ಆಚಾರ್ಯ ಮೆಗಾಸ್ಟಾರ್ ಚಿರಂಜೀವಿ, ರಾಮಚರಣ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇತ್ತು.. ಆದ್ರೆ ಸಿನಿಮಾ ರಿಲೀಸ್ ಆದ ನಂತರ ಫ್ಲಾಪ್ ಸಾಬೀತಾಯ್ತು.. ಸಿನಿಮಾದ ಬಗ್ಗೆ ನೆಗೆಟಿವ್ ರಿವೀವ್ ಗಳೇ ಬಂದವು.. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡಲಿಲ್ಲ..
ಒಟಿಟಿಯಲ್ಲೂ ಸಿನಿಮಾ ಡಲ್ ಹೊಡೆಯಿತು.. ಕೋಟ್ಯಾಂಪತರ ರೂಪಾಯಿ ಸುರಿದ ಸಿನಿಮಾ ಮಾಡಿದ್ದ ನಿರ್ಮಾಕರಿಗೆ ಭಾರೀ ಲಾಸ್ ಆಯ್ತು..
ಇತ್ತೀಚೆಗೆ ನಷ್ಟ ಭರಿಸುವಂತೆ ಚಿರಂಜೀವಿ ಮೆ ಎದುರು ಸಿನಿಮಾದ ವಿತರಕರು ಧರಣಿ ನಡೆಸಿಇ ಆಕ್ರೋಶ ಹೊರಹಾಕಿದ್ದರು.. ಇದೀಗ ವಿತರಕರ ಒತ್ತಡಕ್ಕೆ ಮಣಿದ ಚಿರಂಜೀವಿ ಕುಟುಂಬವು ನಷ್ಟವನ್ನ ಭರಿಸಲು ಮುಂದಾಗಿದೆ ಎನ್ನಲಾಗ್ತಿದೆ…
ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಕಾಂಬಿನೇಷನ್ ನ ಆಚಾರ್ಯ ಸಿನಿಮಾವನ್ನು ವಿತರಕರು ಭಾರೀ ಮೊತ್ತ ಕೊಟ್ಟು ಖರೀದಿಸಿದ್ದರು. ಈ ಸಿನಿಮಾದಿಂದ ಸಾಕಷ್ಟು ಹಣ ಸಿಗಲಿರಿದೆ ಎಂದೇ ಹೇಳಲಾಗಿತ್ತು…
ಆದ್ರೆ ಆಚಾರ್ಯ ಫ್ಲಾಪ್ ಸಾಬೀತಾಯ್ತು.. ಹಾಗಾಗಿ ಹಣ ವಾಪಸ್ಸು ಮಾಡಬೇಕು ಎಂದು ವಿತರಕರು ಪಟ್ಟು ಹಿಡಿದಿದ್ದರು. ಈಗ ಚಿರಂಜೀವಿ ಹಣ ವಾಪಸ್ ಮಾಡಲು ಒಪ್ಪಿದೆ ಎನ್ನಲಾಗಿದೆ..
ಚಿರಂಜೀವಿ ಕುಟುಂಬ 20 ಕೋಟಿ ರೂಪಾಯಿಯನ್ನು ವಾಪಸ್ಸು ಮಾಡಿದೆ ಎನ್ನಲಾಗ್ತಿದೆ.
ಸದ್ಯ ಚಿರಂಜೀವಿ ಅವರು ಗಾಡ್ ಫಾದರ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಮತ್ತೊಂದೆಡೆ ರಾಮ್ ಚರಣ್ ಶಂಕರ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಈ ಸಿನಿಮಾ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ರಿಲೀಸ್ ಆಗಲಿದೆ..