ಕಿನ್ನರಿ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಅಭಿಮಾನ ಸಂಪಾದಿಸಿ , ಬಿಗ್ ಬಾಸ್ ಶೋಗೆ ಬಂದು ಜನಪ್ರಿಯತೆ ಹೆಚ್ಚಿಸಿಕೊಂಡು “ಇಕ್ಕಟ್” ನಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಪ್ರೇಕ್ಷಕರನ್ನ ರಂಜಿಸಿರುವ ಕರಾವಳಿ ಕುವರಿ ಇದೀಗ ಹೊಸ ಸಿನಿಮಾದಲ್ಲಿ ಟ್ರೈಬಲ್ ರಾಣಿಯಾಗಲಿದ್ದಾರೆ.
ಕರಾವಳಿ ಖಡಕ್ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸದ್ಯ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಅವರ ಸಿನಿಮಾದಲ್ಲಿ ಟ್ರೈಬಲ್ ರಾಣಿಯಾಗಿ ಭೂಮಿ ಶೆಟ್ಟಿ ಅಯ್ಕೆಯಾಗಿದ್ದಾರೆ. ಹೊಸ ನಟ ರಂಜನ್ ಛತ್ರಪತಿ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಬಣ್ಣ ಹಚ್ಚಲಿದ್ದಾರೆ. ಎರಡು ವರ್ಷದ ಕೊವೀಡ್ ಬ್ರೇಕ್ ನಡುವೆ ಎರಡು ಆಯಾಮದ ಕಥೆ ಸಿದ್ಧವಾಗಿದೆ. ತಸ್ಮಯ್ ಪ್ರೋಡಕ್ಷನ್ ಬ್ಯಾನರ್ ಅಡಿ ನಿರ್ಮಾಣವಾಗಲಿರುವ ಹೊಸ ಚಿತ್ರದಲ್ಲಿ ಕನ್ನಡ ಚಿತ್ರರಂಗದ ತಾರೆಯರ ಟೀಮ್ ಕಾಣಿಸಿಕೊಳ್ಳಲಿದೆ. ಸಿನಿಮಾಗೆ ಬೆಳಗಾವಿ ಮೂಲದ ಉದ್ಯಮಿ ಬಾಲಚಂದ್ರ ಇನಮ್ದಾರ್ ಬಂಡವಾಳ ಹೂಡಲಿದ್ದಾರೆ. ವಿಶೇಷ ಅಂದ್ರೆ ಸಿನಿಮಾ ಕನ್ನಡ ತಮಿಳು ಮರಾಠಿ ಭಾಷೆಯಲ್ಲಿ ಮೂಡಿಬರಲಿದೆ. ತಮ್ಮ ಖಡಕ್ ವಿಲನ್ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿಫರೆಮಟ್ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಭೂಮಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಸಿನಿಮಾ ಕಥೆ ಕೇಳಿರುವ ಭೂಮಿ ಕಥೆ ಮೆಚ್ಚಿ ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ಸಂದೇಶ ಶೆಟ್ಟಿ ಸಿನಿಮಾ ಕಥೆ ಅಂದ್ರೆ ಅದ್ರಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಎಲಿಮೆಂಟ್ಸ್ ಇದ್ದೇ ಇರುತ್ತೆ. ಹೆಚ್ಚಾಗಿ ಸ್ಸಪೆನ್ಸ್ , ಥ್ರಿಲ್ಲರ್ ಕಥೆಯನ್ನೇ ಫೋಕಸ್ ಮಾಡ್ತಾರೆ. ವಿಶೇಷ ಅಂದ್ರೆ ಟೈಟಲ್ ಲಾಂಚ್ ಆಗುವುದಕ್ಕೂ ಮುನ್ನವೇ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಶೀಘ್ರದಲ್ಲೇ ಸಿನಿಮಾದ ಟೈಟಲ್ ಅನಾವರಣಗೊಳ್ಳಲಿದೆ. ಸಿನಿಮಾದಲ್ಲಿ ಸ್ಯಾಂಡಲ್ವುಡ್ ನ ಹೆಸರಾಂತ ನಟ ನಟಿಯರೂ ಬಣ್ಣ ಹಚ್ಚಲಿದ್ದಾರೆ.
ಚಿತ್ರದ ಬಹುತೇಕ ಚಿತ್ರೀಕರಣವು ಕರಾವಳಿ, ಪಶ್ವಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಣವಾಗಲಿದೆ. ಉಳಿದಂತೆ ಇನ್ನೊಂದಿಷ್ಟು ಪಾತ್ರಗಳ ಆಯ್ಕೆ ಪ್ರಕ್ರಿಯೆ ಛಾಲ್ತಿಯಲ್ಲಿದ್ದು, ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ.