Kantara : ಸಿನಿಮಾ ನೋಡಿ ಕಣ್ಣೀರಿಟ್ಟ ಸುನಿಲ್ ಶೆಟ್ಟಿ ಹೇಳಿದ್ದೇನು..!!??
ಕಾಂತಾರವನ್ನ ರಾಜಕಾರಣಿಗಳು ,ಸೆಲೆಬ್ರಿಟಿಗಳು , ಪರ ಭಾಷಾ ಸ್ಟಾರ್ ಗಳು , ಅಭಿಮಾನಿಗಳು , ಪರ ಭಾಷಾ ಪ್ರೇಕ್ಷಕರೂ ಮೆಚ್ಚಿಕೊಂಡಿದ್ಧಾರೆ..
ಬಾಕ್ಸ್ ಆಫೀಸ್ ಲೂಟಿ ಮಾಡ್ತಿದೆ.. ಪರ ಭಾಷೆಗಳಲ್ಲೂ ಅಬ್ಬರಿಸುತ್ತಿದ್ದು , ರಾಜಕೀಯ ಗಣ್ಯರು , ಎಲ್ಲಾ ಭಾಷೆಯ ಸ್ಟಾರ್ ಗಳಿಂದ ಸಿನಿಮಾ ಮೆಚ್ಚುಗೆ ಪಡೆಯುತ್ತಾ ದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದೆ..
ರಿಷಬ್ ಶೆಟ್ಟಿ ನಿರ್ದೇಶಿಸಿ , ನಟಿಸಿ , ಹೊಂಬಾಳೆ ಫಿಲಮ್ಸ್ ನಿರ್ಮಿಸಿರು ಸಿನಿಮಾ ದಿನದಿಂದ ದಿನಕ್ಕ3ೆ ಹೊಸ ಹೊಸ ದಾಖಲೆಗಳನ್ನ ಬರೆಯುತ್ತಾ ಮುಂದೆ ಸಾಗ್ತಿದೆ..
ಸಿನಿಮಾವನ್ನ ಅನುಷ್ಕಾ ಶೆಟ್ಟಿ , ಕಂಗನಾ ರಣೌತ್ , ಶಿಲ್ಪಾ ಶೆಟ್ಟಿ ಸಹ ವೀಕ್ಷಿಸಿ ಹೊಗಳಿದ್ದು , ಇತ್ತೀಚೆಗೆ ಸುನಿಲ್ ಶೆಟ್ಟಿ ಸಿನಿಮಾ ನೋಡಿ ಭಾವಕರಾಗಿ ಕಣ್ಣೀರಿಟ್ಟಿದ್ದಾರೆ..
ನಾನು ಕಾಂತಾರ ಸಿನಿಮಾ ನೋಡಿದೆ. ನನಗೆ ಅರಿವಿಲ್ಲದಂತೆ ಕಣ್ಣೀರು ಬಂತು. ತುಂಬಾ ಭಾವುಕನಾಗಿಬಿಟ್ಟೆ. ಯಾಕೆಂದರೆ, ನಾನು ಆ ನೆಲದವನು. ಅಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಕಾಂತಾರ ಸಿನಿಮಾ ನನಗೆ ಬೇಗ ಕನೆಕ್ಟ್ ಆಯಿತು ಎಂದಿದ್ದಾರೆ..
ರಿಷಬ್ ಶೆಟ್ಟಿ ನಟನೆಯನ್ನ ಹಾಗೂ ಅವರ ನಿರ್ದೇಶನವನ್ನೂ ಸಹ ಸುನಿಲ್ ಶೆಟ್ಟಿ ಕೊಂಡಾಡಿದ್ದಾರೆ..