KGF 2 : ರಿಲೀಸ್ ಗೂ ಮುನ್ನ ಧರ್ಮಸ್ಥಳ ಕುಕ್ಕೆಗೆ ಯಶ್ ಭೇಟಿ..!!
ಈಗಿನಿಂದಲೇ ಥಿಯೇಟರ್ ಗಳ ಮುಂದೆ ರಾಕಿ ಅಬ್ಬರ ಶುರುವಾಗ್ತಿದೆ… KGF ಕಾವು ರಂಗೇರುತ್ತಿದೆ.. ಟೀಸರ್ , ಟ್ರೇಲರ್ ಕಡೆಗೆ ಪ್ರಮೋಷನ್ ವಿಚಾರದಲ್ಲೂ ಬ್ಲಾಕ್ ಬಾಸ್ಟರ್ ಸಿನಿಮಾಗಳ ದಾಖಲೆ ಮುರಿದಿರು KGF 2 ಈಗ ಮತ್ತೊಂದು ವಿಚಾರದಲ್ಲಿ RRR ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಸಿನಿಮಾ ತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ.. ಇತ್ತೀಚೆಗೆ ಮುಂಬೈಗೆ ತೆರಳಿ ಪ್ರಚಾರ ಮಾಡಿದ ರಾಕಿ ಭಾಯ್ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದರು… ಸಿನಿಮಾ ತಂಡ ಪ್ರಮೋಷನ್ ಗೆ ವಿಭಿನ್ನ ಸ್ಟ್ರಾಟಜಿಗಳನ್ನ ಬಳಸಿಕೊಳ್ತಿದೆ.. ಈ ನಡುವೆ ಸಿನಿಮಾ ರಿಲೀಸ್ ಗೆ ಮೂರು ದಿನಗಳಿರುವಾಗಲೇ ರಾಕಿಂಗ್ ಸ್ಟಾರ್ ಯಶ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ಸುರ್ಬಮಣ್ಯ ಸ್ವಾಮಿ ದರ್ಶನ ಪಡೆದಿದ್ದಾರೆ.
ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಬಂದಿದ್ದ ಯಶ್ ನಂತರ ಕಾರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದಾರೆ. ಯಶ್ ಜೊತೆಯಲ್ಲಿ ಕೆ.ಜಿ.ಎಫ್ ನಿರ್ಮಾಪಕ ವಿಜಯ್ ಕಿರಂಗದೂರು ಸಹ ದೇವರ ದರ್ಶನ ಪಡೆದಿದ್ದು, ವಿಶೇಷ ಪೂಜೆ ಸಲ್ಲಿಸಿದ್ಧಾರೆ. ಧರ್ಮಸ್ಥಳದಲ್ಲಿ ವಿಶೇಷ ಪೂಜೆಯ ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಯಶ್ ಭೇಟಿ ಮಾಡಿ ಮಾತುಕತೆ ನಡೆಸಿ, ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ಹೆಗ್ಗಡೆಯವರು ಯಶ್ ಗೆ ಶಾಲು ಹೊದಿಸಿ ಗೌರವಿಸಿದ್ದಾರೆ. ಇನ್ನು ಕುಕ್ಕೆ ಮತ್ತು ಧರ್ಮಸ್ಥಳದಲ್ಲಿ ಭಾನುವಾರವಾಗಿದ್ದ ಕಾರಣ ಜನರು ಹೆಚ್ಚಿದ್ದರು, ಈ ನಡುವೆ ರಾಕಿಂಗ್ ಸ್ಟಾರ್ ನೋಡಿ, ನಟ ಯಶ್ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಅಲ್ಲದೇ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯಶ್ ಮತ್ತು ವಿಜಯ್ ಕಿರಗಂದೂರು ಬಿಳಿ ಪಂಚೆ ಮತ್ತು ಶರ್ಟ್ ಧರಿಸಿದ್ದರು,..