Rashmika : ಹಂಸಲೇಖ , ಎಸ್ ಪಿಬಿ , ಎಸ್ ಜಾನಕಿ ಅವರಿಗೆ ಅವಮಾನ ಮಾಡಿದ್ರಾ ರಶ್ಮಿಕಾ..??
ಕನ್ನಡ ಮೂಲಕ ಸಕ್ಸಸ್ ಕಂಡು ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿರುವ ಟಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಾಲಿವುಡ್ ನಲ್ಲೇ ಸೆಟಲ್ ಆಗೋ ಪ್ರಯತ್ನದಲ್ಲಿರೋ ಹಾಗೆ ಕಾಣ್ತಿದೆ.. ಮೊದಲ ಸಿನಿಮಾ ಗುಡ್ ಬೈ ಅಟ್ಟರ್ ಫ್ಲಾಪ್ ಆದ ನಂತರ ರಶ್ಮಿಕಾ ಇದೀಗ ೆರಡನೇ ಸಿನಿಮಾ ಮಿಷನ್ ಮಜ್ನು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ..
ಪ್ರಚಾರದ ವೇಳೆ ರಶ್ಮಿಕಾ ಬಾಲಿವುಡ್ ಹೊಗಳೋ ಭರದಲ್ಲಿ ನಮ್ಮ ಸೌತ್ ಇಂಡಸ್ಟ್ರಿಯನ್ನ ತೆಗಳಿದ್ದರು.. ಇದೇ ಹೇಳಿಕೆ ರಶ್ಮಿಕಾ ಪಾಲಿಗೆ ಮುಳುವಾಗಿದೆ..
ಟಾಲಿವುಡ್ ನಟಿ ರಶ್ಮಿಕಾ ಈ ಮಟ್ಟಕ್ಕೆ ಬೆಳೆಯೋಕೆ ಮುಖ್ಯ ಕಾರಣ ಕನ್ನಡ ಸಿನಿಮಾ ಆ ನಂತರ ತೆಲುಗು ಇಂಡಸ್ಟ್ರಿ.. ಆದ್ರೆ ಬಾಲಿವುಡ್ ಅಂದ್ರೆ ರೋಮ್ಯಾಂಟಿಕ್.. ರೋಮ್ಯಾಂಟಿಕ್ ಅಂದ್ರೆ ಬಾಲಿವುಡ್ ಮಾತ್ರ.. ಸೌತ್ ಸಿನಿಮಾಘಳಲ್ಲಿ ಕೇವಲ ಐಟಂ ಹಾಡುಗಳು ಮಸಾಲಾ ಹಾಡುಗಳಿರುತ್ವೆ ಎಂದು ಬಾಲಿವುಡ್ ಮಂದಿಯನ್ನ ಓಲೈಸಲು ಹೋಗಿ ಈಗ ಹಿಗ್ಗಾ ಮುಗ್ಗಾ ಟ್ರೋಲ್ ಆಗ್ತಿದ್ದಾರೆ..
ರಶ್ಮಿಕಾ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ವಿ.ನಾಗೇಂದ್ರ ಪ್ರಸಾದ್ ಅವರು , ರಶ್ಮಿಕಾ ಮಂದಣ್ಣ ಅವರ ಮಾತುಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಆ ಹುಡುಗಿಗೆ ಪಾಪ ಚಿತ್ರಗೀತೆಯ ಬಗ್ಗೆ ಏನು ಗೊತ್ತು.. ಅವರು ಕಾಲೇಜಿನಿಂದ ಸಿನಿಮಾಗೆ ಬಂದಿದ್ದು. ಅವರದ್ದೊಂದು ಚಿಕ್ಕ ಪ್ರಪಂಚ. ಅಷ್ಟರೊಳಗೆ ಮಾತ್ರ ಯೋಚನೆ ಮಾಡಿರುತ್ತಾರೆ. ಅವರ ಹೇಳಿಕೆಗಳಿಗೆ ಮಾನ್ಯತೆ ಕೊಟ್ಟರೆ, ಅವರನ್ನು ಸುಮ್ಮನೆ ದೊಡ್ಡವರು ಮಾಡಿದ ಹಾಗೆ ಆಗುತ್ತೆ” ಎಂದು ಹೇಳುತ್ತಾ ನಯವಾಗಿಯೇ ಟಾಂಗ್ ಕೊಟ್ಟಿದ್ದಾರೆ..
ಕನ್ನಡ ಚಿತ್ರರಂಗಕ್ಕೆ 85 ವರ್ಷಗಳ ಇತಿಹಾಸವಿದೆ. ದಕ್ಷಿಣ ಭಾರತಕ್ಕೆ 100 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಅದೆಲ್ಲ ಅವರಿಗೆ ಏನು ಗೊತ್ತು. ಅತೀ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುವುದು ದಕ್ಷಿಣ ಭಾರತದಲ್ಲಿಯೇ. ಕನ್ನಡ, ತೆಲುಗು. ತಮಿಳು ನಾವುಗಳೇ ಹೆಚ್ಚು ತಯಾರಕರು. ಇನ್ನು ಹಿಂದಿ ಚಿತ್ರಗಳ ಪರಂಪರೆಯಲ್ಲಿ ಹಿಂದಿ ಮಾರುಕಟ್ಟೆಯಾಗಿರೋದ್ರಿಂದ ಬಹಳ ಹಿಂದೆನೇ ಇಡೀ ದೇಶಕ್ಕೆ ವಿಸ್ತಾರ ಮಾಡಿಕೊಂಡಿರೋದ್ರಿಂದ ಹಾಗೆಲ್ಲ ಅನ್ನಿಸಬಹುದು.
ಇಡೀ ಭಾರತದವರು ಈಗ ಕನ್ನಡದ ಕಡೆ ತಿರುಗಿ ನೋಡುತ್ತಿದ್ದಾರಲ್ಲ. ಈ ಸಂದರ್ಭದಲ್ಲಿ ಇದನ್ನೆಲ್ಲಾ ದೃಷ್ಟಿ ಬಟ್ಟು ಅಂದ್ಕೊಂಡು ಸುಮ್ನೆ ನೋಡ್ಕೊಂಡು ಮುಂದಕ್ಕೆ ಹೋಗಬೇಕಿದೆ.. .”
ಕನ್ನಡದ ರೊಮ್ಯಾಂಟಿಕ್ ಹಾಡುಗಳೇ ಅವರ ತಂದೆತಾಯಿಯ ಬದುಕಿನ ಭಾಗಗಳು ಆಗಿರುತ್ತವೆ. ಹಾಗಾಗಿ ಇದಕ್ಕೇನು ಮಹತ್ವ ಕೊಡುವ ಅಗತ್ಯವೇನೂ ಇಲ್ಲ. ಯಾರು ಏನೇ ಮಾತಾಡಿದರೂ, ಕನ್ನಡ ಚಿತ್ರಗೀತೆಗಳಿಗೆ ಅದರದ್ದೇ ಆದ ದೊಡ್ಡ ಪರಂಪರೆಯಿದೆ. ನೂರಾರು ಸಂಗೀತಗಾರರು ಕೆಲಸ ಮಾಡಿದ್ದಾರೆ. ಸಾವಿರಾರು ಗೀತೆಗಳು ಇವೆ..
ಇಂತಹ ಹೇಳಿಕೆಗಳನ್ನು ನೀಡುವುದರಿಂದ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂಗೆ ಅವಮಾನ ಮಾಡಿದಂತೆ. ಎಸ್ ಜಾನಕಿಯವರಿಗೆ ಅವಮಾನ ಮಾಡಿದ ಹಾಗೆ. ಇಳೆಯರಾಜ, ಉದಯ್ ಶಂಕರ್, ಹಂಸಲೇಖ ಸೇರಿದಂತೆ ಎಲ್ಲಾ ಸಂಗೀತದ ಹಿರಿಯರಿಗೂ ಅವಮಾನ ಮಾಡಿದಂತೆ. ಇದಕ್ಕಾಗಿ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂದು ಡಾ. ವಿ ನಾಗೇಂದ್ರ ಪ್ರಸಾದ್ ಅವರು ನಯವಾಗಿಯೇ ಸಖತ್ ಟಾಂಗ್ ಕೊಟ್ಟಿದ್ದಾರೆ..
Rashmika Being Trolled again for her statement , calling only bollywood produce romantic songs , and calling south only have item masala , no 1 songs..