ಬೆಂಗಳೂರು : ಉದಯಪುರ ಹತ್ಯಾಖಾಂಡಕ್ಕೆ ಇಡೀ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.. ಇಡೀ ದೇಶಾದ್ಯಂತ ಜಸ್ಟಿಸ್ ಫಾರ್ ಕನ್ಹಯ್ಯ ಲಾಲ್ ಟ್ರೆಂಡ್ ಆಗ್ತಿದೆ..
ಈ ನಡುವೆ ದೇಶದ ಹಲವೆಡೆ ಜನರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.. ಹಲವರು ಭಿನ್ನ ವಿಭಿನ್ನ ರೀತಿಯಲ್ಲಿ ಅಭಿಯಾನವನ್ನು ಮಾಡುತ್ತಿದ್ದಾರೆ. ಬಹುಭಾಷಾ ನಟಿ ಪ್ರಣಿತಾ ಸುಭಾಶ್ ಕೂಡಾ ಹಿಂದೂ ಲಿವ್ಸ್ ಮ್ಯಾಟರ್(ಹಿಂದೂ ಜೀವ ಮುಖ್ಯ) ಎಂದು ಬರೆದಿರುವ ಫಲಕ ಹಿಡಿದುಕೊಂಡು ಕೃತ್ಯವನ್ನು ಖಂಡಿಸಿದ್ದಾರೆ.
ಅಲ್ದೇ ಇಸ್ ಎನಿವನ್ ಲಿಸನಿಂಗ್ (ಯಾರಾದರೂ ಕೇಳಿಸಿಕೊಳ್ಳುತ್ತಿದ್ದೀರಾ..???) ಎಂಬ ಕ್ಯಾಪ್ಶನ್ನೊಂದಿಗೆ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಪ್ರಣಿತಾ ಅದರಲ್ಲಿ ಹಿಂದೂ ಲಿವ್ಸ್ ಮ್ಯಾಟರ್ ಎಂದು ಬರೆದಿರುವ ಫಲಕವನ್ನು ಹಿಡಿದಿದ್ದಾರೆ.