ಒಂಣದೆಡೆ ಕನ್ನಡ , ತೆಲುಗು , ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಕಿಚ್ಚನ ಅಬ್ಬರ ಜೋರಾಗಿದೆ,.. ಸಿನಿಮಾ ಹೌಸ್ ಫುಲ್ ಆಗಿ ಪ್ರದರ್ಶನ ಕಾಣ್ತಿದೆ.. ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು , ಕಿಚ್ಚನ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ..
ಮತ್ತೊಂದ್ಕಡೆ ಸಿನಿಮಾ ಸಾಕಷ್ಟು ನೆಗೆಟಿವಿಟಿಯಿಂದಲೂ ತೊಂದರೆ ಅನುಭವಿಸಿರೋದು ಗೊತ್ತೇ ಇದೆ… ಉದ್ದೇಶಪೂರಿತ ದ್ವೇಷಭರಿತ ಸುಳ್ಳು ರಿವ್ಯೂವ್ ಗಳು ,, ಪೈರೆಸಿ ಹೀಗೆ ತುಂಬಾ ತೊಂದರೆಗಳನ್ನ ಅನುಭವಿಸಿದರು… ಇದೀಗ ಸಿನಿಮಾದ ಬಗ್ಗೆ ಚೇತನ್ ಅಹಿಂಸಾ ಅವರು ಚಕಾರ ತ್ತಿದ್ದಾರೆ.. ಸಿನಿಮಾದ ಬಗ್ಗೆ ಆಕ್ಷೇಕ ವ್ಯಕ್ತಪಡಿಸಿದ್ದು , ಅವರ ಪೋಸ್ಟ್ ಭಾರೀ ವಿವಾದಕ್ಕೆ ಕಾರಣವಾಗಿದೆ.. ಕಿಚ್ಚನ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಚೇತನ್..
ಈಗಾಗಲೇ 100 ಕೋಟಿ ಕ್ಲಬ್ ಸೇರಿಕೊಂಡಿರುವ ಕಿಚ್ಚನ ಸಿನಿಮಾವನ್ನ ಚೇತನ್ ಅಹಿಂಸಾ ಟೀಕೆ ಮಾಡಿದ್ಧಾರೆ.. ಈ ಬಗ್ಗೆ ಟ್ವೀಟ್ ಮಾಡಿರೋ ನಟ ‘ ವಿಕ್ರಾಂತ್ ರೋಣ ಚಿತ್ರ ತಾಂತ್ರಿಕವಾಗಿ ಮತ್ತು ಅಭಿನಯದ ದೃಷ್ಟಿಯಿಂದ ನೋಡಿದರೆ ಉತ್ತಮವಾಗಿದೆ. ಆದರೆ, ದಲಿತರನ್ನು- ಬಹುಜನರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿ ಮುಸ್ಲಿಮರನ್ನು ಸ್ಟೀರಿಯೋಟೈಪ್ ಮಾಡಿದ್ದಾರೆ, ಈ ಸೂಕ್ಷ್ಮವಿಲ್ಲದ ಚಿತ್ರಣದಿಂದ ನಾನು ನಿರಾಸೆಗೊಂಡಿದ್ದೇನೆ. ಚಲನಚಿತ್ರ ನಿರ್ಮಾಣ ಮಾಡವವರು ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸದೆ ಕೇವಲ ಲಾಭಕ್ಕಾಗಿ ಜಾತಿ-ಧರ್ಮವನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು’ ಎಂದು ಆಕ್ರೋಶ ಹೊರಹಾಕಿದ್ದಾರೆ.. ನಟ ಚೇತನ್ ಹೇಳಿಕೆಗೆ ಕಿಚ್ಚನ ಫ್ಯಾನ್ಸ್ ಸಿಟ್ಟಾಗಿದ್ದಾರೆ..