ಸೂರ್ಯನೊಬ್ಬ ಚಂದ್ರನೊಬ್ಬ ಅನ್ನೋ ಹಾಡಿನ ಸಾಲಿನಲ್ಲಿರೋ ಚಂದ್ರನೊಬ್ಬ ಅಂದ್ರೆ? ಅದು ಆರ್.ಚಂದ್ರು ಅಂತೇಳಿದ್ರೆ ಅದೇನ್ ಬಿಲ್ಡಪ್ ಅಲ್ಲ ಎಕ್ಸಟ್ರಾ ಹೊಗಳಿಕೆ ಅಂತೂ ಅಲ್ವೇ ಅಲ್ಲ.. ಏಕೆಂದರೆ ಕನ್ಸು ಕಾಣೋದ್ ಎಲ್ರೂ ಕಾಣ್ತಾರೆ.. ಆದ್ರೆ ಆ ಕನಸು ನನಸು ಆಗ್ಲೇಬೇಕು ಅಂತ ಪಣ ತೊಟ್ಟು.. ಹಠಕ್ಕೆ ಬಿದ್ದು ನಿದ್ರೆ ಊಟ ಬಿಟ್ಟು ಕೆಲಸ ಮಾಡೋರ್ ಕಮ್ಮಿ.. ಆದ್ರೆ ಚಂದ್ರು ಮಾತ್ರ ಡಿಫರೆಂಟು.. ಹೀ ಈಸ್ ಡ್ರೀಮರ್ ಮಾತ್ರವಲ್ಲ.. ಅಚೀವರ್..
ಒಮ್ಮೆ ಅಂದ್ಕೊಂಡ್ರೆ ಆಕಾಶಕ್ಕೆ ಏಣಿ ಬೇಕಾದ್ರೂ ಹಾಕ್ತೀನಿ.. ಸಾಗರಕ್ಕೆ ಸೇತುವೆ ಬೇಕಾದ್ರೂ ಕಟ್ತೀನಿ ಅನ್ನೋ ಹಠ.. ಅದನ್ನ ಸಾಧಿಸಿಯೇ ಸಾಧಿಸೋ ಘಟ..
ಕಬ್ಜ ಅನ್ನೋ ಸಿನಿಮಾನೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ನೂರು ಕೋಟಿ ಸಿನಿಮಾ ಮಾಡ್ತೀನಿ ಅಂತ ಎಲ್ರೂ ಅನ್ಕೊಬಹುದು.. ಆದ್ರೆ ನೂರು ಕೋಟಿ ಹಾಕಿ ಸಿನಿಮಾ ಮಾಡೋದ್ ಇದಿಯಲ್ಲ ಅದಕ್ಕೆ ಎಂಟೆದೆಬೇಕು.. ಸಿನಿಮಾ ಡೈರೆಕ್ಟರ್ ನ ಕ್ಯಾಪ್ಟನ್ ಆಫ್ ದಿ ಶಿಪ್ ಅಂತಾರೆ.. ಕಬ್ಜ ವಿಷ್ಯದಲ್ಲಿ ಆರ್.ಚಂದ್ರುನೇ ಕ್ಯಾಪ್ಟನ್ನು.. ಆರ್.ಚಂದ್ರುನೇ ಶಿಪ್ಪು.. ಹೀ ಈಸ್ ಒನ್ ಮ್ಯಾನ್ ಆರ್ಮಿ.. ಯಾಕೆಂದರೆ ಕಬ್ಜ ಹಿಂದಿರೋ ಮಾಸ್ಟರ್ ಮೈಂಡ್ ಮಾತ್ರವಲ್ಲ.. ಆ ಮಾಸ್ಟರ್ ಮೈಂಡ್ ಗೆ ಮನಿ ಲ್ಯಾಂಡ್ ಕೂಡ ಚಂದ್ರುನೇ..
ಎಲ್ಲಿಯ ಕೇಶಾವರ ಚಂದ್ರು.. ಎಲ್ಲಿಯ ಪ್ಯಾನ್ ವರ್ಲ್ಡ್ ಸಿನಿಮಾ.. ಸಣ್ಣ ಗ್ರಾಮದಿಂದ ಬಂದ್ರೂ ಸಹ ಕನ್ಸು ಸಣ್ಣದಲ್ಲ.. ಮಹತ್ವಾಕಾಂಕ್ಷೆ ಸಣ್ಣದಲ್ಲ.. ಮೊದಲ ಸಿನಿಮಾದಲ್ಲಿಯೇ ತಾಜ್ ಮಹಲ್ ತೋರಿಸಿದ, ಒಂದು ಮನೆ ನಿಲ್ಬೇಕಂದ್ರೆ ನಾಲ್ಕು ಪಿಲ್ಲರ್ ಬೇಕು ಹಾಗೆ.. ಸಿನಿಮಾ ಅನ್ನೋ ಜರ್ನಿಯಲ್ಲಿ ಚಾರ್ ಮಿನಾರ್ ನೇ ಎದ್ದು ನಿಲ್ಲಿಸಿದ ಮೈಲಾರಿಯ ಸಾರಥಿ.. ಕನ್ನಡದ ಚಿತ್ರರಸಿಕ ಮಾತ್ರವಲ್ಲ.. ಇಡೀ ದೇಶವ್ಯಾಪಿಯ ಸಿನಿಮಾ ಪ್ರೇಮಿಗಳು ಐ ಲವ್ ಯೂ ಅನ್ನೋ ರೀತಿ ಎಂಟರ್ ವರ್ಲ್ಡ್ ಕಬ್ಜ ಮಾಡ್ಕೊಳಕೆ ಹೆಜ್ಜೆ ಇಟ್ಟಿದ್ದಾರೆ..
ಕಬ್ಜ ಟ್ರೈಲರ್ ನೋಡ್ತಿದ್ರೆ? ಈ ಮನ್ಷ ಹೆಂಗ್ ಇದೆಲ್ಲಾ ಥಿಂಕ್ ಮಾಡ್ತಾರೆ.. ಈ ಐಡಿಯಾಸ್ ಗಳೆಲ್ಲಾ ಹೆಂಗ್ ಬಂದ್ವು.. 1945 ಟು 1987 ನಲ್ಲಿ ನಡೆಯೋ ಕಥೆ.. ಪಿನ್ ಟು ಪಿನ್ ಆ ಕಾಲಘಟ್ಟಕ್ಕೆ ಕರ್ಕೊಂಡು ಹೋಗಿದ್ದಾರೆ.. ಟ್ರೈಲರ್ ನೋಡ್ತಿದ್ರೆ ಹುಡುಕಿದ್ರೂ ಒಂದ್ ತಪ್ ಕಣ್ಸೋದಿಲ್ಲ.. ಈ ಲೆವೆಲ್ ಮೇಕಿಂಗ್ ಹೆಂಗ್ ಸಾಧ್ಯವಾಯ್ತು.. ಒನ್ ಮ್ಯಾನ್ ಆರ್ಮಿ ತರ ಹೇಗೆ ಇದೆಲ್ಲಾ ಸಾಧಿಸಿದ್ರು ಅನ್ನೋ ಅಚ್ಚರಿಯಾಗುತ್ತೆ.. ಮೊದ್ಲೇ ಹೇಳಿದ್ವಲ್ಲಾ.. ಛಲ ಛಲ.. ಕನ್ನಡ ಇಂಡಸ್ಟ್ರಿ ಈಗಾಗಲೇ ಪ್ಯಾನ್ ಇಂಡಿಯಾ ಲೆವೆಲ್ ಮುಟ್ಟಿದೆ.. ನೂರು ಕೋಟಿ ಅಲ್ಲ ಸಾವಿರ ಕೋಟಿ ಕಲೆಕ್ಷನ್ ದಾಟಿದೆ.. ಇಂತಹ ಸಮಯದಲ್ಲಿ ನನ್ನದು ಒಂದು ಕೊಡುಗೆ ಕೊಡ್ಬೇಕು.. ಸ್ಯಾಂಡಲ್ ವುಡ್ ನ ಇನ್ನೊಂದು ಹಂತಕ್ಕೆ ಕೊಂಡೊಯ್ಬೇಕು ಅನ್ನೋ ಛಲ…
ನೀವ್ ಅಂದ್ಕೊಬಹುದು.. ಕೆಜಿಎಫ್ ನೋಡಿ ಚಂದ್ರುಗೆ ಈ ಕನ್ಸು ಹುಟ್ಟಿದೆ ಅಂತ.. ನಿಜ ಕೆಜಿಎಫ್ ಸಿನಿಮಾನೇ ಕನ್ನಡದ ಮಾರುಕಟ್ಟೆ ಓಪನ್ ಆಗೋಕೆ ರಹದಾರಿ.. ಅದೇ ಭರವಸೆಯಲ್ಲಿ,ಹೋಪ್ ನಲ್ಲೇ ಶುರುವಾದ ಪ್ರಾಜೆಕ್ಟ್ ಕಬ್ಜ.. ಆದ್ರೆ ನಡುವೆ ಕೊರೊನಾ ಬಂತು ನೋಡಿ.. ಆ ಸಮಯದಲ್ಲಿ ಯಾರಿಗಾದ್ರೂ ಒಂದು ಕ್ಷಣ ಎದೆ ದಸಕ್ ಅಂದಿರುತ್ತೆ.. ಕೊರೊನಾ ನಂತ್ರ ಏನು? ಜನ ಥಿಯೇಟರ್ ಗೆ ಬರ್ತಾರ ಅನ್ನೋ ಭಯ ಆಗಿರುತ್ತೆ.. ಆದ್ರೆ ಸವಾಲುಗಳ ನಡುವೆಯೇ ಸವಾರಿ ಮಾಡಿರೋ ಮೈಲಾರಿಯ ಸಾರಥಿಗೆ ಇದೊಂದು ದೊಡ್ಡ ಸವಾಲು ಅನಿಸ್ಲೇ ಇಲ್ಲ..
ಇಲ್ಲ ಅಂದುಕೊಂಡಿದ್ನ ಮಾಡ್ಲೇಬೇಕು ಎಂಬ ಹಠಕ್ಕೆ ಬಿದ್ರು.. ಉತ್ಸಾಹಿ, ಕ್ರಿಯೇಟಿವ್ ಟೀಮ್ ನ ಜೊತೆಗಿಟ್ಕೊಂಡು.. ಕೊವಿಡ್ ನ ಸಂಕಷ್ಟ ಕಾಲದಲ್ಲೂ ತಮ್ಮ ಕನಸು ಕಲ್ಪನೆಗೆ ಸಿನಿಮಾ ರೂಪ ಕೊಡೋಕೆ ನಿಂತ್ರು.. ಎಲ್ಲೂ ರಾಜಿಯಾಗ್ಲಿಲ್ಲ.. ಯಾವುದಕ್ಕೂ ಹಿಂಜರಿಯಲಿಲ್ಲ.. ಇಟ್ಟ ಹೆಜ್ಜೆಯಲ್ಲಿ ದಿಟ್ಟತನವಿತ್ತು.. ಸಾಧಿಸ್ತೀನಿ ಅನ್ನೋ ಆತ್ಮವಿಶ್ವಾಸವಿತ್ತು.. ಆ ಛಲ, ಆ ಆತ್ಮವಿಶ್ವಾಸವೇ ಕಬ್ಜ..
ಈ ಸಿನಿಮಾ ಬರೀ ಸಿನಿಮಾವಲ್ಲ.. ಇದೊಂದು ತಪಸ್ಸು, ಇದೊಂದು ಕನಸ್ಸು.. ಖಂಡಿತ ಇದು ಸಾಮಾನ್ಯ ಸಿನಿಮಾವಲ್ಲ.. ಅಂತಿಂಥ ಗೆಲುವು ಸಿಗೋದಿಲ್ಲ.. ನೆಕ್ಸ್ಟ್ ಬಿಗ್ ಥಿಂಗ್ಸ್.. ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಚರಿತ್ರೆ.. ರಕ್ತದಲ್ಲಿ ಬರ್ದಿದ್ದಲ್ಲ.. ಚಂದ್ರು ಹೃದಯದಿಂದ ಬರೆಯೋ ಚರಿತ್ರೆ.. ಎಂದೆಂದೂ ಅಳಿಸಲಾಗದ ಚರಿತ್ರೆ…