BBK9 : ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಕಿಚ್ಚ..??
ಕಿಚ್ಚ ಸುದೀಪ್ ಅಂದ್ರೆ ಬಿಗ್ ಬಾಸ್ ಅಂದ್ರೆ ಕಿಚ್ಚ ಸುದೀಪ್.. ಕಂಟೆಸ್ಟೆಂಟ್ ಗಳ ಆಟ , ವಾರ ಪೂರ್ತಿ ಪ್ರಸಾರವಾಗೋ ಎಪಿಸೋಡ್ಸ್ ನ ಷ್ಟ ಪಟ್ಟು ನೋಡ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ವಾರಾಂತ್ಯದಲ್ಲಿ ಮಾತ್ರ ಕಿಚ್ಚನ ನಿರೂಪಣೆ ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ…
ಕಿಚ್ಚ ಸುದೀಪ್ ಅವರ ಜಾಗದಲ್ಲಿ ಮತ್ತೊಬ್ಬರನ್ನ ಮ್ಯಾಜಿನ್ ಮಾಡಿಕೊಳ್ಳುವುದೂ ಕಷ್ಟ..
ಮೊದಲನೇ ಸೀಸನ್ ಇಂದ 9 ನೇ ಸೀಸನ್ ವರೆಗೂ ಕಿಚ್ಚ ಸುದೀಪ್ ಅವರೇ ಎಲ್ಲಾ ಸೀಸನ್ ಗಳ ನಿರೂಪಣೆ ಮಾಡಿದ್ದು , ಕಿಚ್ಚ ಸುದೀಪ್ ಅವರು ವಾರಾಂತ್ಯದಲ್ಲಿ ಕಂಟೆಸ್ಟೆಂಗಳ ಕ್ಲಾಸ್ ತೆಗೆದುಕೊಳ್ಳುವುದು , ಕಾಲೆಳೆದು , ಬೈದು ಬುದ್ದಿ ಹೇಳುವ ಪರಿಯೂ ಜನರಿಗೆ ಇಷ್ಟ..
ಮೂರನೇ ವಾರದ ವೀಕೆಂಡ್ ಸಂಚಿಕೆಯಲ್ಲಂತೂ ಸುದೀಪ್ ಸಿಕ್ಕೊಪಟ್ಟೆ ಗರಂ ಗಿಬಿಟ್ಟಿದ್ದರು.. ಆರ್ಯವರ್ಧನ್ ಗುರೂಜಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಕೆಂಡಾಮಂಡಲರಾಗಿದ್ದರು.. ಅಲ್ದೇ ರೂಪೇಶ್ ಸಾನ್ಯಾಗೆ ಲಿಮಿಟ್ ಕ್ರಾಸ್ ಮಾಡಬೇಡಿ ಎಂದೂ ಎಚ್ಚರಿಸಿದ್ದರು..
ಇದೀಗ ಈ ವಾರ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು ಕಿಚ್ಚ ಸುದೀಪ್ ಬರುವುದಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು , ಅಭಿಮಾನಿಗಳಿಗೆ ಒಂದೆಡೆ ಬೇಸರ , ಶಾಕ್ ಆದ್ರೆ , ಯಾಕೆ ಬ ಪ್ರಶ್ನೆಗಳು , ಅನುಮಾನಗಳು ಉದಯಿಸಿವೆ..
ಹಾಗಂತ ಯಾರದ್ದೋ ಮೇಲೆ ಬೇಸರದಿಂದಾಗಲಿ , ಮತ್ತೊಂದು ಕಾರಣದಿಂದಾಗಲಿ ಕಿಚ್ಚ ಅಂದು ಗೈರಾಗೋದಿಲ್ಲ.. ಬದಲಾಗಿ ಅಕ್ಟೋಬರ್ 21 ರಂದು ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ( ಸಾಕ್ಷ್ಯ ಚಿತ್ರ) ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಇದ್ದು ಇಲ್ಲಿ ಕಿಚ್ಚ ಸುದೀಪ್ ಭಾಗವಹಿಸುತ್ತಿದ್ದಾರೆ.. ಅದೇ ಕಾರಣಕ್ಕೆ ಬಿಗ್ ಬಾಸ್ ನ ವಾರದ ಕಾರ್ಯಕ್ರಮದಲ್ಲಿ ಅವರು ಇರುವುದಿಲ್ಲ ಎನ್ನಲಾಗ್ತಿದೆ..