Prabhas : ಪ್ರಭಾಸ್ ಮದುವೆಯ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಸೆಲೆಬ್ರೆಟಿ ಜ್ಯೋತಿಷಿ..!!
ಬಾಹುಬಲಿ ಖ್ಯಾತಿಯ ಭಾರತದ ಬಿಗ್ ಸ್ಟಾರ್ ಪ್ರಭಾಸ್ ಗೆ ಈಗ ಸುಮಾರು 42 ವರ್ಷ ಆದ್ರೂ ಇನ್ನೂವರೆಗೂ ಮದುವೆಯಾಗದೇ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಪ್ರಭಾಸ್ ಸದ್ಯ ಭಾರತದ ಮೋಸ್ಟ್ ಡಿಸೈರೆಬಲ್ ಬ್ಯೂಚ್ಯುಲರ್…
ಪ್ರಸ್ತುತ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಮಾರ್ಚ್ 11 ರಂದು ಅವರ ರಾಧೆ ಶ್ಯಾಮ್ ಸಿನಿಮಾ ವಿಶ್ವಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ..
ಈ ನಡುವೆ ಪ್ರಭಾಸ್ ಮದುವೆ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆಗಳನ್ನ ಮಾಡುತ್ತಿದ್ದಾರೆ.. ಮೋಸ್ಟ್ ಹ್ಯಾಂಡ್ಸಮ್ ಡಿಸೈರೆಬಲ್ ಮೆಸನ್ ಪ್ರಭಾಸ್ ಮದುವೆಯಾಕಾಗಿಲ್ಲ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡೋದು ಸಹಜ..
ಅದಕ್ಕೆ ಇತ್ತೀಚೆಗೆ ಪ್ರಭಾಸ್ ಉತ್ತರಿಸಿದ್ದರು ಕೂಡ.. ಸಂದರ್ಶವೊಂದ್ರಲ್ಲಿ ಈ ಬಗ್ಗೆ ಮಾತನಾಡಿದ್ದ ಪ್ರಭಾಸ್ , “ ನಾನು ಹೋದಲ್ಲೆಲ್ಲಾ ನನ್ನ ಮದುವೆಯ ಬಗ್ಗೆ ಪ್ರಶ್ನೆಗಳು ಬರುತ್ತವೆ.. ಆದ್ರೆ ಇದರಿಂದ ನನಗೆ ಬೇಸರವಾಗೋದಿಲ್ಲ.. ಯಾಕಂದ್ರೆ ಜನರು ನನ್ನ ಮದುವೆಯ ಬಗ್ಗೆ ಕೇಳಿದಾಗ ನಾನು ಕಿರಿಕಿರಿಗೊಳ್ಳುವುದಿಲ್ಲ. ಇದು ಅವರ ಕಾಳಜಿಯನ್ನ ತೋರುತ್ತೆ.. ಅದನ್ನ ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಸಾಕಷ್ಟು ಸಹಜ ಮತ್ತು ಸಾಮಾನ್ಯ ಪ್ರಶ್ನೆಯಾಗಿದೆ. ನಾನು ಅವರ ಸ್ಥಾನದಲ್ಲಿದ್ದರೆ, ನಾನು ಸಹ ಕಾಳಜಿ ವಹಿಸುತ್ತೇನೆ” ಎಂದಿದ್ದರು..
ಜ್ಯೋತಿಷಿ ಶಾಕಿಂಗ್ ಭವಿಷ್ಯ..!!
ಆದ್ರೀಗ ಅವರ ಮದುವೆ ಬಗ್ಗೆ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.. ಪ್ರಭಾಸ್ ಮದುವೆ ಆದರೆ ಅವರ ಪರಿಸ್ಥಿತಿ ದಿವಂಗತ ನಟ ಉದಯ್ ಕಿರಣ್ ರಂತಾಗುತ್ತದೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ.. ಅಂದ್ಹಾಗೆ ಇವರು ನುಡಿದಿರುವ ಕೆಲ ಭವಿಷ್ಯಗಳು ಸತ್ಯಾವಾಗಿವೆ.. ಸಮಂತಾ ನಾಗಚೈತನ್ಯ ದೂರಾಗ್ತಾರೆ , ರಶ್ಮಿಕಾ ಸ್ಟಾರ್ ಆಗ್ತಾರೆ ಅಲ್ಲದೇ 2024 ರ ನಂತರ ಅವರ ಲಕ್ ಕೂಡ ಮುಗಿಯುತ್ತೆ ಎಂದಿದ್ದಾರೆ.. ಸಮಂತಾ ನಾಗಚೈತನ್ಯ ವಿಚಾರದಲ್ಲಿ ಇವರು ಹೇಳಿದ್ದ ಮಾತು ಅಕ್ಷರಸಹ ನಿಜವಾಗಿದೆ..
ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ನಟ ಪ್ರಭಾಸ್ ಜಾತಕವನ್ನು ವಿವರಿಸಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲಕ್ಷದಲ್ಲಿ ಒಬ್ಬರಿಗೆ ಇಂತಹ ಜಾತಕ ಇರುತ್ತದೆ. ಸೂರ್ಯ ಚಂದ್ರ ಶುಕ್ರ ಬುಧ ಗ್ರಹಗಳ ಕಾಂಬಿನೇಷನ್ ನಿಂದ ಪ್ರಭಾಸ್ಗೆ ರಾಜಯೋಗವಿದೆ. ಹಾಗಾಗಿ ಸಾಕಷ್ಟು ಖ್ಯಾತಿ ಗಳಿಸುತ್ತಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಸರು ಬರುತ್ತದೆ. ಆದರೆ ಮತ್ತೆರಡು ಗ್ರಹಗಳಿಂದ ಪ್ರಭಾಸ್ಗೆ ಸಮಸ್ಯೆ ಎದುರಾಗುತ್ತದೆ ಎಂದಿದ್ದಾರೆ. ಪ್ರಪಂಚದಲ್ಲಿ ಕೋಟಿ ಜನರಲ್ಲಿ ಒಬ್ಬರದು ಇಂತಹ ಜಾತಕ ಇರುತ್ತದೆ. ನಾಲ್ಕು ಗ್ರಹಗಳ ಕಾರಣದಿಂದ ರಾಜಯೋಗ ಸಿಕ್ಕರೂ ಗುರು-ಶನಿ ಗ್ರಹಗಳ ಕಾರಣದಿಂದ ಆ ರಾಜಯೋಗವನ್ನು ಅನುಭವಿಸಲು ಸಾಧ್ಯವಾಗದಂತೆ ಆಗುತ್ತದೆ. ಒಳ್ಳೆ ಯೋಗ ಬಂದಾಗಲೇ ಪ್ರಭಾಸ್ಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಕಿಡ್ನಿ, ಲಿವರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಪ್ರಭಾಸ್ಗೆ ಎದುರಾಗುತ್ತದೆ ಎಂದಿದ್ದಾರೆ..
ಜ್ಯೋತಿಷಿ ಹೇಳಿರುವ ಮಾತುಗಳು ಇದೀಗ ಸಾಕಷ್ಟು ವೈರಲ್ ಆಗ್ತಿದೆ..
ಅಂದ್ಹಾಗೆ ಜ್ಯೋತಿಷಿಗಳು ಈ ಮಾತನ್ನ ಹೇಳಿರುವುದು 5 ವರ್ಷಗಳ ಹಿಂದೆ… ಆದ್ರೆ ಈಗ ಈ ವಿಡಿಯೋ ವೈರಲ್ ಆಗ್ತಿದೆ..
ಪ್ರಭಾಸ್ ಜಾತಕದಲ್ಲಿ ಮದುವೆಗೆ ಸಂಬಂಧಿಸಿ ಸಮಸ್ಯೆ ಇದೆ. ಮದುವೆ ಆಗದೇ ಇರುವುದು, ಮದುವೆ ತಡವಾಗುವುದು, ಅಥವಾ ಮದುವೆ ನಂತರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಮದುವೆ ನಂತರ ಗಂಡ- ಹೆಂಡತಿ ನಡುವೆ ಸಮಸ್ಯೆ ಶುರುವಾಗಬಹುದು. ಆರೋಗ್ಯ ಸಮಸ್ಯೆ ಮುಖ್ಯವಾಗಿ ಕಾಡಬಹುದು ಎಂದಿದ್ದಾರೆ.
ಅಲ್ಲದೇ ಹುಡುಗಿಯರು ಯಾರನ್ನು ಹೆಚ್ಚು ಇಷ್ಟಪಡುತ್ತಾರೋ ಅಂತಹ ವ್ಯಕ್ತಿ ಹೆಚ್ಚು ದಿನ ಚಿತ್ರರಂಗದಲ್ಲಿ ಇರುವ ಉದಾಹರಣೆ ಇಲ್ಲ. ಅರವಿಂದ್ ಸ್ವಾಮಿ ಇರಬಹುದು, ಉದಯ್ ಕಿರಣ್ ಇರಬಹುದು ಹೀಗೆ ಬಹಳಷ್ಟು ಜನ ಇದ್ದಾರೆ. ಪ್ರಭಾಸ್ ಅಂದರೆ ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ಇಷ್ಟ. ಹಾಗಾಗಿ ಜಾತಕದಲ್ಲಿ ಈ ಸಮಸ್ಯೆ ಇರುತ್ತದೆ. ಇದಕ್ಕೆ ಪರಿಹಾರ ಮಾಡಿಸಿಕೊಂಡರೆ ಪ್ರಭಾಸ್ ಗೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ಪ್ರಭಾಸ್ ಅವರು ಸಲಾರ್ , ಆದಿಪುರುಷ್ ನಂತಹ ಬಿಗ್ ಬೆಜೆಟ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..