ಕೋಟ್ಯಾಂತರ ಕರುನಾಡಿಗರನ್ನ ಅಗಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಟಿಸಿರುವ ಕಡೆಯ ಸಿನಿಮಾ ಜೇಮ್ಸ್… ಆದ್ರೆ ಅದಾದ ನಂತರ ಅವರ ಬಳಿ ಸಾಲು ಸಾಲು ಸಿನಿಮಾಗಳಿದ್ದವು.. ಪ್ರಮುಖವಾಗಿ ದ್ವಿತ್ವದಲ್ಲಿ ಅಪ್ಪು ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದರು. ಅಪ್ಪು ಅಭಿಮಾನಿಗಳು ಕೂಡ ದ್ವಿತ್ವದಲ್ಲಿ ಅವರ ಡಿಫರೆಂಟ್ ಲುಕ್ , ಪಾತ್ರ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿಯಲ್ಲಿ ಕಾಯ್ತಿದ್ದರು.
ಆದ್ರೆ ದೇವರು ಕರುನಾಡಿಗರಿಗೆ , ಅಪ್ಪು ಅಭಿಮಾನಿಗಳಿಗೆ ಮೋಸ ಮಾಡಿಬಿಡ್ತು. ವಿಧಿಯಾಟದ ಮುಂದೆ ಅಂದುಕೊಂಡಂತೆ ಯಾವುದೂ ಆಗಲಿಲ್ಲ. ಅಪ್ಪು ಅಭಿಮಾನಿಗಳು ಕ್ರೂರ ವಿಧಿಗೆ ಶಾಪ ಹಾಕುತ್ತಿದ್ದಾರೆ. ಹಲವು ನಿರ್ದೇಶಕರು ಅಪ್ಪುಗಾಗಿಯೇ ಅನೇಕ ಕಥೆಗಳನ್ನ ರಚಿಸಿ ಸಿನಿಮಾ ಮಾಡುವುದಕ್ಕೆ ಕಾಯುತ್ತಿದ್ದರು.
ನಿರ್ದೇಶಕ ಪವನ್ ಕುಮಾರ್ ಜೊತೆ ದ್ವಿತ್ವ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದರು. ಈ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನಕ್ಕೆ ಅದರಲ್ಲಿಯೂ ಕತೆಯ ಆಯ್ಕೆಯ ವಿಷಯದಲ್ಲಿ ದೊಡ್ಡ ತಿರುವೊಂದನ್ನು ನೀಡುವ ಯತ್ನದಲ್ಲಿದ್ದರು. ಪುನೀತ್ ಅಭಿಮಾನಿಗಳು ಮಾತ್ರವೇ ಅಲ್ಲದೆ ಒಳ್ಳೆಯ ಕನ್ನಡ ಸಿನಿಪ್ರೇಮಿಗಳಿಗೂ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಗೆ ಇತ್ತು. ಆದ್ರೆ ಎಲ್ಲಾ ಮುಗಿದುಹೋಯ್ತು.
‘ದ್ವಿತ್ವ’ ಸಿನಿಮಾದ ಹೊರತಾಗಿ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ನಟಿಸಲಿದ್ದರು. ಆ ನಂತರ ಮತ್ತೆ ಸಂತೋಶ್ ಆನಂದ್ರಾಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದರು.
ಇನ್ನೂ ಅಪ್ಪು ಇಲ್ಲದ ಮೇಲೆ ‘ದ್ವಿತ್ವ’ ಸಿನಿಮಾ ಏನಾಗುತ್ತದೆ, ಅದಕ್ಕೆ ನಾಯಕ ಯಾರಾಗುತ್ತಾರೆ ಎಂಬ ಚರ್ಚೆಗಳಿತ್ತು. ಈ ನಡುವೆ ಈ ಬಗ್ಗೆ ಸಿನಿಮಾ ನಿರ್ದೇಶಕ ಪವನ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ ಅಗಲಿಕೆ ನೋವಿನಿಂದ ನಾವು ಇನ್ನೂ ಹೊರಬಂದಿಲ್ಲ. ‘ದ್ವಿತ್ವ’ ಸಿನಿಮಾವನ್ನು ಏನು ಮಾಡುವುದು ಎಂದು ನಮಗೂ ಈಗ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಸಿನಿಮಾ ನಿರ್ಮಾಣ ಮಾಡಲಿದ್ದ ಹೊಂಬಾಳೆ ಫಿಲಮ್ಸ್ಗು ಪುನೀತ್ಗೂ ಇದ್ದ ಅನುಭಂದ ಬಹಳ ಗಾಢವಾದುದ್ದು. ಹಾಗಾಗಿ ಅವರ ಬಳಿ ಸಿನಿಮಾ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ.
11 ದಿನಗಳ ನಂತರ ಈ ಬಗ್ಗೆ ಮಾತುಕತೆ ಮಾಡೋಣ ಎಂದುಕೊಂಡಿದ್ದೇವೆ ಎಂದಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನವಾದ ದಿನವೇ ಪವನ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಭೇಟಿಯಾಗಬೇಕಿತ್ತು. ಅಂದು ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರ ಕಾಸ್ಟ್ಯೂಮ್ ಡಿಸೈನ್ ಅನ್ನು ಅಂತಿಮಗೊಳಿಸಬೇಕಿತ್ತು ಹಾಗೂ ಸಂಭಾಷಣೆಯನ್ನು ಅವರಿಗೆ ಆಡಿಯೋ ರೂಪದಲ್ಲಿ ಒಪ್ಪಿಸಬೇಕಿತ್ತು. ಆದರೆ ಅಷ್ಟರಲ್ಲೇ ಪುನೀತ್ ನಿಧನ ಹೊಂದಿದರು.
ಪುನೀತ್ ರಾಜ್ಕುಮಾರ್ ನಟಿಸಬೇಕಿದ್ದ ‘ದ್ವಿತ್ವ’ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ಬ್ಯಾನರ್ ನ ಅಡಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಲಿದ್ದರು. ಸಿನಿಮಾದ ಚಿತ್ರೀಕರಣ ಇದೇ ನವೆಂಬರ್ನಲ್ಲಿ ಪ್ರಾರಂಭವಾಗುತ್ತಿತ್ತು. ಬೆಂಗಳೂರು ಹಾಗೂ ಹೈದರಾಬಾದ್ನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುವುದರಲ್ಲಿತ್ತು. ಸಿನಿಮಾದಲ್ಲಿ ನಾಯಕಿಯಾಗಿ ನಟಿ ತ್ರಿಷಾ ಆಯ್ಕೆಯಾಗಿದ್ದರು ಮತ್ತೊಬ್ಬ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆ ಆಗಿದ್ದರು. ನನಗೆ ‘ದ್ವಿತ್ವ’ ಸಿನಿಮಾದ ಆಫರ್ ಬಂದಾಗ ಕನಸು ನನಸಾದ ಅನುಭವ ಆಗಿತ್ತು. ಆದರೆ ಅದು ಈಡೇರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.