ಕನ್ನಡ ಚಿತ್ರರಂಗದಲ್ಲಿ ವಿನಯತೆ ವಿಧೇಯತೆಗೆ ನಮ್ರತೆ ಸರಳತೆಗೆ ಮತ್ತೊಂದು ಹೆಸರು ಎನ್ನುವಂತೆ ಬದುಕಿದ ಕನ್ನಡದ ಕಣ್ಮಣಿ ಪುನಿತ್ ರಾಜ್ ಕುಮಾರ್ ಅವರ ಸಾವನ್ನ ಅರಗಿಸಿಕೊಳ್ಳಲು ಇನ್ನೂ ಸಾದ್ಯವಾಗುತ್ತಿಲ್ಲ…
ಚಿತ್ರರಂಗದಲ್ಲಿ ದೊಡ್ಮನೆ ಎಂದೇ ಹೆಸರಾಗಿದ್ದ ರಾಜ್ ಫ್ಯಾಮಿಲಿಯಲ್ಲಿ ಶಿವಣ್ಣ ಮತ್ತು ಅಪ್ಪು ಅವರನ್ನ ಒಂದೇ ಚಿತ್ರದಲ್ಲಿ ನೋಡಬೇಕು ಎನ್ನುವ ಅಭಿಮಾನಿಗಳ ಕನಸು ಕೊನೆಗೂ ಕನಸಾಗಿಯೇ ಉಳಿಯಿತು.
ಸಲಗ ಚಿತ್ರದ ಫ್ರೀ ರಿಲೀಸ್ ಈವೆಂಟ್ ನಲ್ಲಿನ ಕೆಲ ದಿನಗಳ ಹಿಂದೆಯಷ್ಟೆ ಪುನೀತ್ ಮನದಾಳದ ಆಸೆಯನ್ನ ಹಂಚಿಕೊಂಡಿದ್ದರು. ಅದು ಶಿವಣ್ಣ ಅವರಿಗೆ ಸಿನಿಮಾವನ್ನ ನಿರ್ದೇಶನ ಮಾಡಬೇಕು ಎನ್ನುವುದು.ಒಂದು ಒಳ್ಳೆಯ ಥ್ರಿಲ್ಲರ್ ಸ್ಕ್ರಿಪ್ಟ್ ರೆಡಿಮಾಡಿಕೊಂಡು ಶಿವಣ್ಣ ಅವರಿಗೆ ನಿರ್ದೇಶನ ಮಾಡ್ತೀನಿ ಅಂತ ವೇದಿಕೆಯ ಮೇಲೆ ಮನದ ಆಸೆಯನ್ನ ಹಂಚಿಕೊಂಡಿದ್ದರು. ಆದರೆ ಆಸೆ ಈಡೇರುವ ಮುನ್ನವೇ ಪುನೀತ್ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.