ಸದ್ಯಕ್ಕೆ ಸೌತ್ ಇಂಡಸ್ಟ್ರಿಯಲ್ಲಿ ಒನ್ ಆಫ್ ದ ಬ್ಯುಸಿಯೆಸ್ಟ್ ನಟಿಯರ ಪೈಕಿ ಒಬ್ಬರು ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್..
ಸದ್ಯಕ್ಕೆ ಮಹೇಶ್ ಬಾಬು ಅವರ ನಟನೆಯ ಸರ್ಕಾರು ವಾರಿ ಪಾಟ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿರುವ ನಟಿ ಕೀರ್ತಿ ಸುರೇಶ್ ಇದೀಗ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ..
ಇತ್ತೀಚೆಗೆ ಅನೌನ್ಸ್ ಆಗಿರುವ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರೇ ನಾಯಕಿ ಎನ್ನಲಾಗ್ತಿದೆ..
ಮದಗಜ ಸಿನಿಮಾ ಖ್ಯಾತಿಯ ಮಹೇಶ್ ಆಕ್ಷನ್ ಕಟ್ ಹೇಳಲಿರುವ ಅಭಿಷೇಕ್ ಅಂಬರೀಶ್ 4ನೇ ಚಿತ್ರಕ್ಕೆ ಕೀರ್ತಿ ಸುರೇಶ್ ಅವರನ್ನ ಕರೆತರುವ ಕಸರತ್ತು ನಡೆಸುತ್ತಿದೆಯಂತೆ ಸಿನಿಮಾತಂಡ..
ಸದ್ಯ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಮತ್ತು ಕಾಳಿ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಇದೆರೆಡೂ ಸಿನಿಮಾಗಳ ಶೂಟಿಂಗ್ ಮುಕ್ತಾಯವಾಗ್ತಿದ್ದ ಹಾಗೆ ಮಹೇಶ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.