ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಸೂಪರ್ ಸಕ್ಸಸ್ ಕಾಣ್ತಿದೆ.. ಮೊದಲನೇ ವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.. ಸಿನಿಮಾದಲ್ಲಿ ಮಹೇಶ್ ಬಾಬು ಕೀರ್ತಿ ಸುರೇಶ್ ಕೆಮಿಸ್ಟ್ರಿಗೆ ಜನ ಫಿದಾ ಆಗಿದ್ದಾರೆ..
ಆದ್ರೆ ಇದೆಲ್ಲದರ ನಡುವೆ ಇದೀಗ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ ಗಳು ಹರಿದಾಡಲಾರಂಭಿಸಿದೆ.. ಸಿನಿಮಾದಲ್ಲಿ ಒಂದು ದೃಶ್ಯದ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಿದ್ದಾರೆ..
ಸಿನಿಮಾ ಈಗಾಗಲೇ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಇದರ ಬೆನ್ನಲ್ಲೇ ವಿವಾದ ಸಿನಿಮಾ ಬೆನ್ನಿಗೆ ಅಂಟಿದೆ. ಸಿನಿಮಾದ ದೃಶ್ಯವೊಂದರಲ್ಲಿ ಮಹೇಶ್ ಬಾಬು ನಾಯಕಿ ಕೀರ್ತಿ ಸುರೇಶ್ ಅವರನ್ನು ಮುಟ್ಟಿರುವುದಕ್ಕೆ ವಿವಾದ ಸೃಷ್ಟಿಯಾಗಿದೆ.
ಚಿತ್ರದ ಸನ್ನಿವೇಶವೊಂದ್ರಲ್ಲಿ ನಟ ಮಹೇಶ್ ಬಾಬು ಬಲವಂತವಾಗಿ ಕೀರ್ತಿ ಸುರೇಶ್ ತನ್ನ ಪಕ್ಕ ಮಲಗುವಂತೆ ಮಾಡುತ್ತಾರೆ. ನಂತರ ತನ್ನ ಕಾಲು ಆಕೆಯ ಮೇಲೆ ಹಾಕುತ್ತಾರೆ. ಈ ದೃಶ್ಯ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಈ ದೃಶ್ಯದ ಕುರಿತು ನಿರ್ದೇಶಕ ಪರಶುರಾಮ್ ಪ್ರತಿಕ್ರಿಯಿಸಿದ್ದಾರೆ, ಆ ದೃಶ್ಯದಲ್ಲಿ ಏನು ತಪ್ಪಿದೆ. ಮಗುವೊಂದು ತನ್ನ ತಾಯಿಯ ಪಕ್ಕ ಮಲಗಲು ಆಸೆಪಟ್ಟಂತೆ ಇಲ್ಲಿ ನಾಯಕ, ನಾಯಕಿಯ ಪಕ್ಕ ಮಲಗಿದ್ದಾರೆ ಎಂದು ಉತ್ತರಿಸಿದ್ದಾರೆ. ಆದ್ರೆ ನಿರ್ದೇಶಕರ ಉತ್ತರಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.
ತಾಯಿಗೂ ನಾಯಕಿಗೂ ಕಂಪೇರ್ ಮಾಡಬೇಡಿ. ಕೆಟ್ಟ ದೃಶ್ಯವನ್ನು ಚಿತ್ರೀಕರಿಸಿರುವುದಲ್ಲದೇ ಅದಕ್ಕೆ ಹೀಗೆ ಪ್ರತಿಕ್ರಿಯಿಸುತ್ತೀರಾ.. ನಾಯಕಿಯನ್ನು ಭೋಗದ ವಸ್ತಗಳಂತೆ ತೋರಿಸುವುದು ನಿಲ್ಲಿಸಿ ಎಂದು ನಿರ್ದೇಶಕ ಪರಶುರಾಮ್ ಮೇಲೆ ಕಿಡಿಕಾರಿದ್ದಾರೆ.