ಗರುಡ ಗಮನ ವೃಷಭ ವಾಹನ ಚಿತ್ರ ನವೆಂಬರ್ 19ರಂದು ಬಿಡುಗಡೆಯಾಗಲಿದೆ. ರಾಜು ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕಾಂಬಿನೇಷನ್ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಕರಾವಳಿಯ ಭೂಗತ ಜಗತ್ತಿನ ಕಥೆಯಾಧರಿತ ಚಿತ್ರವಾಗಿದೆ. ಗರುಡ ಗಮನ ಅಂದ್ರೆ ವಿಷ್ಣು. ಅಂದ್ರೆ ವಿಷ್ಣು ಶಾಂತ ಸ್ವಭಾವದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಹಾಗೇ ವೃಷಭ ವಾಹನ ಅಂದ್ರೆ ಶಿವ. ಈ ಪಾತ್ರದಲ್ಲಿ ರಾಜು ಶೆಟ್ಟಿಯವರು ಅಭಿನಯಿಸಿದ್ದಾರೆ.
ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜು ಬಿ ಶೆಟ್ಟಿವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಶಿವನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಅಂತ ಚಿತ್ರ ತಂಡ ಹೇಳುತ್ತಿದೆ. ಇಡೀ ದಿನ ಶಿವನ ಪಾತ್ರದ ಗುಂಗಿನಲ್ಲಿರುವಾಗ ರಾಜು ಶೆಟ್ಟಿ ಅವರ ಜೊತೆ ಮಾತನಾಡಲು ಕೂಡ ಚಿತ್ರ ತಂಡ ಹೆದರುತ್ತಿದ್ರಂತೆ. ಶಾಂತ ಸ್ವಭಾವ ರಾಜು ಶೆಟ್ಟಿ ಅವರು ಈ ಹಿಂದೆ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಈ ಚಿತ್ರದಲ್ಲಿ ಕೈಯಲ್ಲಿ ಚೂರಿ ಹಿಡಿದುಕೊಂಡು ರೌಡಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರ ರಾಜು ಶೆಟ್ಟಿ ಅವರ ವೃತ್ತಿ ಬದುಕಿಗೆ ಹೊಸ ತಿರುವನ್ನು ನೀಡಲಿದೆಯಂತೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್, ಟೀಸರ್ ಕೂಡ ಸಾಕಷ್ಟು ಸೌಂಡ್ ಮಾಡಿದೆ. ಹಾಗಾಗಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ರಾಜು ಶೆಟ್ಟಿ, ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಹಾಗಾಗಿ ಈ ಚಿತ್ರ ಪರಂವಃ ಸ್ಟುಡಿಯೋ ಮೂಲಕ ಬಿಡುಗಡೆ ಮಾಡುವುದಾಗಿ ರಕ್ಷಿತ್ ಶೆಟ್ಟಿ ಈ ಹಿಂದೇನೇ ಹೇಳಿದ್ದರು. ಇದೀಗ ಚಿತ್ರ ತಂಡ ಚಿತ್ರದ ಮೇಕಿಂಗ್ ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ರಾಜು ಶೆಟ್ಟಿ ಅವರ ಪಾತ್ರವನ್ನು ರಿವೀಲ್ ಮಾಡಲಾಗಿದೆ.