ಗ್ರಾಮಿ ಅವಾರ್ಡ್ ಶೋನಲ್ಲಿ ಲತಾ ಮಂಗೇಶ್ಕರ್ ಅವರ ಕಡೆಗಣನೆ – ಕಂಗನಾ ಗರಂ
ಸಂಗೀತ ಕ್ಷೇತ್ರದ ಅತ್ಯುತ್ತಮ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ.. ಪ್ರತಿ ಗಾಯಕರು , ಸಂಗೀತ ಜಗತ್ತಿನ ಕಲಾವಿದರು ಈ ಪ್ರಶಸ್ತಿ ಪಡೆಯಬೇಕೆಂಬ ಕನಸು ಕಂಡಿರುತ್ತಾರೆ.. ಅಂದ್ಹಾಗೆ ಗ್ರಾಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಂಗೀತ ಲೋಕದ ದಂತಕಥೆ , ಲೆಜೆಂಡರಿ ಸಿಂಗರ್ ದಿವಂಗತ ಲತಾ ಮಂಗೇಶ್ಕರ್ ಅವರನ್ನ ಕಡೆಗಣಿಸಲಾಗಿದೆ ಎನ್ನಲಾಗ್ತಿದೆ..
ಹೌದು ಲಾಸ್ ವೇಗಾಸ್ ನಲ್ಲಿ ನಡೆದ ಗ್ರಾಮಿ ಅವಾರ್ಡ್ ಶೋ ವೇಳೆ ಸಂಗೀತ ಲೋಕದ ಅನೇಕರನ್ನು ಸನ್ಮಾನಿಸಲಾಯಿತು. ಆದ್ರೆ ಆದರೆ ಸಮಾರಂಭದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಿಗಬೇಕಾಗಿದ್ದ ಗೌರವವನ್ನ ಸಲ್ಲಿಸಲಿಲ್ಲ.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಆಕ್ರೋಶ ಹೊರಹಾಕುತ್ತಿದ್ದಾರೆ.,. ಅಂತೆಯೇ ಕಂಗನಾ ರಣಾವತ್ ಸಹ ಕಿಡಿಕಾರಿದ್ದಾರೆ..
ಕಂಗನಾ ರಣಾವತ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಲ್ಲಲ್ಲಿ ಈ ಕುರಿತು ಬರೆದುಕೊಂಡಿದ್ದು, ಪಾಶ್ಚಿಮಾತ್ಯ ಪ್ರಶಸ್ತಿಯನ್ನು ಬಹಿಷ್ಕರಿಸುವ ಬಗ್ಗೆ ಕಂಗನಾ ಮಾತನಾಡಿದ್ದಾರೆ. “ಅಂತರರಾಷ್ಟ್ರೀಯ ಎಂದು ಹೇಳಿಕೊಳ್ಳುವ ಮತ್ತು ಹಿರಿಯ ಕಲಾವಿದರನ್ನು ಅವರ ಜಾತಿ ಅಥವಾ ಸಿದ್ಧಾಂತಗಳ ಕಾರಣದಿಂದ ನಿರ್ಲಕ್ಷಿಸುವ ಇಂಥಹ ಲೋಕಲ್ ಪ್ರಶಸ್ತಿಯ ವಿರುದ್ಧ ನಾವು ಬಲವಾದ ನಿಲುವು ತೆಗೆದುಕೊಳ್ಳಬೇಕು” ಎಂದು ಬರೆದಿದ್ದಾರೆ.
ಲತಾ ದೀದಿ ಅವರನ್ನ ‘ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ” ಎಂದಿರುವ ಕಂಗನಾ ಆಸ್ಕರ್ ಮತ್ತು ಗ್ರ್ಯಾಮಿ ಎರಡೂ ಪ್ರಶಸ್ತಿಗಳು ಭಾರತ ರತ್ನ ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸಲು ವಿಫಲವಾಗಿವೆ. ಜಾಗತಿಕ ಪ್ರಶಸ್ತಿಗಳೆಂದು ಹೇಳಿಕೊಳ್ಳುವ ಈ ಪಕ್ಷಪಾತದ ಲೋಕಲ್ ಕಾರ್ಯಕ್ರಮಗಳನ್ನು ನಮ್ಮ ಮಾಧ್ಯಮಗಳು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅಂದಹಾಗೆ ಈ ಬಾರಿ ಇಬ್ಬರು ಭಾರತೀಯ ಸಂಗೀತಗಾರರಾದ ರಿಕ್ಕಿ ಕೇಜ್ ಮತ್ತು ಫಲ್ಗುಣಿ ಶಾ ಅವರು ಪ್ರಶಸ್ತಿಗೆ ಭಾಜನರಾದರು.