ಚಂದನವನದ ಹಿರಿಯ ಕಲಾವಿದ ಶಿವರಾಂ ಅವರು ಇನ್ನಿಲ್ಲ..
ಬೆಂಗಳೂರು : ಚಂದನವನದ ಹಿರಿಯ ಕಲಾವಿದ ಶಿವರಾಂ ಅವರು ನಿಧನ ಹೊಂದಿದ್ದಾರೆ.. ಮೆದುಳಿನ ರಕ್ತಸ್ರಾವದಿಂದ ನಗರದ ಬ್ಯಾಂಕ್ ಕಾಲೋನಿಯಲ್ಲಿನ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತದ್ದ ಶಿವರಾಮ್ ಅವರು ಕಡೆಗೆ ಕೋಮಾ ತಲುಪಿದ್ದರು.. ಇದೀಗ ಆಸ್ಪತ್ರೆಯಲ್ಲೇ ಇಂದು ಕೊನೆಯುಸಿರೆಳೆದಿದ್ದಾರೆ.. ಶಿವರಾಮ್ ಅವರ ನಿಧನಕ್ಕೆ ಇಡೀ ಸ್ಯಾಂಡಲ್ ಕಂಬನಿ ಮಿಡಿದಿದೆ.. ಚಂದನವನದ ಅನೇಕ ಹಿರಿಯ ನಟ-ನಟಿಯರು ಬಂದು ಅವರನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ 83 ವರ್ಷದ ಶಿವರಾಮ್ ಅವರು ನಿಧನರಾಗಿದ್ದಾರೆ.
ಶಿವರಾಂ ಅವರು ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಟೆರೆಸ್ನಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದರು. ಅಲ್ಲಿಗೆ ತೆರಳಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಒಂದೂವರೆ ಗಂಟೆ ಬಳಿಕ ಅದು ಅವರ ಕುಟುಂಬದವರ ಗಮನಕ್ಕೆ ಬಂದಿತ್ತು. ಅವರ ಮಗ ಮತ್ತು ಮೊಮ್ಮಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿಅವರನ್ನ ಸೇರಿಸಿದ್ರು. ಎಂಆರ್ಐ ಸ್ಕ್ಯಾನ್ ಮಾಡಿದಾಗ ತಲೆ ಒಳ ಭಾಗಕ್ಕೆ ಪೆಟ್ಟು ಬಿದ್ದಿರುವುದಾಗಿ ತಿಳಿದುಬಂದಿತ್ತು..
ಕನ್ನಡದ ನೂರಾರು ಚಿತ್ರಗಳಲ್ಲಿ ಪೋಷಕ ನಟರಾಗಿ ಶಿವರಾಂ ನಟಿಸಿದ್ದಾರೆ, ಡಾ. ರಾಜ್ಕುಮಾರ್ ವಿಷ್ಣುವರ್ಧನ್ ಅಂಬರೀಶ್ ಸೇರಿದಂತೆ ಹಿರಿಯ ಕಲಾವಿದರ ಜೊತೆ ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಅಷ್ಟೆ ಅಲ್ಲದೆ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ.
ಬೆರೆತ ಜೀವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು.. ನಾಗರಹಾವು , ಗೆಜ್ಜೆಪೂಜೆ , ಶರಪಂಜರ , ಹೀಗೆ ಅನೇಕ ಸಿನಿಮಾಗಳಲ್ಲಿ ಅವರ ಪಾತ್ರಗಳಿಗೆ ಜೀವ ತುಂಬುತ್ತಿದ್ದರು ಶಿವರಾಮ್ ಅವರು.. ಶಿವರಾಮ್ ಅವರು ಹುಟ್ಟಿದ್ದು ಬೆಳೆದ್ದಿದ್ದು ಚೆನ್ನೈನಲ್ಲಿ.. ಆದ್ರೆ ಅವರು ನಟನೆ ಆರಂಭಿಸಿದ್ದು ಕನ್ನಡದ ಸಿನಿಮಾಗಳ ಮೂಲಕ.. ಅನೇಕ ಸಿನಿಮಾಗಳಲ್ಲಿ ಶಿವರಾಮ್ ಅವರು ಬಹಳ ವಿಶೇಷ ಕೆಲಸಗಳನ್ನ ಮಾಡಿದ್ದಾರೆ.. ರಾಶಿ ಬ್ರದರ್ಸ್ ಸಿನಿಮಾ ಸಂಸ್ಥೆಯಡಿ ಸಾಕಷ್ಟು ಸಿನಿಮಾಗಳನ್ನ ನಿರ್ಮಿಸಿದ್ದಾರೆ..