KGF 2 ಸಿನಿಮಾ ನಂತರ ಯಶ್ ಮುಂದಿನ ನಡೆ ಬಗ್ಗೆ ಎಲ್ಲರ ಕಣ್ಣಿದೆ.. KGF 3 ಬರುವ ಗುಮಾನಿಯೂ ಇದೆ.. ಆದ್ರೆ ಸಿನಿಮಾ ತಡವಾಗಬಹುದೆಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಯಶ್ ಹೊಸ ಸಿನಿಮಾ ಶೀಘ್ರದಲ್ಲೇ ಮಾಡಲಿದ್ದಾರೆ ಎನ್ನಲಾಗ್ತಿದೆ…
ಇದೆಲ್ಲದರ ನಡುವೆ ಪಾರ್ಟ್ 3 ಯಲ್ಲಿ ಯಶ್ ಬದಲಿಗೆ ಹೀರೋ ಚಿಯಾನ್ ವಿಕ್ರಮ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಸಂಚಲನ ಸೃಷ್ಟಿಸಿದೆ..
ಇತ್ತೀಚೆಗೆ ತಮಿಳು ನಿರ್ದೇಶಕ ಪಾ ರಂಜಿತ್ ಜೊತೆಗೆ ವಿಕ್ರಂ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ.
ತ್ರಿಡಿ ಫಾರ್ಮೆಟ್ ನಲ್ಲಿ ಭಾರಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದೆಯಂತೆ.
1800 ರಲ್ಲಿ ದಲಿತರ ಮೇಲೆ ನಡೆದ ಕೆಲವು ಘಟನೆಗಳ ಆಧಾರವಾಗಿ ಈ ಸಿನಿಮಾ ತೆರೆಕಾಣಲಿದೆಯಂತೆ.
ಹಾಗಾದ್ರೆ ಈ ಸಿನಿಮಾಗೂ ಕೆಜಿಎಫ್ ಸಿನಿಮಾಗೂ ಏನು ಸಂಬಂಧ ಅಂತೀರಾ.. ಮುಂದೆ ಓದಿ..
ಇಂಡಿಪೆನ್ಡೆನ್ಸ್ ಗೂ ಮೊದಲು ನರಾಚಿಯಲ್ಲಿ ಜರುಗಿದ ಅರಾಚಕತೆಯ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ ಎಂದು ಹೇಳಲಾಗುತ್ತಿದೆ.
ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕೆಜಿಎಫ್ ನಲ್ಲಿ ಏನು ನಡೀತು ಅಂತಾ ಪ್ರಶಾಂತ್ ನೀಲ್ ತೋರಿಸಿದ್ದಾರೆ.
ಇದೀಗ ಸ್ವತಂತ್ರ್ಯಕ್ಕೂ ಮುನ್ನಾ ಕೆಜಿಎಫ್ ನಲ್ಲಿ ಏನು ನಡೀತು ಅಂತಾ ಪಾ ರಂಜಿತ್ ತೋರಿಸಿಕೊಡಲಿದ್ದಾರೆ.