Kangana Ranouth
ಬಾಲಿವುಡ್ ನಟಿ ಕಂಗನಾ ರಣೌತ್ ಹಾಗೂ ವಿವಾದಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ವಿವಾದಗಳೇ ಕಂಗನಾರನ್ನ ಬಿಟ್ರೂ ವಿವಾದಗಳು ಕಂಗನಾ ಬೆನ್ನು ಬಿಡಲ್ಲ.. ಎಷ್ಟು ಒಳ್ಳೆ ನಟಿ ಎಂಬ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೋ ಅದಕ್ಕಿಂತ 100 ಪಟ್ಟು ವಿವಾದಗಳ ಮೂಲಕವೇ , ಸದಾ ಏನಾದ್ರೂ ಒಂದು ವಿಚಾರವನ್ನ , ಯಾರದರೂ ಒಬ್ರನ್ನ ವಿರೋಧಿಸುತ್ತಲೇ , ನೇರವಾಗಿ ಮಾತನಾಡ್ತಾ ದಿಟ್ಟತನ ಪ್ರದರ್ಶಿಸುವ ನಟಿ..
ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿರುವ ಜ್ಞಾನವ್ಯಾಪಿ ಮಸೀದಿ ವಿವಾದದ ಬಗ್ಗೆ ಮಾತನಾಡಿದ್ದಾರೆ..
ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಪವಿತ್ರ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವ್ಯಾಪಿ ಮಸೀದಿ ಆವರಣದೊಳಗೆ ನಡೆಸಿರುವ ವಿಡಿಯೋಗ್ರಫಿ ಸಮೀಕ್ಷೆಯಲ್ಲಿ ಶಿವಲಿಂಗ ಪತ್ತೆಯಾಗಿದೆ.
ಸದ್ಯ ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಪ್ರಕರಣದ ಬಗ್ಗೆ ಕಂಗನಾ ರನೌತ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಅವರ ಅಭಿನಯದ ‘ಧಾಕಡ್’ ಸಿನಿಮಾ ರಿಲೀಸ್ ಆಗಿದೆ.. ಆದ್ರೆ ಸಿನಿಮಾ ರಿಲೀಸ್ ಗೂ ಒಂದು ದಿನದ ಹಿಂದೆ ಕಂಗನಾ ಅಂಡ್ ಟೀಮ್ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜ್ಯಾನವ್ಯಾಪಿ ಮಸೀದಿ ಪ್ರಕರಣದ ಬಗ್ಗೆ ಕಂಗನಾ ಮಾತನಾಡಿದ್ದಾರೆ.
ಮಥುರಾದ ಕಣ ಕಣದಲ್ಲಿ ಶ್ರೀ ಕೃಷ್ಣ ಹೇಗಿದ್ದಾನೋ, ಅಯೋಧ್ಯೆಯ ಕಣ ಕಣದಲ್ಲಿ ಶ್ರೀರಾಮ ಹೇಗಿದ್ದಾನೋ, ಹಾಗೇ ಕಾಶಿಯ ಕಣ ಕಣದಲ್ಲೂ ಶಿವ ಇದ್ದಾನೆ. ಶಿವನಿಗೆ ಯಾವುದೇ ಸ್ಥಳದ ಅವಶ್ಯಕತೆಯಿಲ್ಲ. ಕಣ ಕಣದಲ್ಲೂ ಶಿವ ಇರುತ್ತಾನೆ. ಹರ ಹರ ಮಹಾದೇವ್ ಎಂದಿದ್ದಾರೆ.
ಪ್ರತಿಯೊಬ್ಬರ ಮನೆಯ , ಮನಸ್ಸಿನ ಕಥೆ “ದೃಶ್ಯಕಾವ್ಯ”…!!!