ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ತಿಂಗಳು ಕಳೆದಿದೆ.. ಆದ್ರೆ ಆ ಕಹಿ ಸತ್ಯವನ್ನ ಅರಗಿಸಿಕೊಳ್ಳಲು ಇನ್ನೂವರೆಗೂ ಸಾಧ್ಯವಾಗ್ತಿಲ್ಲ.. ಅಭಿಮಾನಿಗಳು ಕುಟುಂಬಸ್ಥರು ಇನ್ನೂ ದುಃಖದಿಂದ ಹೊರಬಂದಿಲ್ಲ.. ದೊಡ್ಮನೆ ಕುಟುಂಬ ಅಪ್ಪುವಿನ ತಿಂಗಳ ಪೂಜೆಯನ್ನು ಪುನೀತ್ ಸಮಾಧಿಗೆ ತೆರಳಿ ನೆರವೇರಿಸಿದೆ. ದೊಡ್ಮನೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಸದಾಶಿವನಗರ ಅಪ್ಪು ನಿವಾಸದಲ್ಲಿ ತಿಂಗಳ ಪೂಜೆ ತಯಾರಿ ನಡೆಸಿಕೊಂಡಿದ್ದಾರೆ. ಅಪ್ಪು ಸಮಾಧಿ ಪೂಜೆಯನ್ನು ಅಶ್ವಿನಿ, ಶಿವಣ್ಣ, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಸೇರಿ ಕುಟುಂಬಸ್ಥರು ನೆರವೇರಿಸಿದ್ರು.
ಪೊಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ಅವರು ಪುನೀತ್ ನಮ್ಮನ್ನು ಅಗಲಿ ಒಂದು ತಿಂಗಳು ಅಯ್ತು. ಒಂದು ತಿಂಗಳ ಪೂಜೆಯನ್ನು ಸಮಾಧಿ ಬಳಿ ಸಲ್ಲಿಸಿದ್ದೇವೆ. ಮನೆಗೆ ಹೋಗಿ ಈಗ ಪುನೀತ್ ಪೋಟೋಗೆ ಕುಟುಂಬದವರು ಸೇರಿ ಪೊಜೆ ಸಲ್ಲಿಸುತ್ತೇವೆ. ಇವತ್ತು ಯಾವುದೇ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿಲ್ಲ. ಸಾಂಬ್ರಾಣಿಯನ್ನು ಹಾಕಿ ಪೊಜೆ ಸಲ್ಲಿಸಿದ್ದೇವೆ. ಒಂದು ವರ್ಷದ ಕಾರ್ಯವನ್ನು ಎಲ್ಲರನ್ನು ಕರೆದು ಮಾಡುತ್ತೇವೆ ಎಂದರು.
ಅವನು ಯಾವೆಲ್ಲಾ ಸಾಮಾಜಿಕ ಕಳಕಳಿಯ ಕೆಲಸ ಮಾಡ್ತಿದ್ದ ಅದನ್ನು ಮುಂದುವರೆಸುತ್ತೇವೆ. ಅವನೇ ದಾರಿ ತೊರಿಸಬೇಕು. ಏನೇ ಮಾಡಿದ್ರು ಯಾರಿಗೂ ಗೊತ್ತಾಗಬಾರದು. ಕೆಲವೊಂದು ವಿಚಾರ ಅವನ ಜೊತೆ ಮಣ್ಣಾಗ ಬೇಕೆಂದು ಅಂದು ಕೊಂಡಿದ್ದ ಅದ್ಯಾವುದು ಹೇಳಿಲ್ಲ. ಅಲ್ಲದೇ ಪಿಆರ್ ಕೆ ಪ್ರಾಜೆಕ್ಟ್ ‘ಗಂಧದಗುಡಿ’ ಮೂಲಕ ವೈಲ್ಡ್ ಲೈಫ್ , ಕಾಡಿನ ಮಹತ್ವದ ಬಗ್ಗೆ ಒಳ್ಳೆ ಭಾವನೆಯಿಂದ ಮೂಡಿ ಬರುತ್ತಿರುವ ಡಾಕ್ಯೂಮೆಂಟರಿ ಅತಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಅದೊಂದು ಕೊನೆ ಆಸ್ತಿ ಬಿಟ್ಟು ಹೊಗಿದ್ದಾನೆ. ಸಿನಿಮಾ ಸಂದೇಶ ಎಲ್ಲರಿಗೂ ಅನ್ವಯಿಸುತ್ತದೆ ಎಂದಿದ್ದಾರೆ.. ಇತ್ತ ಅಭಿಮಾನಿಗಳೂ ಕೂಡ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. 9 ಗಂಟೆಯ ಬಳಿಕ ಅಭಿಮನಿಗಳಿಗೂ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.a