ಬಾಲಿವುಡ್ ನ ಬಹುನಿರೀಕ್ಷೆಯ ಸಿನಿಮನಾವಾದ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸಾಕಷ್ಟು ಕ್ರೇಜ್ ಹುಟ್ಟುಹಕಿದೆ.. ಸಿನಿಮಾ ಆಗಸ್ಟ್ 11 ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸಿನಿಮಾದಲ್ಲಿ ಕರೀನಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ..
ಸಿನಿಮಾತಂಡವು ಪ್ರಚಾರದಲ್ಲಿ ತೊಡಗಿದೆ.. ಆದ್ರೆ ಇದೆಲ್ಲದರ ನಡುವೆ ಸಿನಿಮಾಗೆ ಈಗಿನಿಂದಲೇ ಅಡಚಣೆ ಉಂಟಾಗಿದೆ,, ಸಿನಿಮಾವನ್ನ ಬಹಿಷ್ಕರಿಸಲು ಸೋಷಿಯಲ್ ಮೀಡಿಯಾದಲ್ಲಿ ಕೂಗು ಹೆಚ್ಚಾಗಿದೆ..
ಬಾಯ್ಕಾಟ್ ಬಾಲಿವುಡ್ , ಬಾಯ್ಕಾಟ್ ಅಮಿರ್ ಖಾನ್ , ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ..
ಇದಕ್ಕೆಲ್ಲಾ ಕಾರಣವೇ ಅಮಿರ್ ಖಾಣ್ , ಕರೀನಾರಾ ಕೆಲವೊಂದು ಹೇಳಿಕೆಗಳು.. ಈ ಹಿಂದೆ ಅಮಿರ್ ಖಾಣ್ ದೇರಿಗೆ ಹಾಲಿನ ಅಭಿಷೇಕ ಮಾಡಿ ವ್ಯರ್ಥ ಮಾಡುವ ಬದಲು ಬಡ ಮಕ್ಕಳಿಗೆ ನೀಡಿ ಎಂದಿದ್ದರು.. ಅವರದ್ದೇ ಅಂದಾಜ್ ನಲ್ಲಿ ಈಗ ಅವರ ವಿರುದ್ಧ ಮುಗಿಬಿದ್ದಿರುವ ನೆಟಿಜನ್ಸ್ , ಲಾಲ್ ಸಿಂಗ್ ಚಡ್ಡಾ ನೋಡಿ ದುಡ್ಡು ವ್ಯರ್ಥ ಮಾಡೋ ಬದಲಾಗಿ ಬಡವರಿಗೆ ದಾನ ಮಾಡಿ ಎನ್ನುತ್ತಿದ್ದಾರೆ..
ಅಂದ್ಹಾಗೆ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾಗೆ ಬಹುಭಾಷಾ ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿಯಾಗಿರುವ ವಿಜಯಶಾಂತಿ ಅವರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದು , ಅವರ ಟ್ವೀಟ್ ಸಂಚಲ ಸೃಷ್ಟಿ ಮಾಡಿದೆ..
ಹೌದು..! ಈ ಬಗ್ಗೆ ಇತ್ತೀಚೆಗೆ ಅಮಿರ್ ಖಾನ್ ಪ್ರತಿಕ್ರಿಯೆ ನೀಡುತ್ತಾ ನಾನು ಭಾರತೀಯನೇ , ನಾನು ಭಾರತೀಯನಲ್ಲ ಎನ್ನುವಂತೆ ಹಲವರು ಬಿಂಬಿಸುತ್ತಿರೋದು ಬಹಳ ಬೇಸರವಾಗ್ತಿದೆ.. ದಯವಿಟ್ಟು ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸಬೇಡಿ.. ಸಿನಿಮಾವನ್ನ ವೀಕ್ಷಿಸಿ ಎಂದು ಟ್ವೀಟ್ ಮೂಲಕ ಮನವಿಯನ್ನ ಮಾಡಿಕೊಂಡಿದ್ದರು..
ಇದೇ ವಿಚಾರವಾಗಿ ಈಗ ತೆಲುಗಿನ ಹಿರಿಯ ನಟಿ ವಿಜಯಶಾಂತಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.. ಸರಣಿ ಟ್ವೀಟ್ ಮಾಡಿರುವ ನಟಿ “ ಜನರನ್ನು ಮುಗ್ಧರು ಎಂದು ಭಾವಿಸಿ ಬಾಯಿಗೆ ಬಂದಂತೆ ಮಾತನಾಡಿಸಿದರೆ ಅದರ ಪರಿಣಾಮ ಏನಾಗಬಹುದು ಎಂಬುದನ್ನು ಬಾಲಿವುಡ್ ಹೀರೊ ಆಮಿರ್ ಖಾನ್ ಅವರಿಗೆ ಜನರು ಅರ್ಥವಾಗುವಂತೆ ಮಾಡುತ್ತಿದ್ದಾರೆ. 2015ರಲ್ಲಿ ಬಿಜೆಪಿ ಸರಕಾರವನ್ನು ಕುರುಡಾಗಿ ವಿರೋಧಿಸುವ ಮೂಲಕ ಭಾರತಮಾತೆಯನ್ನು ಅವಮಾನಿಸಿದ ಅಸಹಿಷ್ಣುತೆಯ ಹೇಳಿಕೆಯ ಪರಿಣಾಮದ ಫಲಿತಾಂಶವನ್ನು ಈಗ ಎದುರಿಸುತ್ತಿದ್ದಾರೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಿದ್ದು, ಅವರ ಪತ್ನಿ ದೇಶ ತೊರೆಯಲು ಮುಂದಾಗಿದ್ದಾರೆ ಎಂದು ಅಂದು ಪತ್ರಿಕೋದ್ಯಮ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅಮೀರ್ ಹೇಳಿದ್ದರು”.
“ಭಾರತದ ಸರ್ಕಾರ ಮತ್ತು ಖಾಸಗಿ ವ್ಯವಸ್ಥೆಗಳಲ್ಲಿ ಹಿಂದೂಯೇತರರು ಎಂತಹ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ ಎಂಬುದನ್ನು ನಾವು ಇತಿಹಾಸ ಮತ್ತು ಸಮಕಾಲೀನ ಪರಿಸ್ಥಿತಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲು, ನಂತರ ಮತ್ತು ಇಂದಿಗೂ ಈ ದೇಶ ಎಲ್ಲರನ್ನು ಧಾರ್ಮಿಕ ಸಾಮರಸ್ಯದಿಂದ ಗೌರವಿಸುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಎಂದರೆ ಆಮಿರ್ ಸೇರಿದಂತೆ ಬಾಲಿವುಡ್ ನಲ್ಲಿ ಖಾನ್ತ್ರಯರಿಗೆ ಗೌರವ ಸಿಕ್ಕಿರುವುದು. ವಾಸ್ತವ ತಿಳಿದಿರುವ ಜನರು ಆಮಿರ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ ಮತ್ತು ಅವರು ಬ್ರಾಂಡ್ ಅಂಬಾಸಿಡರ್ ಆಗಿರುವ ವಾಣಿಜ್ಯ ಉತ್ಪನ್ನಗಳನ್ನು ಸಹ ಬಹಿಷ್ಕರಿಸಿದ್ದಾರೆ” ಎಂದಿದ್ದಾರೆ.
ಅಲ್ಲದೇ ಪಿಕೆ ಸಿನಿಮಾದ ಬಗ್ಗೆಯೂ ಮಾತನಾಡಿರೋ ಅವರು “ ಈ ಹಿಂದೆ ಆಮಿರ್ ಅಭಿನಯದ ಪಿಕೆ ಚಿತ್ರದಲ್ಲಿ ಕೂಡ ಹಿಂದೂ ವಿರೋಧಿ ವಿಚಾರವನ್ನೇ ಪ್ರಧಾನವಾಗಿ ತೋರಿಸಿದ್ದರು. ಜೊತೆಗೆ ಹಿಂದೂ ದೇವರನ್ನು ಅವಮಾನಿದ್ದರು. ಆ ವೇಳೆ ಹಿಂದೂ ಸಂಘಟನೆಗಳು ಕೂಡ ಚಿತ್ರವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದವು. ಹೀಗೆ ಜನರ ವಿರೋಧವನ್ನು ಮೂಟೆ ಕಟ್ಟಿಕೊಂಡಿರುವ ಆಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ಎಂಬ ಸ್ಪೂರ್ತಿದಾಯಕ ಚಿತ್ರದ ಮೂಲಕ ಬರ್ತಿದ್ದಾರೆ. ಆದರೆ, ಜನರಿಗೆ ಯಾವುದೇ ಸ್ಫೂರ್ತಿ ತುಂಬುವ ಸ್ಥಿತಿಯಲ್ಲಿ ಇಲ್ಲದ ನಟನಿಗೆ ಆತ ಹಿಂದೆ ನೀಡಿದ್ದ ಹೇಳಿಕೆಯನ್ನು ನೆನಪಿಸುತ್ತಿದ್ದಾರೆ. ಜನರು ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಎಲ್ಲರನ್ನು ಎಚ್ಚರಿಸುತ್ತಿದ್ದಾರೆ”. ಎಂದಿದ್ಧಾರೆ..
ಆದ್ರೆ ಅವರ ಟ್ವೀಟ್ ಗೆ ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ , ಸ್ಟಾರ್ ನಟ ನಾಗಾರ್ಜುನ್ ಫ್ಯಾನ್ಸ್ ಗರಂ ಆಗಿದ್ದಾರೆ… ಯಾಕಂದ್ರೆ ಟ್ವೀಟ್ ನಲ್ಲಿ ವಿಜಯಶಾಂತಿ ಅವರು , ಸಿನಿಮಾಗೆ ನಾಗಾರ್ಜುನ್ ಹಾಗೂ ಚಿರಂಜೀವಿ ಬೆಂಬಲವಿರುವ ಕಾರಣಕ್ಕೆ ಅವರ ವಿರುದ್ಧವೂ ಪರೋಕ್ಷವಾಗಿ ಮಾತನಾಡಿದ್ದಾರೆ…
“ ದುರದೃಷ್ಟವಶಾತ್, ಜನರು ಇಷ್ಟೊಂದು ಉತ್ಸಾಹದಿಂದ ಆಮಿರ್ ಖಾನ್ ಸಿನಿಮಾ ವಿರುದ್ಧ ನಿಂತಿದ್ದರೂ, ನಮ್ಮ ಕೆಲವು ದಕ್ಷಿಣದ ಹೀರೊಗಳಿಗೆ ಜನರ ಭಾವನೆ ಏನೆಂದು ತಿಳಿಯದಂತೆ ಆ ಸಿನಿಮಾ ಪ್ರಚಾರಕ್ಕಾಗಿ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಜನರ ದೇಶಾಭಿಮಾನವನ್ನು ನಿರ್ಲಕ್ಷಿಸಿ ಈ ರೀತಿ ಮಾಡುವುದು ಸಮಂಜಸವಲ್ಲ ಎಂದು ಅವರು ಯೋಚಿಸಬೇಕು” ಎಂದಿದ್ದಾರೆ.. ವಿಜಯಶಾಂತಿ ಅವರ ಹೇಳಿಕೆ ಸಾಕಷ್ಟು ವೈರಲ್ ಆಗಿದ್ದು ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ..