KGF ನ ಮೂಲಕ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಪವರ್ ಫುಲ್ ಛಾಪನ್ನ ಮೂಡಿಸಿರುವ ಹೊಂಬಾಳೆ ಫಲಮ್ಸ್ ಸಂಸ್ಥೆ ಸದ್ಯ ಕೆಲ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಿದೆ… ಸಲಾರ್ , ಕಾಂತಾರಾ ಇನ್ನೂ ಹಲವು ಸಿನಿಮಾಗಳು ರಿಲೀಸ್ ಆಗಬೇಕಿವೆ..
ಇದೆಲ್ಲದರ ನಡುವೆಯೇ ಸಂತೋಶ್ ಆನಂದ್ ರಾಮ್ ಅವರ ಜೊತೆಗೆ ಮತ್ತೊಂದು ಸಿನಿಮಾ ಘೋಷಿಸಿದೆ ಹೊಂಬಾಳೆ ಫಿಲಮ್ಸ್..
ಅಂದ್ಹಾಗೆ ಸೂಪರ್ ಹಿಟ್ ಸಿನಿಮಾ ಅಪ್ಪು ಅಭಿನಯದ ರಾಜಕುಮಾರ , ಯುವರತ್ನ ಸೇರಿದಂತೆ ಈವರೆಗೂ 3 ಸಿನಿಮಾಗಳಿಗೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಆಕ್ಷನ್ ಕಟ್ ಹೇಳಿರುವ ಸಂತೋಶ್ ಆನಂದ್ ರಾಮ್ ಅವರು ಈಗ 5 ನೇ ಸಿನಿಮಾ ಮಾಡುವುದಾಗಿ ಕಿರಗಂದೂರು ಹೇಳಿದ್ದಾರೆ.
ಸಂತೋಷ್ ಆನಂದ್ ರಾಮ್. ನಾಲ್ಕನೇ ಸಿನಿಮಾ ಕೂಡ ಇದೇ ಬ್ಯಾನರ್ ನಲ್ಲೇ ಸೆಟ್ಟೇರಲಿ. ಈ ಸಿನಿಮಾ ಇನ್ನೂ ಚಿತ್ರೀಕರಣ ಪ್ರಾರಂಭಿಸುವ ಮುನ್ನವೇ ಸಂತೋಷ್ ಆನಂದ್ ರಾಮ್ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಘೋಷಣೆ ಮಾಡಿದ್ದಾರೆ..
ಅಂದ್ಹಾಗೆ ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೂ ಇವರ ನಿರ್ದೇಶನವಿದ್ದು , ಸಿನಿಮಾ ಇನ್ನೂ ತೆರೆ ಕಾಣಬೇಕಿದೆ.. ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಗಾಗಿ ಸಂತೋಷ್ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದು ಇನ್ನೂ ಸೆಟ್ಟೇರಬೇಕಿದೆ. ಇದಾದ ನಂತರ ಹೊಂಬಾಳೆ ಬ್ಯಾನರ್ ನಡಿ ಮತ್ತೊಂದು ಸಿನಿಮಾಗೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಲಿದ್ದು , ಈ ಸಿನಿಮಾಗೆ ಶಿವಣ್ಣ ನಾಯಕ ಎಂದು ಹೇಳಲಾಗ್ತಿದೆ..