Brahmastra : ಬಾಳೆ ಎಲೆ ಊಟ ಮಾಡಿದ ನಾಗಾರ್ಜುನ್ , ರಣಬೀರ್, ರಾಜಮೌಳಿ – ರಣಬೀರ್ ಮಾತ್ರ ಟ್ರೋಲ್ ಆಗಿದ್ಯಾಕೆ..??
ಒಂದು ಕಾಲದಲ್ಲಿ ಭಾರತೀಯ ಸಿನಿಮಾರಂಗ ಅಂದ್ರೆ ಬಾಲಿವುಡ್ ಮಾತ್ರವೇ , ಮಿಕ್ಕೆಲ್ಲಾ ಸಿನಿಮಾರಂಗಗಳು ಲೆಕ್ಕಕ್ಕೆ ಇಲ್ಲ ಎಂಬಂತೆ ಮೆರೆದಿದ್ದ ಬಾಲಿವುಡ್ ಸೌತ್ ಸಿನಿಮಾರಂಗವನ್ನ ಕಡೆಗಣಿಸಿತ್ತು.. ಆದ್ರೆ ಇದೇ ಬಾಕಿವುಡ್ ಸೌತ್ ಸಿನಿಮಾಗಳ ರೀಮೇಕ್ ಮಾಡೋದಕ್ಕೆ ಮಾತ್ರ ಮುಜುಗರ ಪಟ್ಟುಕೊಳ್ತಿರಲಿಲ್ಲ..
ಆದ್ರೆ ಇದೇ ಬಾಲಿವುಡ್ ಪಾಲಿಗೆ ಮುಳುವಾಗಿದ್ದು.. ಅದ್ಯಾವಾಗ ಬಾಲಿವುಡ್ ಬರೀ ರೀಮೇಕ್ ಸಿನಿಮಾಳನ್ನೇ ಮಾಡಕು ಶುರು ಮಾಡಿತೋ ಆಗಿನಿಂದ ಜನರು ಒರಿನಾಲಿಟಿ ಕಡೆಗೆ ವಾಲಲು ಆರಂಭಿಸಿದ್ರು.. ಅಂದ್ರೆ ಸೌತ್ ಸಿನಿಮಾಗಳು ಹಿಂದಿಗೆ ಡಬ್ಬಿಂಗ್ ಆಗಕಲು ಶುರುವಾಗಿ ಜನರು ಆ ಕಡೆ ಹೆಚ್ಚು ವಾಲಿದ್ರು…
ಈ ಹೊತ್ತಲ್ಲೇ ಪ್ಯಾನ್ ಇಂಡಿಯನ್ ಕಿಚ್ಚು ಹೊತ್ತಿಸಿದ್ದು ರಾಜಮೌಳಿ ಅವರ ಬಾಹುಬಲಿ , ಬಾಹುಬಲಿ 2.. ಈ ಸಿನಿಮಾಗಳು ಸೆನ್ಷೇಷನ್ ಕ್ರಿಯೇಟ್ ಮಾಡಿ ಬಾಲಿವುಡ್ ನ ಬೆಚ್ಚಿಸಿತ್ತು.. ಈ ಸಿನಿಮಾದ ಕಲೆಕ್ಷನ್ ಇದುವರೆಗೂ ಯಾರಿಂದಲೂ ಬೀಟ್ ಮಾಡಲಾಗಿಲ್ಲ.. ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ್ದು ಬಾಹುಬಲಿ.. ಆನಂತರ ದು ರೇಂಜ್ ಗೆ ಅಬ್ಬರಿಸಿ ಹಿಂದಿ ಬೆಲ್ಟ್ ನಲ್ಲಿ ಬಾಲಿವುಡ್ ಹೀರೋ ಸಿನಿಮಾಗಳನ್ನ ಡಮ್ಮಿ ಮಾಡಿದ್ದು ಪುಷ್ಪ.. ನಂತರ ಅಬ್ಬರಿಸಿದ್ದ RRR ಆ ನಂತರ ಇಡೀ ದೇಶಾದ್ಯಂತ ಸಂಚಲ ಸೃಷ್ಟಿ ಮಾಡಿದ್ದ ರಾಕಿ ಭಾಯ್.. ಕೆಜಿಎಫ್ 2 ಹವಾ ಯಾವ ಲೆವೆಲ್ ನಲ್ಲಿತ್ತು ಗೊತ್ತೇ ಇದೆ.. ಆ ನಂತರ ಚಾರ್ಲಿ , ವಿಕ್ರಮ್ ಈಗ ವಿಕ್ರಾಂತ್ ರೋಣ ಅಬ್ಬರಿಸುತ್ತಿದೆ..
ಅಂದ್ಹಾಗೆ ಲಾಲ್ ಸಿಂಗ್ ಚಡ್ಡಾ ಬಾಲಿವುಡ್ ಗೆ ಹೊಸ ಚೈತನ್ಯ ತುಂಬುತ್ತೆ ಬಾಕ್ಸ್ ಆಫೀಸ್ ನಲ್ಲಿ ಇತಿಹಾಸ ಬರೆಯಲಿದೆ ಎಂಬೆಲ್ಲ ಲೆಕ್ಕಾಚಾರಗಳಿದ್ದವು.. ಆ ಲೆಕ್ಕಾಚಾರಗಳೆಲ್ಲವೂ ಇದೀಗ ತಲೆ ಕೆಳಗಾಗಿವೆ..
ಅಂದ್ಹಾಗೆ ಬಾಲಿವುಡ್ ಪಾಲಿಗೆ ಆಶಾಕಿರಣದಂತೆ ಕಾಣಿಸುತ್ತಿರುವುದು ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ.. ಈ ಸಿನಿಮಾ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಬರುತ್ತಿದೆ.. ಹಿಂದಿ , ಕನ್ನಡ , ತಮಿಳು , ತೆಲುಗು , ಮಲಯಾಳಂ ನಲ್ಲಿ ಈ ಬಿಗ್ ಬಜೆಟ್ ಸಿನಿಮಾ ಬರುತ್ತಿದ್ದು , ಸಿನಿಮಾದ ಟ್ರೇಲರ್ ಈಗಾಗಲೇ ಕ್ರೇಜ್ ಹೆಚ್ಚಿಸಿದೆ..
ಬ್ರಹ್ಮಾಸ್ತ್ರ ಸೆಪ್ಟೆಂಬರ್ 9 ಕ್ಕೆ ರಿಲೀಸ್ ಆಗಲಿದೆ.. ಸಿನಿಮಾ ತಂಡ , ಭಿನ್ನ ವಿಭಿನ್ನವಾಗಿ ಭರ್ಜರಿ ಪ್ರಚಾರ ಮಾಡುತ್ತಿದೆ.. ರಣಬೀರ್ ಕಪೂರ್ , ಆಲಿಯಾ ಭಟ್ , ನಾಗಾರ್ಜುನ್ , ಅಮಿತಾಬ್ , ಮೌನಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಫ್ಯಾಂಟಸಿ ಥ್ರಿಲ್ಲರ್ ಸಿನಿಮಾಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ..
ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವು ಸೆಪ್ಟೆಂಬರ್ 9 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದರೊಂದಿಗೆ ನಿರ್ದೇಶಕ ಎಸ್ ಎಸ್ ರಾಜಮೌಳಿ ಈ ಸಿನಿಮಾವನ್ನು ದಕ್ಷಿಣ ಭಾರತದಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.
View this post on Instagram
ಈ ಚಿತ್ರದ ಪ್ರಚಾರಕ್ಕಾಗಿ ನಾಗಾರ್ಜುನ, ರಣಬೀರ್ ಕಪೂರ್ ಮತ್ತು ರಾಜಮೌಳಿ ದಕ್ಷಿಣದ ರಾಜ್ಯಗಳ ವಿವಿಧ ನಗರಗಳಲ್ಲಿ ಬಿರುಸಿನ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಚೆನೈನಲ್ಲಿ ಪ್ರಚಾರ ಕಾರ್ಯಕ್ರಮದ ನಂತರ ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಚಿತ್ರತಂಡ ಉತ್ತರಿಸಿದೆ. ನಂತರ ಈ ಮೂವರು ತಾರೆಯರು ಚೆನ್ನೈನ ರೆಸ್ಟೋರೆಂಟ್ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ದಕ್ಷಿಣ ಭಾರತೀಯ ಶೈಲಿಯ ಬಾಳೆ ಎಲೆ ಊಟ ನಟರು ಸೇವಿಸಿದ್ದಾರೆ. ಇದಕ್ಕೆ ಸಂಬಂದಿಸಿದ ವಿಡಿಯೋ ಸೋಶಿಯಲ್ ಮಿಡಿಯಾ ದಲ್ಲಿ ವೈರಲ್ ಆಗಿದೆ.
ಆದ್ರೆ ಇಲ್ಲೂ ರಣಬೀರ್ ನ ಟ್ರೋಲಿಗರು ಬಿಟ್ಟು.. ರಣಬೀರ್ ಟೀಕೆಗೆ ಗುರಿಯಾಗಿದ್ದಾರೆ..
ಬಾಳೆ ಎಲೆಯಲ್ಲಿ ನಾಗಾರ್ಜುನ ಮತ್ತು ರಾಜಮೌಳಿ ನ್ಯಾಚುರಲ್ ಆಗಿ ಊಟ ಮಾಡುತ್ತಿರುವಾಗ ರಣಬೀರ್ ಕೊಂಚ ಮುಜುಗರಕ್ಕೀಡಾಗಿರುವುದು ಕಂಡುಬಂದಿದೆ. ಪ್ರಚಾರಕ್ಕಾಗಿ ಮಾತ್ರ ರಣಬೀರ್ ಊಟ ಮಾಡುತ್ತಿದ್ದಾರೆ , ಬಾಯ್ಕಾಟ್ ಗೆ ಬಲಿಯಾಗ್ಬಾರದು ಅಂತ ಹೀಗೆಲ್ಲಾ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಗಳನ್ನ ಮಾಡ್ತಿದ್ದಾರೆ..