ನಾಗಚೈತನ್ಯ ಜೊತೆಗೆ ತಮ್ಮ ನಾಲ್ಕು ವರ್ಷದ ದಾಂಪತ್ಯಕ್ಕೆ ಇತಿಶ್ರೀ ಹಾಡಿದ ಟಾಲಿವುಡ್ ನ ಕ್ಯೂಟ್ ಬ್ಯೂಟಿ ಸಮಂತಾ ,, ಬೋಲ್ಡ್ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.. ಗ್ಲಾಮರಸ್ ಆಗೂ ಅಭಿಮಾನಿಗಳ ಹಾರ್ಟ್ ಗೆ ಬೆಂಕಿ ಇಡ್ತಾರೆ.. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಿರುವ ಸ್ಯಾಮ್ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್..
10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಕೆಲ ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..
ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ.. ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ..
ಸಮಂತಾ ಬಾಲಿವುಡ್ , ಹಾಲಿವುಡ್ ಗೂ ಪಾದಾರ್ಪಣೆ ಮಾಡ್ತಾ ಇದ್ದಾರೆ.. ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಯಶೋಧಾ , ಹಾಗೂ ವಿಜಯ್ ದೇವರಕೊಂಡ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಖುಷಿಯಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ..
ಇದೆಲ್ಲದರ ನಡುವೆ ಕೆಲ ಟಾಕ್ ಶೋಗಳಲ್ಲೂ ಸಮಂತಾ ಭಾಗಿಯಾಗ್ತಿದ್ದಾರೆ.. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಸ್ಯಾಮ್ ಭಾಗವಹಿಸಿದ್ದರು..
2 ವರ್ಷಗಳ ನಂತರ, ಕರಣ್ ಜೋಹರ್ ಕಾಫಿ ವಿತ್ ಕರಣ್ ಶೋ ನ ಮುಂದಿನ ಸೀಸನ್ ನಡೆಸಿಕೊಡ್ತಿದ್ದು , ಇದು ಒಟಿಟಿಯಲ್ಲಿ ಪ್ರಸಾರವಾಗ್ತಿದೆ.. 3 ನೇ ಸಂಚಿಕೆಯಲ್ಲಿ, ಸಮಂತಾ ರುತ್ ಪ್ರಭು ಮತ್ತು ಅಕ್ಷಯ್ ಕುಮಾರ್ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ಕಾಫಿ ವಿತ್ ಕರಣ್ ಶೋನಲ್ಲಿ ವಿಚ್ಛೇದನದ ಬಗ್ಗೆ ಪ್ರಶ್ನೆ ಕೇಳಲಾಯ್ತು.
ಇದಕ್ಕೆ ಉತ್ತರಿಸಿದ ಸ್ಯಾಮ್, ನಮ್ಮ ವಿಚ್ಛೇದನ ಸಾಮರಸ್ಯವಾಗಿ ನಡೆಯಲಿಲ್ಲ.
ವಿಚ್ಛೇದನ ಪ್ರಕ್ರಿಯೆ ತುಂಬಾ ಕಷ್ಟಕರವಾಗಿತ್ತು. ವಿಚ್ಛೇದನ ಪಡೆದ ಆರಂಭದಲ್ಲಿ ನೋವು ಅನುಭವಿಸಿದೆ.
ಜೀವನ ತುಂಬಾ ಕಠಿಣ ಅನಿಸಿತ್ತು. ಆದ್ರೆ ಈಗ ಅದರಿಂದ ಹೊರಗಡೆ ಬಂದಿದ್ದೇನೆ.
ಈ ಮೊದಲಿಗಿಂತಲೂ ಬಲವಾಗಿದ್ದೇನೆ. ಪ್ರಸ್ತುತ ನನ್ನ ಕೆಲಸವನ್ನು ನಾನು ಮಾಡಿಕೊಂಡು ಹೋಗುತ್ತಿದ್ದೇನೆ.
ಆದ್ರೆ ವಿಚ್ಛೇದನದ ನಂತರ ಒಬ್ಬರ ಮೇಲೆ ಒಬ್ಬರು ತೀವ್ರ ಮನೋವೇದನಕ್ಕೆ ಒಳಗಾಗಿದ್ದೇವು ಅಂತಾ ಸಮಂತಾ ತಿಳಿಸಿದ್ದಾರೆ.
ಇನ್ನು 250 ಕೋಟಿ 250 ಕೋಟಿ ಜೀವನಾಂಶ ತೆಗೆದುಕೊಂಡಿರುವ ಸುದ್ದಿಗೆ ಪ್ರತಿಕ್ರಿಯಿಸಿ.. ‘ನಾನು 250 ಕೋಟಿ ತೆಗೆದುಕೊಂಡಿದ್ದೇನೆ ಎಂದು ಹಲವು ವದಂತಿಗಳು ಹಬ್ಬಿದ್ದವು.
ಆದರೆ ಆ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಈ ವದಂತಿಗಳು ಬಂದಾಗ ಐಟಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ಮಾಡುತ್ತಾರೆ ಎಂದು ಕಾಯುತ್ತಿದ್ದೆ’ ಎಂದು ತಮಾಷೆ ಮಾಡಿದ್ದಾರೆ.