ರಾಜಮೌಳಿ ಅವರ ಜೊತೆಗೆ ಟಾಲಿವುಡ್ ನ ಸ್ಟಾರ್ ನಿರ್ದೇಶಕರ ದಂಡೇ ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ತಲಸಾನಿ ಶ್ರೀನಿವಾಸ ಯಾದವ್ ಅವರನ್ನು ಭೇಟಿಯಾಗಿ ಮಾತುಕತೆನಡೆಸಿದ್ದಾರೆ.. ಹೌದು ರಾಜಮೌಳಿ ಅವರ ನಿರ್ದೇಶನದ ರಾಮ್ ಚರಣ್ , ಜ್ಯು. NTr ನಟನೆಯ ಬಹುನಿರೀಕ್ಷೆಯ RRR ಸಿನಿಮಾ ರಿಲೀಸ್ ಗೆ ಇನ್ನೇನು ಒಂದು ತಿಂಗಳು ಬಾಕಿಯಿದೆ.. ಜನವರಿ 7 ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ತಂಡ ಒಂದೊಂದೇ ಹಾಡನ್ನ ರಿಲೀಸ್ ಮಾಡ್ತಾ ಆಫ್ ಲೈನ್ ಪ್ರಚಾರವನ್ನ ಕೂಡ ಶುರು ಮಾಡಿದೆ..
ಆದ್ರೆ ಈ ನಡುವೆ ದೇಶಾದ್ಯಂತ ಮತ್ತೆ ಓಮ್ರಿಕಾನ್ ಆತಂಕ ಶುರುವಾಗಿರೋದ್ರ ಬೆನ್ನಲ್ಲೇ ಚಿತ್ರರಂಗವೂ ಮತ್ತೆ ಆತಂಕ್ಕೀಡಾಗಿದೆ. ಮತ್ತೆ ಚಿತ್ರಮಂದಿರ ಬಂದ್ ಆದರೆ ದೊಡ್ಡ ಸಮಸ್ಯೆ ಎದುರಿಸುವಭೀತಿಯಿದೆ. ಹಾಗಾಗಿ ಅದೇ ವಿಷಯವಾಗಿ ಚರ್ಚೆ ನಡೆಸಲು ರಾಜಮೌಳಿ ನಿಯೋಗವು ಸಚಿವರನ್ನು ಭೇಟಿಯಾಗಿತ್ತು.
ಚಿತ್ರಮಂದಿರವನ್ನು ಬಂದ್ ಮಾಡಿದರೆ ಅಥವಾ 50% ಆಕ್ಯುಪೇಷನ್ ನಿಯಮ ಹೇರಿದರೆ ಬಿಡುಗಡೆ ಆಗಲಿರುವ ದೊಡ್ಡ ಸಿನಿಮಾಗಳಿಗೆ ತೀವ್ರ ಪೆಟ್ಟಾಗಲಿದೆ. ಹಾಗಾಗಿ ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಪಡೆಯಲು ರಾಜಮೌಳಿ ನಿಯೋಗವನ್ನು ಕರೆದೊಯ್ದಿದ್ದರು. ಸಭೆಯ ಬಳಿಕ ಮಾತನಾಡಿರುವ ಸಚಿವ ತಲಸಾನಿ ಶ್ರೀನಿವಾಸ ಯಾದವ್, ಚಿತ್ರಮಂದಿರಗಳನ್ನು ಬಂದ್ ಮಾಡುತ್ತೇವೆ ಅಥವಾ 50% ಆಕ್ಯುಪೆನ್ಸಿ ನಿಯಮ ಹೇರುತ್ತೇವೆ ಎನ್ನುವುದು ಸುಳ್ಳು. ಪ್ರೇಕ್ಷಕರು ಈ ಮೊದಲಿನಂತೆಯೇ ಸಿನಿಮಾಗಳನ್ನು ವೀಕ್ಷಿಸಬಹುದು ಎಂದಿದ್ದಾರೆ. ಅಲ್ಲದೇ ಹೊಸ ಕೊರೊನಾ ತಳಿಯನ್ನು ಎದುರಿಸಲು ಸರ್ಕಾರವು ಸಜ್ಜಾಗಿದೆ. ಪ್ರಜೆಗಳು ನಿಶ್ಚಿಂತೆಯಿಂದ ಇರಬಹುದು. ಆದರೆ ಸಿನಿಮಾ ವೀಕ್ಷಿಸುವ ಪ್ರೇಕ್ಷಕರು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಸಿನಿಮಾ ನೋಡಬೇಕು ಎಂದಿದ್ದಾರೆ.
ರಾಜಮೌಳಿ ಜೊತೆಗೆ ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್, ನಿರ್ಮಾಪಕ ದಿಲ್ ರಾಜು, ಸುನಿಲ್ ನಾರಂಗ್, ಡಿವಿವಿ ದಯಾನಂದ್, ಸೂರ್ಯದೇವರ ನಾಗವಂಸಿ ಸೇರಿದಂತೆ ಹಲವರು ಸಚಿವರನ್ನ ಭೇಟಿ ಮಾಡಿದ್ದರು.
ಇದೆಲ್ಲದರ ತೆಲಂಗಾಣ , ಆಂಧ್ರದಲ್ಲಿ ಟಿಕೆಟ್ ದರ ಸರ್ಕಾರವೇ ನಿಗದಿ ಮಾಡುವ ಗೊಂದಲ ಹೈ ಕೋರ್ಟ್ ಅಂಗಳತಲುಪಿದೆ.. ಇದೀಗ ಓಮ್ರಿಕಾನ್ ಆತಂಕ ಬೇರೆ.. ಹೀಗಾಗಿ ರಿಲೀಸ್ ಗೆ ರೆಡಿಯಾಗಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ತಲೆನೋವಾಗಿ ಪರಿಣಮಿಸಬಹದು.. RRR , ರಾಧೆ-ಶ್ಯಾಮ್, ಆಚಾರ್ಯ , ಭೀಮ್ಲ ನಾಯಕ್, ಪುಷ್ಪ, ಸರ್ಕಾರು ವಾರಿ ಪಾಠ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ಕ್ಯೂನಲ್ಲಿ ನಿಂತಿವೆ..