Kollywood : ತಮಿಳಿನ ಖ್ಯಾತ ನಿರ್ದೇಶಕ ಲಿಂಗುಸಾಮಿಗೆ 6 ತಿಂಗಳ ಜೈಲು ಶಿಕ್ಷೆ..!!!
ಸೌತ್ ಸಿನಿಮಾರಂಗದ ಚಿರಪರಿಚಿತ , ತಮಿಳಿನ ಟಾಪ್ ನಿರ್ದೇಶಕರ ಪೈಕಿ ಒಬ್ಬರಾದ ಲಿಂಗುಸಾಮಿಯನ್ನ ಪ್ರಕರಣ ಒಂದರಲ್ಲಿ 6 ತಿಂಗಳುಗಳ ಕಾಲ ಜೈಲಿಗೆ ಕಳುಹಿಸಲಾಗಿದೆ…
ಹೌದು..! ಇವರು ಕೆಲ ದಿನಗಳ ಹಿಂದೆ ‘ದಿ ವಾರಿಯರ್’ ಸಿನಿಮಾ ಮಾಡಿದ್ದರು.. ಈ ಸಿನಿಮಾ ತಕ್ಕ ಮಟ್ಟಿಗೆ ಯಶಸ್ಸನ್ನೂ ಕಂಡಿತ್ತು..
ಇವರು ತಮಿಳಿನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಪೈಯ್ಯಾ , ಸಂಡಕೋಳಿ, ಭೀಮ , ವೇಟ್ಟೈ , ಅಂಜಾನ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿದ್ದಾರೆ..
ಆದ್ರೆ ಈ ನಿರ್ದೇಶಕರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು.. ಲಿಂಗಸಾಮಿ ಹಾಗೂ ಅವರ ಸಹೋದರ ಸ್ಟಾರ್ ನಿರ್ಮಾಪಕ ಸುಭಾಷ್ ಚಂದ್ರ ಬೋಸ್ ವಿರುದ್ಧವೂ ಕೇಸ್ ದಾಖಲಾಗಿದೆ.
ಇದೇ ಪ್ರಕರಣದಲ್ಲಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಿರ್ದೇಶಕರಿಗೆ 6 ತಿಂಗಳು ಜೈಲು ಶಿಕ್ಷೆಯನ್ನ ವಿಧಿಸಿದೆ.
ಎನ್ನಿ ಏಳು ನಾಲ್ ಸಿನಿಮಾ ಮಾಡಲು ನಿರ್ದೇಶಕ ಲಿಂಗಸಾಮಿ ಹಾಗೂ ಅವರ ಸಹೋದರ ಸುಭಾಷ್ ಚಂದ್ರ ಬೋಸ್ ಪಿವಿಪಿ ಕ್ಯಾಪಿಟಲ್ ಎಂಬ ಕಂಪನಿಯಿಂದ 1.03 ಕೋಟಿ ರೂ. ಸಾಲ ಪಡೆದಿದ್ದರು. ಆ ಸಾಲವನ್ನು ಇನ್ನೂವರೆಗೂ ತೀರಿಸಿಲ್ಲ. ಅವರು ಕೊಟ್ಟಿದ್ದ 35 ಲಕ್ಷ ರೂಪಾಯಿ ಮೌಲ್ಯದ ಚೆಕ್ ಸಹ ಬೌನ್ಸ್ ಆಗಿದ್ದ ಹಿನ್ನೆಲೆ ದೂರು ದಾಖಲಿಸಲಾಗಿತ್ತು..
ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಲಿಂಗುಸಾಮಿ ಹಾಗೂ ಸಹೋದರ ಸುಭಾಷ್ ಚಂದ್ರ ಬೋಸ್ ಇಬ್ಬರೂ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಜೈಲು ಶಿಕ್ಷೆಯ ಜೊತೆಗೆ 10 ಸಾವಿರ ದಂಡವನ್ನು ಕಟ್ಟಿದ್ದಾರೆ.
ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್
ಸೋಷಿಯಲ್ ಮೀಡಿಯಾ ಕ್ವೀನ್, ಸೋನು ಶ್ರೀನಿವಾಸ್ ಗೌಡ ಇದೀಗ ಬಿಗ್ ಬಾಸ್ ಓಟಿಟಿಯಲ್ಲಿ ಮಿಂಚ್ತಿದ್ದಾರೆ. ಸಾಕಷ್ಟು ವಿಚಾರಗಳಿಂದ ನೋಡುಗರ ಗಮನ ಸೆಳೆದಿರುವ ಸೋನು ಲೈಫ್ ಸ್ಟೋರಿ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ.
ಟಿಕ್ ಟಾಕ್, ರೀಲ್ಸ್ ಮೂಲಕ ಜನಮನ ಗೆದ್ದಿರುವ ಸೋನು ಈಗ ಬಿಗ್ ಬಾಸ್ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಸೋನು ಸೋಷಿಯಲ್ ಮೀಡಿಯಾದಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ದಿನದಿಂದ ದಿನಕ್ಕೆ ಇವರ ಮೇಲಿನ ಕ್ರೇಜ್ ಜಾಸ್ತಿ ಆಗುತ್ತಿದೆ. ಹೀಗಿರುವಾಗ ಸೋನು ಕುರಿತ ವಿಚಾರವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸೋನು ಅವರ ಬಯೋಪಿಕ್ ತೆರೆಯ ಮೇಲೆ ತರಲು ಕನ್ನಡದ ಹೆಸರಾಂತ ನಿರ್ಮಾಪಕರೊಬ್ಬರು ಸಾಥ್ ನೀಡಿದ್ದಾರೆ.
ಸೋನು ಜೀವನಾಧಾರಿತ ಚಿತ್ರ ಎಳೆ ಎಳೆಯಾಗಿ ತೆರೆಗೆ ಮೇಲೆ ತೋರಿಸಲು ನಿರ್ಮಾಪಕರೊಬ್ಬರು ಮನಸ್ಸು ಮಾಡಿದ್ದಾರೆ. ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಸ್ವತಃ ಸೋನು ಅವರೇ ತಮ್ಮ ಪಾತ್ರ ಮಾಡಲಿದ್ದಾರೆ. ನೆಗೆಟಿವ್ ವಿಚಾರಗಳಿಂದಲೇ ಬಿಗ್ ಬಾಸ್ ಮನೆಯಲ್ಲಿ ಸೌಂಡ್ ಮಾಡುತ್ತಿರುವ ಸೋನು, ಟಾಪ್ ೩ನಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಓಟಿಟಿ ಗೆಲುವಿನ ಕಿರೀಟ ಯಾರಿಗೆ ಸೇರಲಿದೆ ಎಂಬುದನ್ನ ಕಾದುನೋಡಬೇಕಿದೆ.