Kangana Ranouth : ಈ ಚಿತ್ರಕ್ಕಾಗಿ ನನ್ನೆಲ್ಲಾ ಆಸ್ತಿಯನ್ನ ಅಡವಿಟ್ಟಿದ್ದೇನೆ
ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿಯರಲ್ಲಿ ಬಾಲಿವುಡ್ ನಟಿಯರಲ್ಲಿ ಕಂಗಾನ ರಣಾವತ್ ಕೂಡ ಒಬ್ಬರು. ಕಂಗಾನ ಸಧ್ಯಕ್ಕೆ ಎಮರ್ಜೆನ್ಸಿ ಚಿತ್ರ ಕುರಿತಾಗಿ ಸುದ್ದಿಯಲ್ಲಿದ್ದಾರೆ. ಎಮರ್ಜೆನ್ಸಿ ಚಿತ್ರೀಕರಣವನ್ನ ಪೂರ್ಣಗೊಳಿಸಿರುವ ನಟಿ ಕಂಗನಾ ಇದ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.
ಭಾವನಾತಕ್ಮವಾಗಿ ಪತ್ರ ಬರೆದಿರುವ ಕಂಗಾನ ಇದಕ್ಕಾಗಿ ತನ್ನೆಲ್ಲಾ ಆಸ್ತಿಯನ್ನ ಅಡವಿಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಎಮರ್ಜೆನ್ಸಿ ಚಿತ್ರದಲ್ಲಿ ಕಂಗಾನ ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣದ ಸೆಟ್ ನಿಂದ ಮೂರು ಪೋಟೋಗಳನ್ನ ಹಂಚಿಕೊಂಡ ಕಂಗಾನ ಹಂಚಿಕೊಂಡಿದ್ದಾರೆ.
“’ತುರ್ತು ಪರಿಸ್ಥಿತಿ’ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ. ಇಂದು ನನ್ನ ಜೀವನದ ಅದ್ಭುತ ಘಟ್ಟದ ಅಂತ್ಯವನ್ನು ಸೂಚಿಸುತ್ತದೆ. ಇದಕ್ಕಾಗಿ ನನ್ನ ಎಲ್ಲಾ ಆಸ್ತಿಯನ್ನು ಅಡಮಾನ ಇಡಬೇಕಾಯಿತು. ಚಿತ್ರದ ಮೊದಲ ಶೆಡ್ಯೂಲ್ ವೇಳೆ ನನಗೆ ಡೆಂಗ್ಯೂ ಬಂತು. ರಕ್ತ ಕಣಗಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಇದನ್ನೆಲ್ಲ ನಾನು ‘ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಹುದಿತ್ತು. ಆದರೇ ನಾನು ಹಾಗೇ ಮಾಡಲಿಲ್ಲ. ನಿಜ ಹೇಳಬೇಕೆಂದರೆ, ನಾನು ಬೀಳುವುದನ್ನ ಬಯಸುವ ಜನರು ನನ್ನ ನೋವು ಮತ್ತು ಸಂಕಟಗಳಿಂದ ಸಾಂತ್ವಾನ ಪಡೆಯಬೇಕೆಂಬುದು ನಾನು ಬಯಸಲಿಲ್ಲ.
ಕಂಗನಾ ಚಿತ್ರದ ಸಂಪೂರ್ಣ ಚಿತ್ರತಂಡ ಮತ್ತು ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಚಿತ್ರದ ಕಂಗಾನ ಹೊರತು ಪಡಿಸಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ಸತೀಶ್ ಕೌಶಿಕ್, ಶ್ರೇಯಸ್ ತಲ್ಪಾಡೆ ಮುಂತಾದ ತಾರೆಯರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.