ಕನ್ನಡದ ನಟ ಶಿವರಂಜನ್ ಬೋಳ್ಳಣ್ಣವರ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಹನುಮಾನ್ ದೇವಸ್ಥಾನದ ಬಳಿ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದೂರದಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ, ಗುಂಡುಗಳು ತಪ್ಪಿ ಶಿವರಂಜನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೆಲ ಗ್ರಾಮಸ್ಥರು ತಿಳಿಸಿದ್ದಾರೆ.
50 ವರ್ಷ ವಯಸ್ಸಿನ ಇವರು ಬಹಳ ಹಿಂದೆಯೇ ಸಿನಿಮಾರಂಗದಿಂದ ನಿವೃತ್ತಿ ಪಡೆದಿದ್ದರು.. ಪ್ರಸ್ತುತ ಉದ್ಯಮದಲ್ಲಿ ತೊಡಗಿದ್ದರು.. ಇವರು ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅಮೃತ ಸಿಂಧು ಚಿತ್ರದಲ್ಲಿ ನಟಿ ಶ್ರುತಿ ಎದುರು ಜೋಡಿಯಾಗಿದ್ದರು. ವೀರಭದ್ರ ಹಾಗೂ ಇತರ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಶಿವರಂಜನ್ ಬೋಳಣ್ಣವರ್ ಮಂಗಳವಾರ ರಾತ್ರಿ ಬೈಲಹೊಂಗಲದಲ್ಲಿ ನಡೆದ ಹತ್ಯೆಯ ಯತ್ನದಲ್ಲಿ ಬದುಕುಳಿದಿದ್ದಾರೆ.