ಹಾವೇರಿ : ನಟ ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕೆಂಬ ವಿಚಾರ. 2000 ನೇ ಇಸ್ವಿಯಿಂದ ಇದೆ. ಅಂದು ಎರಡು ಹನಿ ಪೋಲಿಯೊ ಟ್ರಾಪ್ಸ್ ಗೆ ಜಾಹೀರಾತಿನಲ್ಲಿ ಪರಿಚಯ ಆಗಿದ್ದು. ಸಮಾಜಿಕ ಸೇವಕ ಆಗಿದ್ದರು ಅಂದೆ ಪರಿಚಯ ಬೆಳಿಸಿಕೊಂಡಿದ್ದರು ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು ಅವತ್ತು ಅವರು ಸೂಪರ್ ಸ್ಟಾರ್.. ಅಂದು ನಾನು ಕಾಮನ್ ಮ್ಯಾನ್. ಯಾವ ಸಚಿವ,ಶಾಸಕ ಆಗಿರಲಿಲ್ಲಾ. ನಾನು ಪೋಲಿಯೋ ವಿಚಾರ ಈ ಥರ ಒಂದು ಕೆಲಸ ಇದೆ ಎಂದು ಹೇಳಿದಾಗ ಬಂದು ಮಾಡಿಕೊಟ್ಟಿದ್ದರು ಎಂದು ಅವರ ಒಡನಾಟವನ್ನ ಸಚಿವ ಆನಂದ್ ಸಿಂಗ್ ನೆನಪಿಸಿಕೊಂಡಿದ್ದಾರೆ.
ಇನ್ನೂ ಅಪ್ಪು ಅವರ ಮನೊಭಾವ ಸಮಾಜಸೇವೆ ನೋಡಿದ್ರೆ ಈವಾಗಿನ ನಮಗೆ ನಾಚಿಕೆ ಆಗಬೇಕು. ಯಾಕಂದರೆ ಅವರು ಸಿನಿಮಾ ಜೊತೆ ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಎಂಬ ವಿಚಾರಕ್ಕೆ ನಾನು ಬೆಂಬಲ ಕೊಡ್ತೇನಿ. ಅವರಿಗೆ ಪದ್ಮಶ್ರೀ ಕೊಡಬೇಕು ಎಂದಿದ್ದಾರೆ.