ಕೆಚ್ಚೆದೆಯ ಕನ್ನಡದ ಕಣ್ಮನಿ.. ಸದ್ದು ಮಾಡ್ತಿದೆ ಅಪ್ಪು ಸಾಂಗ್
ಕೆಚ್ಚೆದೆಯ ಕನ್ನಡದ ಕಣ್ಮನಿ.. ಅಭಿಮಾನಿ ದೇವರುಗಳಿಗೆ ನೀವು ಧಣಿ. ಎಲ್ಲ ಯುವಕರಿಗೋಸ್ಕರ ನಿಮ್ ದನಿ. ಪ್ರೀತಿ ಪಡೆದಿರೋ ಕನ್ನಡಿಗ ಚಿರಋಣಿ.. ಎಂಬ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. Kechedya Kannadada Kanmani punith raj kumar song
ನಮ್ಮ ನಿಮ್ಮೆಲ್ಲರ ಪ್ರೀತಿ ಅಪ್ಪು ಸರ್, ನಮ್ಮನ್ನ ಅಗಲಿ ಮೂರು ತಿಂಗಳು ಕಳೆದಿದೆ. ಆದ್ರೂ ಅವರ ಮೇಲಿನ ಪ್ರೀತಿ ಯಾರಲ್ಲೂ ಕಡಿಮೆಯಾಗಿಲ್ಲ. ಅವರ ಅಭಿಮಾನಿಗಳು ಪ್ರತಿದಿನ ಸ್ಮರಿಸುತ್ತಲೇ ಇರ್ತಾರೆ. ಅವರ ವಿಡಿಯೋಗಳನ್ನು ವೈರಲ್ ಮಾಡುತ್ತಲೇ ಇರುತ್ತಾರೆ.
ಇನ್ನೂ ಕೆಲವರು ಇನ್ನೊಂದೆಜ್ಜೆ ಮುಂದೆ ಬಂದು ಅಪ್ಪು ಸರ್ ಗಾಗಿಯೇ ಹೊಸ ಹೊಸ ಆಲ್ಬಂ ಸಾಂಗ್ ಗಳನ್ನು ಮಾಡಿ ಅಭಿಮಾನ ಮೆರೆಯುತ್ತಿದ್ದಾರೆ. ಅದರಂತೆ ಇದೀಗ ಯುಟ್ಯೂಬ್ ನಲ್ಲಿ ಅಪ್ಪು ಸರ್ ಗೆ ಟ್ರಿಬ್ಯೂಟ್ ಮಾಡಿರುವ ಸಾಂಗ್ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ರ್ಯಾಪರ್ ರಾಹುಲ್ ಡಿಟೋ , ಅಪ್ಪು ಸರ್ ಟ್ರಿಬ್ಯೂಟ್ ಮಾಡಿ ಹಾಡೊಂದನ್ನ ಬಿಡುಗಡೆ ಮಾಡಿದ್ದಾರೆ. ಕೆಚ್ಚೆದೆಯ ಕನ್ನಡದ ಕಣ್ಮನಿ.. ಅಭಿಮಾನಿ ದೇವರುಗಳಿಗೆ ನೀವು ಧಣಿ ಅಂತಾ ಶುರುವಾಗುವ ಹಾಡಿಗೆ ಪುನೀತ್ ಅಭಿಮಾನಿಗಳು ಫುಲ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಡಿಯೋ 5 ಮಿಲಿಯನ್ ಗೂ ಹೆಚ್ಚು ವೀವ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ.