Guruprasad : ಚೆಕ್ ಬೌನ್ಸ್ ಪ್ರಕರಣದಲ್ಲಿ ‘ಮಠ’ ನಿರ್ದೇಶಕ ಗುರುಪ್ರಸಾದ್ ಬಂಧನ
ನಟ, ನಿರ್ದೇಶಕ ಗುರುಪ್ರಸಾದ್ ಅವರನ್ನ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಬೆಂಗಳೂರಿನ ಗಿರಿನಗರ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಶ್ರೀನಿವಾಸ್ ಹೆಸರಿನ ವ್ಯಕ್ತಿಗೆ ಹಣ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಚೆಕ್ ಬೌನ್ಸ್ ಆಗಿದೆ. ವಂಚನೆ ಹಾಗು ಮೋಸ ಮಾಡಿದ ಪ್ರಕರಣದ ಅಡಿಯಲ್ಲಿ ಗುರುಪ್ರಸಾದ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ಶ್ರೀನಿವಾಸ್ ಎಂಬುವವರ ಜತೆ ಗುರುಪ್ರಸಾದ್ ಹಣಕಾಸು ವ್ಯವಹಾರ ನಡೆಸಿದ್ದರು. ಗುರುಪ್ರಸಾದ್ ವಿರುದ್ಧ ವಂಚನೆ ಆರೋಪದಡಿ ಕೇಸ್ ದಾಖಲಾಗಿತ್ತು. ಚೆಕ್ಬೌನ್ಸ್ ಪ್ರಕರಣದಲ್ಲಿ ವಾರಂಟ್ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಂದ ಗುರುಪ್ರಸಾದ್ ಬಂಧನ ಆಗಿದೆ.
2015 ರಲ್ಲಿ ನಾನು ಅಭಿಮಾನಿ ಆಗಿ ಪರಿಚಯ ಆಗಿದ್ದು. 2016 ರಲ್ಲಿಸಾಲ ಅಂತ 30 ಲಕ್ಷ ರೂ. ಕೊಡಿಸಿದ್ದೆ. ಆದ್ರೆ, ಸಾಲ ವಾಪಸ್ ಕೇಳಿದಾಗ ಕೆಟ್ಟು ರೀತಿಯಲ್ಲಿ ವರ್ತಿಸಿದ್ರು. ಈ ಬಗ್ಗೆ ಕಳೆದ ಆಗಸ್ಟ್ನಲ್ಲಿ ಕೇಸ್ ಹಾಕಿದ್ದೆ. ಪೊಲೀಸರು ಇವತ್ತು ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಮೂಲಕ ನ್ಯಾಯ ಕೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಿರ್ದೇಶಕ ಗುರುಪ್ರಸಾದ್ ಮಠ, ಎದ್ದೇಳು ಮಂಜುನಾಥ ಮತ್ತು ಡೈರೆಕ್ಟರ್ ಸ್ಪೆಷಲ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು.