜಿಂದಾಬಾದ್’, ವಾಕ್ ಸ್ವಾತಂತ್ರ್ಯ – ಚೇತನ್ ಟ್ವೀಟ್
ನಟ ಚೇತನ್ ಯಾವುದೇ ಹೇಳಿಕೆ ಇದ್ರೂ ನೆಗೆಟಿವ್ ಆಗಿರೋದನ್ನ ಪಾಸಿಟಿವ್ ಪಾಸಿಟಿವ್ ಆಗಿರೋದನ್ನ ನೆಗೆಟಿವ್ ಆಗಿ ಮಾತನಾಡುತ್ತಾರೆನೋ ಅನ್ನಿಸುವಂತೆಯೇ ಅವರ ಹೇಳಿಕೆಗಳಿರುತ್ವೆ..
ವಿವಾದಾತ್ಮವಾಗಿಯೇ ಮಾತನಾಡ್ತಾ ಇರುತ್ತಾರೆ.. ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿರೋ ಎರೆಡು ಪ್ರಕರಣಗಳ ವಿಚಾರದಲ್ಲಿ ಒಂದರ ಬಗ್ಗೆ ಮಾತನಾಡಿದ್ದಾರೆ ಚಿಂತಕ ಚೇತನ್ ಅಹಿಂಸಾ ಅವರು..
ಒಂದೆಡೆ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡಿರುವ ಶ್ರದ್ಧಾ ಮರ್ಡರ್ ಕೇಸ್ ನಾನಾ ತಿರುವುಗಳನ್ನ ಪಡೆದಿದೆ.. ಲವ್ ಜಿಹಾದ್ ಎಂಬ ಮಾತುಗಳೂ ಚರ್ಚೆಯಾಗ್ತಿದೆ.. ಆದ್ರೆ ಈ ಬಗ್ಗೆ ಮಾತ್ರ ಚಕಾರ ತ್ತಿರಲಿಲ್ಲ ಚೇತನ್..
ಇತ್ತ ನಗರದ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಯನ್ನ ಕೂಗಿದ್ದು ಇಡೀ ದೇಶಾದ್ಯಂತ ಜನರ ಕಣ್ ಕೆಂಪಾಗಿಸಿದೆ..
ಆದ್ರೆ ಇದನ್ನ ತಪ್ಪೇ ಅಲ್ಲ ಎಂದಿದ್ದಾರೆ ಚೇತನ್.. ಅವರ ಪೋಸ್ಟ್ ನೋಡಿ ನೆಟ್ಟಿಗರು ಮತ್ತಷ್ಟು ಕೆಂಡಾಮಂಡಲರಾಗಿದ್ದಾರೆ..
ಹೌದು..!
ಈ ಕುರಿತು ಚೇತನ್ ಟ್ವಿಟ್ ಮಾಡಿರುವ ಚೇತನ್ ‘ನಿನ್ನೆ ನಡೆದ ಕಾಲೇಜು ಫೇಸ್ಟ್ ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತಗೆದುಕೊಳ್ಳಲಾಗಿದೆ. ಇದು ಅಸಂಬಂಧ ಮತ್ತು ಅಪಾಯಕಾರಿ’ ಎಂದು ಕರೆದಿದ್ದಾರೆ..
ಇಷ್ಟಕ್ಕೇ ಸುಮ್ಮನಾಗಿಲ್ಲ..
ಮುಂದುವರೆದು.. ‘ಪಾಕಿಸ್ತಾನದ ಜನರು ನಮ್ಮ ಸಹೋದರರು ಮತ್ತು ಸಹೋದರಿಯರು ಶತ್ರುಗಳಲ್ಲ. ವಿದ್ಯಾರ್ಥಿಗಳನ್ನು ಥಳಿಸಿ ಬೆದರಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಅಪಾಯಕಾರಿ. ಪಾಕಿಸ್ತಾನಕ್ಕೆ ಜೈಕಾರ ಹಾಕೋದು ವಾಕ್ ಸ್ವಾತಂತ್ರ್ಯ’ ಎಂದು ಹೇಳಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ…