(Ramcharan ) ರಾಮ್ ಚರಣ್ RRR ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಮ್ ಚರಣ್ ಗೆ ಈಗ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ.. ರಾಮ್ ಚರಣ್ ಸದ್ಯ ಶಂಕರ್ ಜೊತೆಗೆ ತಮ್ಮ ವೃತ್ತಿ ಬದುಕಿನ 15 ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಈ ಸಿನಿಮಾದಲ್ಲೂ ಡಿಫರೆಂಟ್ ಆಗಿ ಕಾಣಿಸಿಕೊಳ್ತಿದ್ದಾರೆ ಚರಣ್..
ಮಗಧೀರ ಸಿನಿಮಾದಲ್ಲಿ ತನ್ನ ರಾಜ್ಯವನ್ನು ರಕ್ಷಿಸುವ ಯೋಧನಾಗಿ ಕಾಲಭೈರವ ಪಾತ್ರದಲ್ಲಿ ಕಾಣಿಸಿಕೊಂಡ ರಾಮ್ ಚರಣ್ ಅವರು , RRR ನಲ್ಲಿ ಅಲ್ಲೂರಿ ಸೀತಾರಾಜು ಪಾತ್ರದಲ್ಲಿ ಸಂಚಲನ ಸೃಷ್ಟಿಸಿದ್ದರು.. ಇದೀಗ ರಾಮ್ ಚರಣ್ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ..
ಹೌದು..! ಈ ಸಿನಿಮಾದಲ್ಲಿ ರಾಮ್ ಚರಣ್ 11ನೇ ಶತಮಾನದ ರಾಜಾ ಸುಹೇಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ..
ಖ್ಯಾತ ಬರಹಗಾರ ಅಮಿಶ್ ತ್ರಿಪಾಠಿ ಬರೆದ ‘ಲೆಜೆಂಡ್ ಆಫ್ ಸುಹೇಲ್ ದೇವ್: ದಿ ಕಿಂಗ್ ಹೂ ಸೇವ್ಡ್ ಇಂಡಿಯಾ’ ಪುಸ್ತಕವನ್ನು ಆಧರಿಸಿದ ಸಿನಿಮಾವಿದಾಗಿದೆ..
ಅಂದ್ಹಾಗೆ ಈ ಸಿನಿಮಾವನ್ನ 2 ವರ್ಷಗಳ ಹಿಂದೆಯೇ ಘೋಷಣೆ ಮಾಡಲಾಗಿತ್ತು.. ಎರಡು ವರ್ಷಗಳ ಹಿಂದೆ ಈ ಸಿನಿಮಾದ ಪ್ರಿ ಪ್ರೋಡಕ್ಷನ್ ಕೆಲಸ ಶುರುವಾಗಿತ್ತು.
ಆದ್ರೆ ಕೊರೊನಾ ಕಾರಣದಿಂದಾಗಿ ಈ ಸಿನಿಮಾಗೆ ಬ್ರೇಕ್ ಬಿದ್ದಿತ್ತು.
ಇದೀಗ ಈ ಸಿನಿಮಾವನ್ನು ಸೆಟ್ಟೇರಿಸಲು ಅಮಿಷ್ ತ್ರಿಪಾಠಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ..
ಸುಹೇಲ್ ದೇವ್ ಪಾತ್ರದಲ್ಲಿ ಈ ಹಿಂದೆ ಅಕ್ಷಯ್ ಕುಮಾರ್ ಅವರನ್ನ ಆಯ್ಕೆ ಮಾಡಲು ಪ್ಲಾನ್ ಮಾಡಲಾಗಿತ್ತಂತೆ… ಆದ್ರೆ ಈ ಪಾತ್ರಕ್ಕಾಗಿ ಇತ್ತೀಚೆಗೆ ರಾಮ್ ಚರಣ್ ಅವರನ್ನ ಸಂಪರ್ಕಸಿದ್ದಾರಂತೆ. ರಾಮ್ ಚರಣ್ ಕೂಡ ಈ ಸಿನಿಮಾದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗ್ತಿದೆ..
ಸುಹೇಲ್ ದೇವ್ ಉತ್ತರ ಪ್ರದೇಶದ ಶ್ರಾವಸ್ತಿಯ ರಾಜನಾಗಿದ್ದನು. ರಾಜ ಸುಹೇಲ್ ದೇವ್ ಬಹ್ರೈಚ್ನಲ್ಲಿ ಘಜ್ನಿಯ ಸೈನ್ಯದ ಮೊಹಮ್ಮದ್ನನ್ನು ಸೋಲಿಸಿದ್ದನು. ಈ ಯುದ್ಧ ಹಾಗೂ 11ನೇ ಶತಮಾನದಲ್ಲಿ ಭಾರತದ ಮೇಲೆ ಟರ್ಕಿ ನಡೆಸಿದ ಹಲವಾರು ದಾಳಿಗಳ ಹಿನ್ನೆಲೆಯಲ್ಲಿ ಅಮಿಶ್ ತ್ರಿಪಾಠಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಆದ್ರೆ ಅಧಿಕೃತವಾಗಿ ಈ ಸಿನಿಮಾದಲ್ಲಿ ಚರಣ್ ನಟನೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲವಾದ್ರೂ ಮುಂದಿನ ದಿನಗಳಲ್ಲಿ ಊಹಾಪೋಹಗಳಿಗೆ ತೆರೆ ಬೀಳಲಿದೆ..