ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾ ನೋಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊಂಡಾಡಿದ್ದಾರೆ..
‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಸೆಲಿಬ್ರಿಟಿ ಶೋನಲ್ಲಿ ಗಣ್ಯರು ಆಗಮಿಸಿದ್ದರು.. ಇದೇ ವಿಶೇಷ ಪ್ರದರ್ಶನಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನೂ ಕೂಡ ಆಹ್ವಾನಿಸಲಾಗಿತ್ತು. ಪತ್ನಿ ಸೋನಲ್ ಶಾ ಸಮೇತ ಸಿನಿಮಾ ನೋಡಲು ಅಮಿತ್ ಶಾ ಆಗಮಿಸಿದ್ದರು.
ಈ ಐತಿಹಾಸಿಕ ಸಿನಿಮಾದಲ್ಲಿ ಅಕ್ಷಯ್ ಗೆ ನಾಯಕಿಯಾಗಿ ಮಾನುಷಿ ಚಿಲ್ಲರ್ ನಟಿಸಿದ್ಧಾರೆ. ಈ ಸಿನಿಮಾ ವೀಕ್ಷಿಸಿದ ಅಮಿತ್ ಶಾ ಅವರು ತಾವು 13 ವರ್ಷಗಳ ನಂತರ ಕುಟುಂಬ ಸಮೇತ ಸಿನಿಮಾ ನೋಡಿರುವುದಾಗಿ ತಿಳಿಸಿದರು.
ಅದಕ್ಕೂ ಮುನ್ನ ಸಿನಿಮಾ ಮುಗಿಯುತ್ತಿದ್ದಂತೆಯೇ ಪತ್ನಿಯತ್ತ ನೋಡಿದ ಅಮಿತ್ ಶಾ ‘ಚಲಿಯೇ ಹುಕುಂ’ ಎಂದು ಹೇಳಿ ಗಮನ ಸೆಳೆದರು. ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ನಾಯಕಿ ಮಾನಸಿಗೆ ‘ಚಲಿಯೇ ಹುಕುಂ’ ಎಂದು ಹೇಳುವ ಡೈಲಾಗ್ ಇದಾಗಿದೆ.