ಉಪೇಂದ್ರ ಬಳಿ ಕ್ಷೆಯಾಚಿಸಿದ ಕಿಚ್ಚ ಸುದೀಪ್
ಉಪ್ಪಿ ಸಹೋದರನ ಸಿನಿಮಾ ಪ್ರೀ ಈವೆಂಟ್ ಗೆ ಕಿಚ್ಚ ಗೈರು
ನಿರಂಜನ್ ಚೊಚ್ಚಲ ಸಿನಿಮಾ ‘ನಮ್ಮ ಹುಡುಗರು’
ಮಂಡಿ ನೋವಿನಿಂದ ಗೈರಾಗಿದ್ದ ಕಿಚ್ಚ
ವಿಡಿಯೋ ಮೂಲಕ ಕ್ಷಮೆ ಕೇಳಿದ ಅಭಿನಯ ಚಕ್ರವರ್ತಿ
ಸ್ಯಾಂಡಲ್ ವುಡ್ ಸ್ಟಾರ್ ನಟರಾದ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಇಬ್ಬರೂ ಸಹ ಬಹಳ ಆತ್ಮೀಯರೆಂಬ ವಿಚಾರ ಎಲ್ರಿಗೂ ಗೊತ್ತೇ ಇದೆ… ಕಿಚ್ಚನ ಸಿನಿಮಾ ಕಾರ್ಯಕ್ರಮಕ್ಕೆ ಉಪ್ಪಿ , ಉಪ್ಪಿ ಸಿನಿಮಾ ಕಾರ್ಯಕ್ರಮದಲ್ಲಿ ಕಿಚ್ಚ ಭಾಗವಹಿಸುವುದು ಸಾಮಾನ್ಯ..
ಹಾಗೆಯೇ ಇತ್ತೀಚೆಗೆ ಉಪೇಂದ್ರ ಅವರು ತಮ್ಮ ಸಹೋದರನ ಮಗ ನಿರಂಜನ್ ಅವರ ಚೊಚ್ಚಲು ಸಿನಿಮಾ ‘ನಮ್ಮ ಹುಡುಗರು’ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪರ್ ರನ್ನ ಆಹ್ವಾನಿಸಿದ್ದರು.. ಆದರೆ ಈ ಕಾರ್ಯಕ್ರನಮದಲ್ಲಿ ಕಿಚ್ಚ ಸುದೀಪ್ ಅವರು ಗೈರಾಗಿದ್ದಾರೆ..
ಹೀಗಾಗಿಯೇ ಕಿಚ್ಚ ಸುದೀಪ್ ಅವರು ಇದೀಗ ಈ ವಿಚಾರವಾಗಿ ಕ್ಷಮೆ ಕೇಳಿದ್ದಾರೆ. ಸಿನಿಮಾ ರಿಲೀಸ್ ಗೂ ಮುನ್ನ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಬರಬೇಕಿತ್ತು. ಆದರೆ, ಕಿಚ್ಚ ಸುದೀಪ್ ಅವರಿಗೆ ಆ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗಿಲ್ಲ ಹೀಗಾಗಿ ಕ್ಷಮೆಯಾಚಿಸಿದ್ದಾರೆ.
ಅಂದ್ಹಾಗೆ ಅವರು ಗೈರಾಗಿದ್ದಕ್ಕೆ ಕಾರಣ ಅವರ ಮಂಡಿ ನೋವು.. ಈ ಕುರಿತು ವಿಡಿಯೋ ಮಾಡಿ ಕಳುಹಿಸಿದ್ದ ಸುದೀಪ್, ಈ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. ಹಾಗಾಗಿ ಉಪ್ಪಿ ಸರ್ ಮತ್ತು ನಿರಂಜನ್ ಕ್ಷಮಿಸಿ ಎಂದು ಕೇಳಿದ್ದಾರೆ.
ಸುದೀಪ್ ಅವರ ಮಂಡಿಗೆ ನೋವಾಗಿದೆಯಂತೆ.. ಹಾಗಾಗಿ ಓಡಾಡಲು ಸಾಧ್ಯವಾಗದ ಕಾರಣಕ್ಕೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಅಂದ್ಹಾಗೆ ಅವರ ಪ್ಯಾನ್ ವರ್ಲ್ಡ್ ವಿಕ್ರಾಂತ್ ರೋಣ ಸಿನಿಮಾ ಇದೇ ತಿಂಗಳ 28 ಕ್ಕೆ ರಿಲೀಸ್ ಆಗಲಿದೆ.. ಸಿನಿಮಾದ ಪ್ರಚಾರದ ಕೆಲಸಗಳನ್ನ ಸಹ ಕಿಚ್ಚ ಮನೆಯಿಂದಲೇ ಮಾಡುತ್ತಿದ್ದಾರೆ..