ಪುಷ್ಪ ಸಿನಿಮಾದ ನಂತರ ಅಲ್ಲು ಅರ್ಜುನ್ ಇಂಡಿಯನ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.. ಅಂದ್ಹಾಗೆ ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಉತ್ತಮ ನಟನ ಜೊತೆಗೆ ಅಲ್ಲು ಅರ್ಜುನ್ ಒಬ್ಬ ಮಾದರಿ ಫ್ಯಾಮಿಲಿ ಮ್ಯಾನ್ ಕೂಡ ಹೌದು.. ಸ್ನೇಹಾ ರೆಡ್ಡಿ ಅವರೊಂದಿಗೆ 2011ರ ಮಾರ್ಚ್ 6ರಂದು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ..
ಅಲ್ಲು ಅರ್ಜುನ್ ನಟನಾಗಿ ಅಭಿಮಾನಿಗಳನ್ನ ರಂಜಿಸುವುದರ ಜೊತೆಗೆ ಉತ್ತಮ ಪತಿಯಾಗಿ , ತಂದೆಯಾಗಿಯೂ ಅವರ ಜೊತೆಗೆ ಸಮಯ ಕಳೆಯುತ್ತಾರೆ.. ಇದೀಗ ಅಲ್ಲು ಅರ್ಜುನ್ ಬಗ್ಗೆ ಅವರ ಮಾವ ಚಂದ್ರಶೇಖರ ರೆಡ್ಡಿ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು , “ ಬನ್ನಿಗೆ ನಾನು ನೂರಕ್ಕೆ ನೂರು ಅಂಕ ಕೊಡುತ್ತೇನೆ. ಆತ ಒಬ್ಬ ಅದ್ಭುತ ಕಲಾವಿದ. ಅಲ್ಲು ಅರ್ಜುನ್ ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಜನಪ್ರಿಯ ನಟ. ಆತನ ಹಾಡುಗಳನ್ನು, ಸಿನಿಮಾಗಳನ್ನು ಜಮ್ಮು ಕಾಶ್ಮೀರದಲ್ಲಿ ಸಹ ನೋಡುತ್ತಿದ್ದಾರೆ. ಇಷ್ಟು ದೊಡ್ಡ ಜನಪ್ರಿಯತೆ ಗಳಿಸಿಕೊಳ್ಳಲು ದೊಡ್ಡ ಮಟ್ಟದ ಶ್ರಮ ಬೇಕಾಗುತ್ತದೆ. ಅದಕ್ಕಾಗಿ ಅವರು ಬಹಳ ಶ್ರಮಪಡುತ್ತಾರೆ” ಎಂದು ಕೊಂಡಾಡಿದ್ದಾರೆ.
ಅಲ್ಲದೇ ಅಲ್ಲುಗೆ 100 ಕ್ಕೆ 100 ಅಂಕಗಳನ್ನು ಕೊಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಅಲ್ಲು ವರದಕ್ಷಿಣೆ ತೆಗೆದುಕೊಂಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅಲ್ಲು ವರದಕ್ಷಿಣೆ ತೆಗೆದುಕೊಂಡಿಲ್ಲ, ಅಲ್ಲು ಅರ್ಜುನ್ ಕುಟುಂಬದವರು ವರದಕ್ಷಿಣಗೆ ವಿರೋಧವಾಗಿದ್ದರು. ಅಲ್ಲದೆ ಅಲ್ಲು ಅರ್ಜುನ್ ಅವರೇ ಸಾಕಷ್ಟು ಸಿರಿವಂತರಾಗಿದ್ದಾರೆ, ಅವರಿಗೆ ವರದಕ್ಷಿಣೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.