ಕರ್ನಾಟಕ ಕರಾವಳಿ ಮೂಲದವರೇ ಆದ ಬಾಲಿವುಡ್ ನ ಸ್ಟಾರ್ ನಟ ಸುನಿಲ್ ಶೆಟ್ಟಿ ಇತ್ತೀಚೆಗೆ ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಮಾದಕ ಸೇವನೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ..
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಟ ಮಾದಕ ವ್ಯಸನಿಗಳಿಂದ ಬಾಲಿವುಡ್ ತುಂಬಿ ತುಳುಕುತ್ತಿಲ್ಲ ಎಂದಿದ್ದಾರೆ. ಸಿಬಿಐ ಆಯೋಜಿಸಿದ್ದ ಅಂತರಾಷ್ಟ್ರೀಯ ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ದಿನದಂದು ಸುನೀಲ್ ಶೆಟ್ಟಿ ಈ ಹೇಳಿಕೆಯನ್ನು ನೀಡಿದ್ದಾರೆ.
ಬಾಲಿವುಡ್ ಸೆಲೆಬ್ರೆಟಿ ಮಕ್ಕಳನ್ನ ಯಾಕೆ ಡ್ರಗ್ ಅಡಿಕ್ಟ್ ಅಂತ ಟ್ರೀಟ್ ಮಾಡುತ್ತೀರ. ಒಂದು ತಪ್ಪು ಮಾಡಿದರೆ ಕಳ್ಳ, ಡಕಾಯಿತಿ ಎಂದು ಏಕೆ ಬಿಂಬಿಸುತ್ತೀರಿ. ಈ ಇಂಡಸ್ಟ್ರಿಗೆ ಬಂದು 30 ವರ್ಷ ಆಗಿದೆ. ನನಗೆ 300 ಮಂದಿ ಸ್ನೇಹಿತರಿದ್ದಾರೆ. ಅವರು ಜೀವನದಲ್ಲಿ ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಡ್ರಗ್ ಅಡಿಕ್ಟ್ ಆದವರು ತುಂಬಿಕೊಂಡಿಲ್ಲ. ತಪ್ಪು ಮಾಡಿದವರನ್ನು ಮಕ್ಕಳೆಂದು ತಿಳಿದುಕೊಂಡು ಕ್ಷಮಿಸಿಬಿಡಿ. ಪ್ರತಿ ಭಾರಿ ಡ್ರಗ್ ಗೆ ಸಂಬಂಧಿಸಿದ ವಿಚಾರಕ್ಕೆ ಸೆಲೆಬ್ರೆಟಿಗಳ ಮಕ್ಕಳನ್ನೇ ಯಾಕೆ ಪ್ರಶ್ನೆ ಮಾಡುತ್ತೀರಾ ಅವರ ತಪ್ಪುಗಳನ್ನು ಕ್ಷಮಿಸಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಬೆಂಗಳೂರಿನ ಪಾರ್ಟಿಯೊಂದರಲ್ಲಿ ಡ್ರಗ್ ಸೇವನೆ ಮಾಡಿದ್ದ ವೇಳೆ ವಶಕ್ಕೆ ಪಡೆಯಲಾಗಿತ್ತು. ಬಳಿಕ ಸಿದ್ಧಾಂತ್ ಕಪೂರ್ ಗೆ ಜಾಮೀನು ನೀಡಲಾಗಿದೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ ಕೇಸ್ ಅಡಿಯಲ್ಲಿ ಎನ್ಸಿಬಿ ಬಂಧಿಸಿತ್ತು. ಒಂದು ತಿಂಗಳ ಕಾಲ ಆರ್ಯನ್ ಖಾನ್ ಅನ್ನು ಕಸ್ಟಡಿಯಲ್ಲಿ ಇಡಲಾಗಿತ್ತು. ಬಳಿಕ ಜಾಮೀನಿ ನೀಡಲಾಗಿತ್ತು. ಈಗ ಎನ್ಸಿಬಿ ಕ್ಲೀನ್ ಚಿಟ್ ನೀಡಲಾದೆ.
ಹೀಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ವಿಚಾರಣೆಯೂ ನಡೆದಿದ್ದು , ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ಸ್ಟಾರ್ ಮಕ್ಕಳನ್ನ ಡ್ರಗ್ ಅಡಿಕ್ಟ್ಸ್ ಎಂದೇ ಅನೇಕ ನೆಟ್ಟಿಗರು ಬಿಂಬಿಸುತ್ತಿದ್ದಾರೆ..