BiggBoss Kannada 9 : ‘ನನಗೂ ಒಬ್ಬ ಗೆಳೆಯ ಬೇಕು’ ಎಂದು ಗೋಳಾಡಿದ ಕಾವ್ಯಶ್ರೀ..!!!
ಬಿಗ್ ಬಾಸ್ ಕನ್ನಡ ಸೀಸನ್ 9 ನಾಲ್ಕನೇ ವಾರವೂ ಇನ್ನೇನು ಮುಗಿಯುತ್ತಾ ಬಂದಿದ್ದು , ಈ ಸೀಸನ್ ನಲ್ಲಿ ಮಂಗಳ ಗೌರಿ ಖ್ಯಾತಿಯ ಕಾವ್ಯಶ್ರೀ ಸಖತ್ ಹೈಲೇಟ್ ಆಗ್ತಿದ್ದು , ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ..
ಬಿಗ್ ಬಾಸ್ ಕನ್ನಡದ ಬಹುತೇಕ ಪ್ರತಿ ಸೀಸನ್ ನಲ್ಲಿ ಸ್ಪರ್ಧಿಗಳ ನಡುವಿನ ಪ್ರೀತಿ-ದ್ವೇಷದ ಸಂಬಂಧವು ಪ್ರೇಕ್ಷಕರ ಆಸಕ್ತಿಯನ್ನು ಸೆಳೆಯುತ್ತದೆ. ಅಂತೆಯೇ ಈ ಬಾರಿ ಅಮೂಲ್ಯ – ರಾಕೇಶ್ , ಸಾನ್ಯಾ ರೂಪೇಶ್ ನಡುವೆ ಲವ್ ಗಾಸಿಪ್ ಭಾರೀ ಸೌಂಡ್ ಮಾಡ್ತಿದೆ..
ಅಂತೆಯೇ ರಾಕೇಶ್ ಜೊತೆಗೆ ಕಾವ್ಯಶ್ರೀಗೆ ಆತ್ಮೀಯತೆ ಇದೆ..
ಆದ್ರೆ ಜೋಡಿಗಳ ನಡುವೆ ನನಗೆ ಯಾರೂ ಜೋಡಿ ಇಲ್ಲವಲ್ಲ ಎಂದು ಗೋಳಾಡಿದ್ದಾರೆ..
ಹೌದು..! ಕಾವ್ಯಶ್ರೀ, ರಾಕೇಶ್ ಜೊತೆಗೆ ಕೊಂಚ ಹೆಚ್ಚೇ ಆತ್ಮೀಯರಾಗಿದ್ದರಾದ್ರೆ ಇತ್ತೀಚೆಗೆ ರಾಕಿ ಅಮೂಲ್ಯ ನಡುವೆ ಆತ್ಮೀಯತೆ ಹೆಚ್ಚಾಗುತ್ತಿದ್ದು ಇದು ಎಲ್ಲೋ ಒಂದು ಕಡೆ ಕಾವ್ಯಶ್ರೀ ಅವರಿಗೆ ಬೇಸರ ಮೂಡಿಸಿದ್ಯಾ ಎನಿಸುತ್ತಿದೆ..
ರಾಕೇಶ್ ಅಮೂಲ್ಯ ಜೊತೆಗೆ ಓಡಾಡುತ್ತಿರುವುದನ್ನು ನೋಡಿ ತಮಾಷೆ ಮಾಡಿರುವ ಕಾವ್ಯಶ್ರೀ ಪಾರಿವಾಳಕ್ಕೆ ಕಾಳು ಹಾಕಿ ನನ್ನ ಅಣ್ಣನಂತೆ ಸಾಕಿದ್ದೆ. ಆದರೆ ಪಾರಿವಾಳ ಹಾರಿ ಹೋಯ್ತು ಅಕ್ಕ ಅಂತ ಅಂತ ನಾಟಕೀಯವಾಗಿ ಗೋಳಾಡುತ್ತಾ ಮನೆ ಸದಸ್ಯರ ಜೊತೆಗೆ ವೀಕ್ಷಕರನ್ನೂ ಮನರಂಜಿಸಿದ್ದಾರೆ ಕಾವ್ಯಶ್ರೀ..