Lalsingh Chadda : ಲಾಲ್ ಸಿಂಗ್ ಸೋಲಿಗೆ ಕಾರಣ ಕರೀನಾ..!! ಹೇಗೆ..???
ಬಾಲಿವುಡ್ ನ ನಸೀಬ್ ಖರಾಬ್ ಆಗಿದೆ.. ಇದು ಮತ್ತೊಮ್ಮೆ ಸಾಬೀತಾಗಿದೆ.. ಕಳೆದ 2 ವರ್ಷಗಳಲ್ಲಿ ಕಾಶ್ಮೀರ್ ಫೈಲ್ಸ್ ಬಿಟ್ರೆ ಇನ್ನೆಲ್ಲಾ ಸಿನಿಮಾಗಳು ಡಿಸಾಸ್ಟರ್ ,, ಫ್ಲಾಪ್ ಆಗಿವೆ.. ಸ್ಟಾರ್ ಗಳ ಸಿನಿಮಾಗಲೂ , ಬಿಗ್ ಬಜೆಟ್ ಸಿನಿಮಾಗಳು ಫೇಲ್ ಆಗಿವೆ… ಬಾಲಿವುಡ್ ಮುಂದೆ ಸೌತ್ ಸಿನಿಮಾಗಳು ಆರ್ಭಟಿಸುತ್ತಿವೆ.. RRR , ಪುಷ್ಪ , KGF 2 , ವಿಕ್ರಮ್ , ಚಾರ್ಲಿ , ವಿಕ್ರಾಂತ್ ರೋಣ , ಸೀತಾ ರಾಮಂ ಮುಂದೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿವೆ.. ಈಗೇನಿದ್ರೂ ಸೌತ್ ದೇ ಅಬ್ಬರವಾಗಿದೆ..
ಆದ್ರೂ ಒಂದಷ್ಟು ನಿರೀಕ್ಷೆ ಇಟ್ಟುಕೊಂಡು ತೆರೆಗೆ ಅಪ್ಪಳಿಸಿರುವ ಸಿನಿಮಾ ಬಾಲಿವುಡ್ ಬಹುನಿರೀಕ್ಷೆಯ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತಾದ್ರೂ ಸಿನಿಮಾ ನೀರಸ ಪ್ರದರ್ಶನ ಕಂಡಿದೆ.. 10 ವರ್ಷಗಳಲ್ಲೇ ಅಮಿರ್ ಖಾನ್ ಅವರ ಸಿನಿಮಾವೊಂದು ಮೊದಲ ದಿನ ಇಷ್ಟು ಕಡಿಮೆ ಮಟ್ಟದ ಗಳಿಕೆ ಕಂಡಿದೆ ಎನ್ನಲಾಗ್ತಿದೆ…
ಆರಂಭಿಕ ದಿನದಲ್ಲಿ 15-20 ಶೇಕಡಾ ಆಕ್ಯುಪೆನ್ಸಿಯನ್ನು ದಾಖಲಿಸಿದೆ ಎಂದು ವರದಿಯಾಗಿದೆ. ಅಮೀರ್ ಖಾನ್-ಕರೀನಾ ಕಪೂರ್ ಅಭಿನಯದ ಚಿತ್ರವು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ.
ಆಗಸ್ಟ್ 11 ರಂದು ಥಿಯೇಟರ್ಗಳಿಗೆ ಆಗಮಿಸಿದ ಅಮೀರ್ ಖಾನ್-ಕರೀನಾ ಕಪೂರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಈ ಚಲನಚಿತ್ರವು ಟಾಮ್ ಹ್ಯಾಂಕ್ಸ್ ನಟಿಸಿದ 1994 ರ ಹಾಲಿವುಡ್ ವೈಶಿಷ್ಟ್ಯವಾದ ಫಾರೆಸ್ಟ್ ಗಂಪ್ನ ಅಧಿಕೃತ ರೀಮೇಕ್ ಆಗಿದೆ..
ಅಂದ್ಹಾಗೆ ಸಿನಿಮಾ ಸೋಲಿಗೆ ಕರೀನಾ ಕಾರಣ ದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.. ಎಲ್ಲರೂ ಕರೀನಾರಿಂದಲೇ ಸಿನಿಮಾ ಸೋಲುತ್ತಿದೆ ಎನ್ನುತ್ತಿದ್ದಾರೆ.. ಅಂದ್ಹಾಗೆ ಬಾಯ್ಕಾಟ್ ಗೆ ಕಾರಣ ಅಮಿರ್ , ಕರೀನಾ ಈ ಹಿಂದೆ ನೀಡಿದ್ದ ಹೇಳಿಕೆಗಳು..
#Boycott Bollywood , #Boycott Amir khan , #Boycott Lal singh chadda ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ..
ಅಮೀರ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದು ವ್ಯರ್ಥ. ಈ ಆಚರಣೆ ಅಪ್ರಯೋಜಕ. ಇದರ ಬದಲು ಬಡ ಮಕ್ಕಳಿಗೆ ಅದೇ ದುಡ್ಡಿನಲ್ಲಿ ಸಹಾಯ ಮಾಡಬಹುದು ಎಂದಿದ್ದರು. ಇದೇ ಹೇಳಿಕೆ ಈಗ ಮತ್ತೆ ವೈರಲ್ ಆಗ್ತಿದೆ.. ಅಷ್ಟೇ ಅಲ್ಲ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನೋಡುವುದು ವ್ಯರ್ಥ. ಈ ಸಿನಿಮಾದ ನೋಡುವುದರ ಬದಲಾಗಿ ಅದೇ ದುಡ್ಡಿನಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡಬಹುದು ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿತ್ತು..
ಆದ್ರೆ ಸಿನಿಮಾ ರಿಲೀಸ್ ಹಿಂದಿನ ದಿನ ಅಮಿರ್ ಖಾನ್ ಈ ಬಗ್ಗೆ ಕ್ಷಮೆಯಾಚಿಸಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು.. ಆದ್ರೆ ಕರೀನಾ ಮಾತ್ರ ಶಾಕಿಂಗ್ ಹೇಳಿಕೆ ನೀಡಿ ಮತ್ತಷ್ಟು ನೆಟ್ಟಿಗರನ್ನ ರೊಚ್ಚಿಗೇಳಿಸಿದ್ದರು.. ಈ ಬಾಯ್ಕಾಟ್ ಗೆಲ್ಲ ತಲೇನೇ ಕೆಡಿಸಿಕೊಳ್ಳಬಾರದು ಎಂದಿದ್ದರು.. ತಾನು ನಟಿಸುವ ಸಿನಿಮಾಗಳನ್ನ ನೋಡಲೇ ಬೇಡಿ ಎಂದು ಪ್ರೇಕ್ಷಕರ ಮೇಲೆ ಕಿಡಿ ಕಾರಿದ್ದರು.
ನಮ್ಮಂತಹ ನೆಪೋಟಿಸಂ ಕಲಾವಿದರನ್ನು ಪ್ರೇಕ್ಷಕರೇ ಹುಟ್ಟು ಹಾಕಿದ್ದಾರೆ. ನಮ್ಮ ಸಿನಿಮಾ ಅವರು ನೋಡೋದೇ ಬೇಡ ಎಂದಿದ್ದರು..
ಇವರ ಇದೇ ಹೇಳಿಕೆಯೇ ಸಿನಿಮಾ ಪಾಲಿಗೆ ಮುಳುವಾಯ್ತಾ ಅನ್ನೋ ಚರ್ಚೆ ನಡೆಯುತ್ತಿದೆ..