Monday, September 25, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ಟಿ ವಿ

ಮತ್ತೆ ಮನ್ವಂತರ ಮೂಲಕ ಗಮನ ಸೆಳೆಯಲಿರುವ ಟಿ. ಎನ್ ಸೀತಾರಾಮ್ ಧಾರಾವಾಹಿ ಹಾಗೂ ʻಮಾಯಾ ಮರ್ಡರ್ ಕೇಸ್ʼ ಎನ್ನುವ ವೆಬ್ ಸೀರಿಸ್”:

admin by admin
November 16, 2021
in ಟಿ ವಿ, ಸಿನಿ ಕಾರ್ನರ್
0
ಮತ್ತೆ ಬಂದರು ಮನಕಲಕುವ ಧಾರಾವಾಹಿ ರಂಗದ ಬಾದ್‌ಷಾ ಟಿ.ಎನ್‌ ಸೀತಾರಾಮ್:
Share on FacebookShare on TwitterShare on WhatsApp

ಟಿ.ಎನ್ ಸೀತಾರಾಮ್, ಕನ್ನಡ ಕಿರುತೆರೆಯ ಬಾದ್ಷಾ. ಟಿವಿ ಲೋಕದಲ್ಲಿ ತಮ್ಮ ಸೂಕ್ಷ್ಮ
ಸಂವೇದನೆಯ ಕಥಾ ಹಂದರ, ಕೋರ್ಟ್ ರೂಂ ಡ್ರಾಮಾಗಳ ಮೂಲಕ ವೀಕ್ಷಕರ ಹೃದಯ
ಸಿಂಹಾಸನದಲ್ಲಿ ಆರೂಢರಾದವರು ಸೀತಾರಾಮ್. ೯೦ರ ದಶಕದಲ್ಲಿ ಟಿವಿ ಜಗತ್ತು
ಅನಾವರಣಗೊಳ್ಳುತ್ತಿದ್ದ ಹಾಗೆ ಅವರ ಮಾಯಾಮೃಗ ಧಾರಾವಾಹಿ ನೋಡುಗರ ಮನ ಸೆಳೆದಿತ್ತು.
ಆಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಆ ಧಾರಾವಾಹಿ ನಂತರ ಜಿ ಕನ್ನಡ ವಾಹಿನಿಯಲ್ಲೂ
ಪ್ರಸಾರವಾಗಿತ್ತು. ಈಗ ಭೂಮಿಕ ಟಾಕಿಸ್ ಯೂ ಟ್ಯೂಬ್ ವಾಹಿನಿಯಲ್ಲಿಯೂ ಪ್ರತಿನಿತ್ಯ
ಪ್ರಸಾರವಾಗುತ್ತಿದ್ದು, ಲಕ್ಷಾಂತರ ನೋಡುಗರನ್ನು ನಾಸ್ಟಾಲ್ಜಿಕ್ ಭಾವ ಸಾಗರದಲ್ಲಿ
ಮುಳುಗಿಸುತ್ತಿದೆ. ಮಾಯಾಮೃಗದ ಯಶಸ್ಸಿನ ನಂತರ ಈಗ ಮತ್ತೆ ಟಿ ಎನ್ ಸೀತಾರಾಮ
ಮನೋರಂಜನಾ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಟಿವಿ ಧಾರಾವಾಹಿಗಳ
ಸಾಮ್ರಾಟನ ಕಣ್ಣು ಈಗ ವೆಬ್ ಸೀರಿಸ್ ಮೇಲೆ ಬಿದ್ದಿದೆ.

ಮಾಯಾಮೃಗಕ್ಕೂ ಮೊದಲು ಕಥೆಗಾರದ ಮೂಲಕ ತಮ್ಮೊಳಗಿನ ನಿರ್ದೇಶಕನನ್ನು
ಅನಾವರಣಗೊಳಿಸಿದ್ದ ಸೀತಾರಾಮ್ ಪಿ ಲಂಕೇಶ್ ಮತ್ತು ಪುಟ್ಟಣ್ಣ ಕಣಗಾಲರ ಗರಡಿಯಲ್ಲಿ
ಪಳಗಿದವರು. ಪುಟ್ಟಣ್ಣರ ಮಾನಸ ಸರೋವರದ ಸಂಭಾಷಣಾಕಾರರಾಗಿ ಕೆಲಸ ಮಾಡಿದ್ದವರು,
ಅದಕ್ಕೂ ಮೊದಲೇ ಆಸ್ಪೋಟದ ಮೂಲಕ ಭರವಸೆ ಮೂಡಿಸಿದ್ದವರು. ಅವರ ನಿರ್ದೇಶನದಲ್ಲಿ ಈ-
ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮನ್ವಂತರ, ಮುಕ್ತ, ಮುಕ್ತ-ಮುಕ್ತ, ಮಹಾಪರ್ವ ಮತ್ತು ನಂತರ
ಬದಲಾದ ಕಾಲಘಟ್ಟದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಮಗಳು ಜಾನಕಿ ಧಾರಾವಾಹಿಗಳು
ದೇಶ ವಿದೇಶಗಳ ಕೋಟ್ಯಾಂತರ ಅಭಿಮಾನಿಗಳನ್ನು ಕುತೂಹಲವನ್ನು ಕೆರಳಿಸಿದ್ದ ಮಹಾನ್ ಕೃತಿಗಳು.
ಈಗ ಕೋವಿಡ್ ಸಂಕಷ್ಟದ ನಂತರ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿರುವ ಸೀತಾರಾಮ್, ಮತ್ತೆ
ಮನ್ವಂತರ ಎನ್ನುವ ಹೊಸ ಪ್ರಾಜೆಕ್ಟ್ ಒಂದನ್ನು ಅನೌನ್ಸ್ ಮಾಡಿದ್ದಾರೆ.

ಈಗಾಗಲೇ ಈ ಧಾರಾವಾಹಿ ಚಿತ್ರೀಕರಣದ ಮಹೂರ್ತ ಸಹ ಆರಂಭವಾಗಿದ್ದು ಎಂದಿನಿಂದ
ಪ್ರಸಾರವಾಗುತ್ತದೆ ಅನ್ನುವ ನಿರೀಕ್ಷೆಯಲ್ಲಿ ಸೀರಿಯಲ್ ಪ್ರೇಮಿಗಳಿದ್ದಾರೆ. ಹಲವು ವರ್ಷಗಳ
ನಂತರದಲ್ಲಿ ಮಾಳವಿಕಾ ಅವಿನಾಶ್, ನಿರಂಜನ್ ದೇಶಪಾಂಡೆ, ಅಜಿತ್ ಹಂದೆ, ಮೇಧಾ
ವಿದ್ಯಾಭೂಷಣ್, ಚಂದನ್ ಶಂಕರ್, ಮೇಘಾ ನಾಡಿಗೇರ್, ಸುಂದರ್, ಪ್ರಶಾಂತ್ ಶೆಟ್ಟಿ, ರೂಪಾ

ಗುರುರಾಜ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ʻಮತ್ತೆ ಮನ್ವಂತರʼ
ಹಿಂದಿನ ಮನ್ವಂತರದ ಸೀಕ್ವಲ್ ಆಗಿದೆಯೇ? ಎನ್ನುವ ಪ್ರಶ್ನೆಯನ್ನು ಸಸ್ಪೆನ್ಸ್ನಲ್ಲಿ ಇಟ್ಟಿರುವ
ಸೀತಾರಾಮ್ ಇನ್ನೂ ಉತ್ತರ ಹೇಳಿಲ್ಲ. ಚಂದ್ರಹಾಸದ ಕವಿ ಎಚ್.ಎಸ್ ವೆಂಕಟೇಶ್
ಮೂರ್ತಿಯವರು ಮತ್ತೆ ಮನ್ವಂತರದ ಟೈಟಲ್ ಟ್ರಾಕ್ ರಚಿಸಿದ್ದರೇ, ಪ್ರವೀಣ್ ಡಿ. ರಾವ್ ರಾಗ
ಸಂಯೋಜನೆ ಮಾಡಿದ್ದಾರೆ ಹಾಗೂ ಕಂಚಿನ ಕಂಠದ ಸುಮಧುರ ಗಾಯಕ ವಿಜಯ್ ಪ್ರಕಾಶ್ ಹಾಡಿಗೆ
ಧ್ವನಿಯಾಗಿದ್ದಾರೆ. ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹಾಗೂ ಟಿಎನ್
ಸೀತಾರಾಮ್ ಸೇರಿ ಹಣೆದಿರುವ ಕಥೆಗೆ ಟಿಎನ್ ಸೀತಾರಾಮ್, ಅಶ್ವಿನಿ ಅನೀಶ್ ಹಾಗು ಸೌಮ್ಯಾ
ಸಾಲಿಮಠ್ ಸಂಭಾಷಣೆ ಬರೆದಿದ್ದಾರೆ.

ಈಗ ತಮ್ಮ ಭೂಮಿಕಾ ಟಾಕೀಸ್ ಯೂಟ್ಯೂಬ್ ವಾಹಿನಿಯಲ್ಲಿ ಮಾಯಾಮೃಗ ಸರಣಿಯ
ಕಂತುಗಳು ದಿನೇ ದಿನೇ ನೋಡುಗರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುತೂಹಲಕಾರಿ
ಸಸ್ಪೆನ್ಸ್ ಥ್ರಿಲ್ಲರ್ ಕನ್ನಡದ ವೆಬ್ ಸೀರಿಸ್ ಒಂದನ್ನು ನಿರ್ಮಿಸಲು ಸೀತಾರಾಮ್
ಯೋಚಿಸಿದ್ದಾರೆ. ಸತ್ತವರಾರು? ಕೊಂದವರಾರು? ಸಿಎಸ್ಪಿ ಕ್ರಾಸ್ ಎಕ್ಸಾಮಿನಿಷನ್ನಲ್ಲಿ
ಬಹಿರಂಗವಾಗುವ ಸತ್ಯ ಯಾವುದು? ಬೆಂಗಳೂರಿನ ರುದ್ರಾಕ್ಷಿಪುರದ ಗಲ್ಲಿಯೊಂದರ ಮನೆಯೊಂದರಲ್ಲಿ
ಒಂದು ಮಧ್ಯರಾತ್ರಿ ಹಾರುವ ಗುಂಡು ಕೊಂದಿದ್ದು ಯಾರನ್ನು? ಹಂತಕರು ಯಾರು? ಕೋರ್ಟ್
ರೂಂ ಡ್ರಾಮಾದಲ್ಲಿ ʻಮಾಯಾ ಮರ್ಡರ್ ಕೇಸ್' ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವ
ಕುತೂಹಲಗಳ ಮಿಶ್ರಿತ ಟ್ರೇಲರ್ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಮತಧಾನ, ಮೀರಾ ಮಾಧವ
ರಾಘವ, ಕಾಫಿ ತೋಟ ಎಂಬ ಸಿನಿಮಾಗಳನ್ನೂ ನಿರ್ದೇಶಿಸಿರುವ ಸೀತಾರಾಮ್ ಜಗದ್ವಿಖ್ಯಾತರಾಗಿದ್ದು
ಮಾತ್ರ ಕನ್ನಡ ಕಿರುತೆರೆಯ ಸೀರಿಯಲ್ ಅಂಗಳದ ಮನೆಮನೆ ಕಥೆಯ ಮ್ಯಾಜಿಕ್ ಮೂಲಕ. ಈಗ
ಮತ್ತೆ ಮನ್ವಂತರ ಮತ್ತು ಮಾಯಾ ಮರ್ಡರ್ ಕೇಸ್ ಕಥೆಗಳಲ್ಲಿ ಅದೇ ಮಾಂತ್ರಿಕಥೆ ನೋಡಬಹುದೇ
ಕಾದು ನೋಡೋಣ. ಭೂಮಿಕಾ ತಂಡಕ್ಕೆ ನಮ್ಮ ಪತ್ರಿಕೆಯ ಕಡೆಯಿಂದಲೂ ಒಂದು ಆಲ್ ದಿ ಬೆಸ್ಟ್
ಹೇಳೋಣ..

-ರೂಪಾ ಮಾಲತೇಶ್, ಸುದ್ದಿ ಸಂಪಾದಕಿ

Tags: TV
ShareTweetSend
Join us on:

Recent Posts

  • ಪುನೀತ್, ರಮ್ಯಾ..ರಿಷಬ್..ರಕ್ಷಿತ್ ಸಾಥ್ ಕೊಟ್ಟ ಹಾಸ್ಟೆಲ್ ಹುಡುಗರಿಗೆ ‘ದೂದ್ ಪೇಡಾ’ ಸಿಹಿ…
  • 7 ಸ್ಟಾರ್ ಸುಲ್ತಾನ ಕುರುಬಾನಿ ‘ಟಗರು ಪಲ್ಯ’ ಕ್ಯಾನ್ಸಲ್…
  • ತೆರೆಗೆ ಬರಲು ರೆಡಿ ‘ಬೆಂಗಳೂರು ಬಾಯ್ಸ್’..ಇದೇ 30ಕ್ಕೆ ಸಿನಿಮಾ ರಿಲೀಸ್…
  • ಸ್ವಾತಂತ್ರ್ಯ ಅಂದರೆ ಕೊಡೋದಲ್ಲ ಕಿತ್ತುಕೊಳ್ಳೋದು…
  • ದಸರಾಗಲ್ಲ ಸೆಪ್ಟಂಬರ್ ಗೆ #BoyapatiRAPO ರಿಲೀಸ್…

Recent Comments

No comments to show.

Archives

  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • ಪುನೀತ್, ರಮ್ಯಾ..ರಿಷಬ್..ರಕ್ಷಿತ್ ಸಾಥ್ ಕೊಟ್ಟ ಹಾಸ್ಟೆಲ್ ಹುಡುಗರಿಗೆ ‘ದೂದ್ ಪೇಡಾ’ ಸಿಹಿ…
  • 7 ಸ್ಟಾರ್ ಸುಲ್ತಾನ ಕುರುಬಾನಿ ‘ಟಗರು ಪಲ್ಯ’ ಕ್ಯಾನ್ಸಲ್…
  • ತೆರೆಗೆ ಬರಲು ರೆಡಿ ‘ಬೆಂಗಳೂರು ಬಾಯ್ಸ್’..ಇದೇ 30ಕ್ಕೆ ಸಿನಿಮಾ ರಿಲೀಸ್…
  • ಸ್ವಾತಂತ್ರ್ಯ ಅಂದರೆ ಕೊಡೋದಲ್ಲ ಕಿತ್ತುಕೊಳ್ಳೋದು…
  • ದಸರಾಗಲ್ಲ ಸೆಪ್ಟಂಬರ್ ಗೆ #BoyapatiRAPO ರಿಲೀಸ್…
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram