KGF ಮತ್ತು KGF 2 ಎರೆಡಡೂ ಸರಣಿಗಳಲ್ಲೂ ಗಮನ ಸೆಳೆದಿದ್ದ ಪಾತ್ರ ಅಂದ್ರೆ ಅದು ತಾತನ ಪಾತ್ರ.. KGF 2 ಆರಂಭದಲ್ಲಿ ತೂಫಾನ್ ಹಾಡಿಗೂ ಮೊದಲು ಡೈಲಾಗ್ ಹೊಡೆಯೋ ತಾತನ ಪಾತ್ರದಲ್ಲಿ ಮಿಂಚಿದ್ದ ಕೃಷ್ಣಜಿ ರಾವ್ ಅವರ ಪಾತ್ರ..
ಅವರಿಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಲಾರ್ ಸಿನಿಮಾದಲ್ಲೂ ಅವಕಾಶ ಕೊಟ್ಟಿದ್ದಾರೆ.. ಇವರು ‘ತಾತನ ಲವ್ ಸ್ಟೋರಿ’ ಸಿನಿಮಾದಲ್ಲಿ ಹೀರೋ ಆಗಿದ್ದು ಎಲ್ರಿಗೂ ಗೊತ್ತೇ ಇದೆ.. ಇದೀಗ ಕೃಷ್ಣಜಿ ರಾವ್ ಸಲಾರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆಂಬ ಸುದ್ದಿ ವೈರಲ್ ಆಗಿದೆ..
ಕೆಜಿಎಫ್ ಮುಗಿದ ನಂತರ ನಿಮಗೆ ಮತ್ತೊಂದು ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ಸ್ವತಃ ಪ್ರಶಾಂತ್ ನೀಲ್ ಅವರೇ ಅವರಿಗೆ ಮಾತು ಕೊಟ್ಟಿದ್ದರು ಎನ್ನಲಾಗಿದೆ. ಆ ಮಾತನ್ನ ಪ್ರಶಾಂತ್ ನೀಲ್ ಅವರು ಇದೀಗ ಉಳಿಸಿಕೊಂಡಿದ್ದಾರೆ..