ಅಮಿರ್ ಖಾನ್ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಐಪಿಎಲ್ ಕೊನೆಯ ಪಂದ್ಯದ ವೇಳೆ ರಿಲೀಸ್ ಆಗಿತ್ತು.. ಆದ್ರೀಗ ಅದ್ಯಾಕೋ ಬಾಯ್ ಕಾಟ್ ಲಾಲ್ ಸಿಂಗ್ ಛಡ್ಡಾ ಟ್ರೆಂಡ್ ಶುರುವಾಗಿಬಿಟ್ಟಿದೆ..
ಒಂದೆಡೆ ಸಿನಿಮಾದ ಟ್ರೇಲರ್ ಭಾರೀ ಮೆಚ್ಚುಗೆ ಒಡೆದುಕೊಂಡಿದೆ.. ಅದೇ ಮತ್ತೊಂದೆಡೆ ಕೆಲವರು ಸಿನಿಮಾ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಬಾಯ್ಕಾಟ್ ಬಾಲಿವುಡ್ , ಬಾಯ್ಕಾಟ್ ಲಾಲ್ ಸಿಂಗ್ ಛಡ್ಡಾ ಟ್ರೆಂಡ್ ಆಗ್ತಿದೆ..
ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಹಳೆಯ ವಿವಾದಾತ್ಮಕ ಹೇಳಿಕೆಗಳು ಈಗ ಮತ್ತೆ ಚರ್ಚೆಯಾಗ್ತಿದೆ.. ಲಾಲ್ ಸಿಂಗ್ ಛಡ್ಡಾ ಸಿನಿಮಾವನ್ನು ನಿಷೇಧಿಸುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಅಮೀರ್ ಖಾನ್ ಹಿಂದೊಮ್ಮೆ, ಶಿವಲಿಂಗಕ್ಕೆ ಹಾಲು ಸುರಿವ ಬದಲು ಅದೇ ಹಾಲನ್ನು ಮಕ್ಕಳಿಗೆ ನೀಡಿ ಅದರಿಂದ ಸಹಾಯವಾದರೂ ಆಗುತ್ತದೆ ಎಂದಿದ್ದರು. ಅಮೀರ್ ಖಾನ್ ರ ಆ ಹೇಳಿಕೆ ಆಗ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಬಳಿಕ ದೇಶದಲ್ಲಿ ಅಸಹನೆ ಹೆಚ್ಚುತ್ತಿದೆ, ಮಕ್ಕಳ ಭವಿಷ್ಯಕ್ಕಾಗಿ ದೇಶ ಬಿಟ್ಟು ಹೋಗೋಣ ಎಂದು ನನ್ನ ಪತ್ನಿ ಕಿರಣ್ ರಾವ್ ಹೇಳಿದ್ದಳು ಎಂದು ಹೇಳಿದ್ದರು. ಆಗಲೂ ಅಮೀರ್ ಖಾನ್ ಹೇಳಿಕೆಗೆ ತೀವ್ರ ವಿರೋಧ ಎದುರಾಗಿತ್ತು. ಈಗ ಈ ಹೇಳಿಕೆಗಳನ್ನ ಮತ್ತೆ ನೆಟಟ್ಟಿಗರು ವೈರಲ್ ಮಾಡತೊಡಗಿದ್ದಾರೆ.
ಅಮೀರ್ ಖಾನ್ಗೆ ಬುದ್ಧಿ ಕಲಿಸಲು ಲಾಲ್ ಸಿಂಗ್ ಛಡ್ಡಾ ಸಿನಿಮಾ ನಿಷೇಧಿಸಿ, ಹಿಂದು ವಿರೋಧಿ ಹೇಳಿಕೆ ನೀಡಿದ ಅಮೀರ್ ಖಾನ್ ಸಿನಿಮಾ ನೋಡಬೇಡಿ ಎಂದು ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.
ಅಷ್ಟೇ ಅಲ್ದೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಕರೀನಾ ಕಪೂರ್ ಹಳೆಯ ಹೇಳಿಕೆಯನ್ನೂ ನೆಟ್ಟಿಗರು ವೈರಲ್ ಮಾಡ್ತಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಜೊತೆಗಿನ ಸಂದರ್ಶನದಲ್ಲಿ ಸ್ಟಾರ್ ನಟರ ಮಕ್ಕಳ ಸಿನಿಮಾಗಳನ್ನು ನೋಡಿದ್ದು ಇದೇ ಜನ, ಅವರೇ ಸ್ಟಾರ್ ನಟರ ಮಕ್ಕಳನ್ನು ಸ್ಟಾರ್ಗಳನ್ನಾಗಿ ಮಾಡಿದ್ದು, ನಿಮಗೆ ಸ್ಟಾರ್ ನಟರ ಮಕ್ಕಳು ನಟರಾಗುವುದು ಇಷ್ಟವಿಲ್ಲದಿದ್ದರೆ ಅವರ ಸಿನಿಮಾವನ್ನು ನೋಡಬೇಡಿ, ನಾವು ನಿಮಗೆ ಬಲವಂತ ಮಾಡಿಲ್ಲ ಎಂದಿದ್ದರು. ಈ ಹೇಳಿಕೆಯನ್ನೂ ಇಟ್ಟುಕೊಂಡು ಈಗ ಲಾಲ್ ಸಿಂಗ್ ಛಡ್ಡಾ ಸಿನಿಮಾದ ನಿಷೇಧಕ್ಕೆ ಒತ್ತಾಯಿಸಲಾಗುತ್ತಿದೆ.